ರೈತರು ಬೆಳೆದ ನಿಂಬೆಹಣ್ಣು ಮಾರಾಟ ಮಾಡಲು ಮಂಡ್ಯದಿಂದ ಬಂದಿದ್ದ ಯಡಿಯೂರಪ್ಪ ಇಂದು ರೈತರನ್ನೇ ಮಾರಲು ಹೊರಟಿದ್ದಾರೆ. ಹಿಂದೆ ಚೆಕ್ ಮೂಲಕ ಹಣ ಪಡೆದು ಜೈಲಿಗೆ ಹೋದರು. ಈಗ ಅವರ ಮಕ್ಕಳು ಆರ್ಟಿಜಿಎಸ್ ಮೂಲಕ ಹಣ ಪಡೆಯುತ್ತಿದ್ದಾರೆ. ಭ್ರಷ್ಟಾಚಾರದಲ್ಲಿ ತೊಡಗಿರುವ ಮುಖ್ಯಮಂತ್ರಿ ಕುಟುಂಬ ಬಡವರು, ದಲಿತರು, ಅಲ್ಪ ಸಂಖ್ಯಾತರ ದಮನ ಮಾಡುತ್ತಿದೆ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.