ಶಿವಮೊಗ್ಗ: ಶಾಸಕ ರಮೇಶ ಜಾರಕಿಹೊಳಿ ನಾಗ್ಪುರ ಆರ್ಎಸ್ಎಸ್ ಕಚೇರಿಗೆ ಭೇಟಿ ನೀಡಿರುವುದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಯಾರೂ ಬೇಕಾದರೂ ಅಲ್ಲಿಗೆ ಹೋಗಬಹುದು ಎಂದು ಈಶ್ವರಪ್ಪ ಹೇಳಿದರು.
ನಗರದಲ್ಲಿ ಬುಧವಾರ ಅವರು ಸುದ್ದಿಗಾರರ ಜತೆ ಮಾತನಾಡಿದರು. ಜಾರಕಿಹೊಳಿ ಅವರಷ್ಟೇ ಅಲ್ಲ. ಮಾಧ್ಯಮದವರೂ ಭೇಟಿ ಕೊಡಬಹುದು. ನಾಗ್ಪುರ ಕಚೇರಿ ಇರುವುದೆ ಎಲ್ಲರೂ ಸೇರಿಕೊಂಡು ದೇಶ ಸೇವೆ ಮಾಡಲು. ದೇಶಕ್ಕೆ, ಸಮಾಜಕ್ಕೆ ಒಳಿತು ಬಯಸುವ ಯಾರಾದರೂ ಅಲ್ಲಿಗೆ ಹೋಗಬಹುದು ಎಂದು ಪ್ರತಿಕ್ರಿಯಿಸಿದರು.
ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರು ಪಕ್ಷದ ಬೆಳವಣಿಗೆಗಳ ಕುರಿತು ಹೈಕಮಾಂಡ್ಗೆ ವರದಿ ಸಲ್ಲಿಸಿರುವ ವಿಷಯ ನನಗೆ ಖಚಿತವಾಗಿ ಗೊತ್ತಿಲ್ಲ. ಬಹುಶಃ ಕೊಟ್ಟಿರಬಹುದು ಎಂದುಕೊಂಡಿದ್ದೇನೆ ಎಂದರು.