<p><strong>ಸಾಗರ: </strong>ತಾಲ್ಲೂಕಿನ ಹೆಗ್ಗೋಡು ಗ್ರಾಮದ ಚರಕ ಸಂಸ್ಥೆಯು ಕಳೆದ ವರ್ಷ ಕೋವಿಡ್ ಕಾರಣಕ್ಕೆ ವಿಧಿಸಿದ್ದ ಲಾಕ್ಡೌನ್ನಿಂದಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿತ್ತು.</p>.<p>ಲಾಕ್ಡೌನ್ ಸಡಿಲವಾಗುತ್ತಿದ್ದಂತೆ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುವ ಹೆಣ್ಣುಮಕ್ಕಳಿಗೆ ಕೆರೆ ಹೂಳೆತ್ತುವ, ಮಣ್ಣಿನ ಕಟ್ಟಡ ನಿರ್ಮಾಣ ಮೊದಲಾದ ಕೆಲಸಗಳ ಮೂಲಕ ‘ಉದ್ಯೋಗ ಸೃಷ್ಟಿ’ ಮಾಡಲಾಗಿತ್ತು.</p>.<p>ಈ ವರ್ಷ ಲಾಕ್ಡೌನ್ ತಂದಿರುವ ಸಂಕಟವನ್ನು ಅತ್ಯಂತ ವ್ಯವಸ್ಥಿತ ರೀತಿಯಲ್ಲಿ ಎದುರಿಸಲು ಚರಕ ಯೋಜನೆ ರೂಪಿಸಿದೆ. ಶೇ 30ರಷ್ಟು ಮಾತ್ರ ಚರಕದ ಕೆಲಸಗಳು ನಡೆಯುತ್ತಿರುವ ಈ ಹೊತ್ತಿನಲ್ಲಿ ಲಾಕ್ಡೌನ್ ಅವಧಿಯ ಪರ್ಯಾಯ ಸಾಧ್ಯತೆಗಳ ಹುಡುಕಾಟದಲ್ಲಿ ಸಂಸ್ಥೆ ತೊಡಗಿದೆ.</p>.<p>ಇದರ ಫಲವಾಗಿ ಮೇ 13ರಿಂದ ಹೊನ್ನೆಸರ ಗ್ರಾಮದ ಶ್ರಮಜೀವಿ ಆಶ್ರಮದಲ್ಲಿ ಚರಕದಲ್ಲಿ ಕೆಲಸ ಮಾಡುವ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಆಸಕ್ತರಿಗಾಗಿ ಕೈಮಗ್ಗ ಬಟ್ಟೆಗಳ ಉತ್ಪನ್ನಕ್ಕೆ ಸಂಬಂಧಿಸಿದ ಪಡಿಯಚ್ಚು ಮುದ್ರಣ, ಕಸೂತಿ ಕಾರ್ಯಾಗಾರ ನಡೆಯುತ್ತಿದೆ.</p>.<p>ಚರಕದ ಚಟುವಟಿಕೆಗಳು ಪೂರ್ಣ ಪ್ರಮಾಣದಲ್ಲಿ ನಡೆಯುತ್ತಿರುವ ಹೊತ್ತಿಗೆ ಇಂತ ಕಾರ್ಯಾಗಾರಗಳನ್ನು ನಡೆಸುವುದು ಕಷ್ಟ. ಆದ್ದರಿಂದ ಲಾಕ್ಡೌನ್ ಅವಧಿಯನ್ನು ಕಾರ್ಯಾಗಾರಕ್ಕಾಗಿ ಬಳಸಿಕೊಳ್ಳುವ ಮೂಲಕ ಚರಕ ಕ್ರಿಯಾಶೀಲ ಹೆಜ್ಜೆ ಇಟ್ಟಿದೆ.</p>.<p>ಪಡಿಯಚ್ಚು ಮುದ್ರಣ ರಾಜಸ್ಥಾನ, ಗುಜರಾತ್ನಂತಹ ರಾಜ್ಯಗಳಲ್ಲಿ ಬಟ್ಟೆಯ ಮೇಲೆ ಚಿತ್ರಗಳನ್ನು ಮುದ್ರಿಸುವ ಕಲೆ ಪಾರಂಪರಿಕವಾಗಿದೆ. ಆಂಧ್ರದಲ್ಲೂ ‘ಕಲಂಕಾರಿ’ ಎಂಬ ಹಳೆಯ ಪರಂಪರೆ ಇನ್ನೂ ಚಾಲ್ತಿಯಲ್ಲಿದೆ.</p>.<p>‘ಕರ್ನಾಟಕದಲ್ಲಿ ಮುದ್ರಣಕ್ಕೆ ಸಂಬಂಧಪಟ್ಟ ಅಂತಹ ಪರಂಪರೆ ಇಲ್ಲ. ಹಾಗೆಂದು ಇಲ್ಲಿನವರು ರಾಜಸ್ಥಾನ, ಗುಜರಾತ್, ಆಂಧ್ರದ ಶೈಲಿ ಅನುಕರಿಸಿದರೆ ಆ ರಾಜ್ಯದವರು ಮತ್ತಷ್ಟು ಮುಂದಕ್ಕೆ ಹೋಗುವ ಹೊತ್ತಿಗೆ ನಾವು ಹಿಂದೆಯೇ ಉಳಿಯಬೇಕಾಗುತ್ತದೆ’ ಎನ್ನುತ್ತಾರೆ ದೇಸೀ ಚಿಂತಕ ಪ್ರಸನ್ನ.</p>.<p>ಕರ್ನಾಟಕದ ದೃಶ್ಯ ಜಾನಪದ ಪರಂಪರೆಗಳಿಂದ ಕೊಡು–ಕೊಳ್ಳುವಿಕೆಯ ಮೂಲಕ ಬಟ್ಟೆಗಳ ಮೇಲಿನ ಪಡಿಯಚ್ಚು ಮುದ್ರಣದ ಪರ್ಯಾಯ ಶೈಲಿಯನ್ನು ಅನ್ವೇಷಿಸುವ ಪ್ರಯತ್ನ ಕಾರ್ಯಾಗಾರದ ಮೂಲಕ ನಡೆಯುತ್ತಿದೆ.</p>.<p>ಇತ್ತೀಚಿನ ವರ್ಷಗಳಲ್ಲಿ ಗುಜರಾತ್, ರಾಜಸ್ಥಾನದಂತಹ ರಾಜ್ಯಗಳಲ್ಲಿ ಯಂತ್ರಗಳನ್ನು ಬಳಸಿ ಬಟ್ಟೆಗಳ ಮೇಲೆ ಪಡಿಯಚ್ಚು ಮುದ್ರಣ ಮಾಡುತ್ತಿರುವರ ಸಂಖ್ಯೆ ಹೆಚ್ಚುತ್ತಿದೆ. ಇದರಿಂದಾಗಿ ಚಿತ್ರಗಳಲ್ಲಿ ಏಕತಾನತೆ ಕಾಣಲು ಆರಂಭವಾಗಿದೆ. ಅದನ್ನು ಮುರಿದು ಕಟ್ಟುವ ಪ್ರಯತ್ನದ ಭಾಗವಾಗಿಯೂ ಕಾರ್ಯಾಗಾರ ಸಂಯೋಜನೆಗೊಂಡಿದೆ.</p>.<p>ಬಟ್ಟೆಗಳ ಮೇಲೆ ಪಡಿಯಚ್ಚು ಮುದ್ರಣವಾದ ನಂತರ ಮೆರಗು ನೀಡಲು ಕಸೂತಿ ಹಾಕಲಾಗುತ್ತದೆ. ಮನೆಯಲ್ಲೇ ಕುಳಿತು ಕಸೂತಿ ಹಾಕುವ ಕಲೆ ಮಲೆನಾಡಿನ ಹಳ್ಳಿಗಳ ಹೆಣ್ಣುಮಕ್ಕಳಿಗೆ ಕರಗತವಾಗಿದ್ದರೂ ಆ ಕಲೆಯ ಸೂಕ್ಷ್ಮ ಸಂಗತಿಗಳ ಅರಿವು ಅವರಿಗಿಲ್ಲ. ಪಡಿಯಚ್ಚು ಮುದ್ರಣ ಮಾಡಿದ ಬಟ್ಟೆಗಳ ಮೇಲೆ ಯಾವ ರೀತಿಯ ಕಸೂತಿ ಹಾಕುವುದರಿಂದ ಯಾವ ಪರಿಣಾಮ ಉಂಟಾಗುತ್ತದೆ ಎನ್ನುವ ಬಗ್ಗೆ ಮುದ್ರಣಕಾರರು ಮತ್ತು ಕಸೂತಿಕಾರರ ನಡುವೆ ಪರಸ್ಪರ ಮಾತುಕತೆ ನಡೆದು ಮುಖಾಮುಖಿಯಾಗಲು ಕಾರ್ಯಾಗಾರ ವೇದಿಕೆ ಸೃಷ್ಟಿಸಿದೆ.</p>.<p>ಈ ಮೂಲಕ ಮುದ್ರಣ ಹಾಗೂ ಕಸೂತಿ ನಡುವೆ ಸಮನ್ವಯ ತರುವ ಗುರಿಯಿಂದ ಕಾರ್ಯಾಗಾರ ನಡೆಯುತ್ತಿದೆ. ಕುಶಲಕರ್ಮಿಗಳೆಂದರೆ ಕೇವಲ ತಲೆತಗ್ಗಿಸಿ ಕೆಲಸ ಮಾಡುವವರಷ್ಟೇ ಅಲ್ಲ, ವಿನ್ಯಾಸಕಾರರಲ್ಲಿ ಇರುವ ಒಳನೋಟಗಳನ್ನು ಕುಶಲಕರ್ಮಿಗಳಲ್ಲೂ ಜಾಗೃತಗೊಳಿಸುವುದು ಕಾರ್ಯಾಗಾರದ ಉದ್ದೇಶವಾಗಿದೆ.</p>.<p>ಮೈಸೂರಿನ ಕಾವಾ ಸಂಸ್ಥೆಯ ಪದವೀಧರ ಕಲಾವಿದ ನಿರಂಜನ್, ದೇಸೀ ಚಿಂತಕ ಪ್ರಸನ್ನ, ವಿನ್ಯಾಸಕ ರಾದ ಪದ್ಮಶ್ರೀ, ರುದ್ರಪ್ಪ ಮೊದಲಾದವರ ಮಾರ್ಗದರ್ಶನದಲ್ಲಿ ಕಾರ್ಯಾಗಾರ ಸಾಗಿದೆ.</p>.<p>***</p>.<p>ಲಾಕ್ಡೌನ್ ಅವಧಿಯನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ಚರಕ ಮುದ್ರಣ, ಕಸೂತಿ ಕಾರ್ಯಾಗಾರ ಆಯೋಜಿಸಿದೆ. ಇದರಿಂದ ಹಲವು ಹೊಸ ವಿಷಯಗಳನ್ನು ತಿಳಿದುಕೊಳ್ಳಲು ಸಾಧ್ಯವಾಗಿದೆ.</p>.<p><strong>- ಮಹಾಲಕ್ಷ್ಮಿ, ಚರಕ ಸಂಸ್ಥೆ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಾಗರ: </strong>ತಾಲ್ಲೂಕಿನ ಹೆಗ್ಗೋಡು ಗ್ರಾಮದ ಚರಕ ಸಂಸ್ಥೆಯು ಕಳೆದ ವರ್ಷ ಕೋವಿಡ್ ಕಾರಣಕ್ಕೆ ವಿಧಿಸಿದ್ದ ಲಾಕ್ಡೌನ್ನಿಂದಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿತ್ತು.</p>.<p>ಲಾಕ್ಡೌನ್ ಸಡಿಲವಾಗುತ್ತಿದ್ದಂತೆ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುವ ಹೆಣ್ಣುಮಕ್ಕಳಿಗೆ ಕೆರೆ ಹೂಳೆತ್ತುವ, ಮಣ್ಣಿನ ಕಟ್ಟಡ ನಿರ್ಮಾಣ ಮೊದಲಾದ ಕೆಲಸಗಳ ಮೂಲಕ ‘ಉದ್ಯೋಗ ಸೃಷ್ಟಿ’ ಮಾಡಲಾಗಿತ್ತು.</p>.<p>ಈ ವರ್ಷ ಲಾಕ್ಡೌನ್ ತಂದಿರುವ ಸಂಕಟವನ್ನು ಅತ್ಯಂತ ವ್ಯವಸ್ಥಿತ ರೀತಿಯಲ್ಲಿ ಎದುರಿಸಲು ಚರಕ ಯೋಜನೆ ರೂಪಿಸಿದೆ. ಶೇ 30ರಷ್ಟು ಮಾತ್ರ ಚರಕದ ಕೆಲಸಗಳು ನಡೆಯುತ್ತಿರುವ ಈ ಹೊತ್ತಿನಲ್ಲಿ ಲಾಕ್ಡೌನ್ ಅವಧಿಯ ಪರ್ಯಾಯ ಸಾಧ್ಯತೆಗಳ ಹುಡುಕಾಟದಲ್ಲಿ ಸಂಸ್ಥೆ ತೊಡಗಿದೆ.</p>.<p>ಇದರ ಫಲವಾಗಿ ಮೇ 13ರಿಂದ ಹೊನ್ನೆಸರ ಗ್ರಾಮದ ಶ್ರಮಜೀವಿ ಆಶ್ರಮದಲ್ಲಿ ಚರಕದಲ್ಲಿ ಕೆಲಸ ಮಾಡುವ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಆಸಕ್ತರಿಗಾಗಿ ಕೈಮಗ್ಗ ಬಟ್ಟೆಗಳ ಉತ್ಪನ್ನಕ್ಕೆ ಸಂಬಂಧಿಸಿದ ಪಡಿಯಚ್ಚು ಮುದ್ರಣ, ಕಸೂತಿ ಕಾರ್ಯಾಗಾರ ನಡೆಯುತ್ತಿದೆ.</p>.<p>ಚರಕದ ಚಟುವಟಿಕೆಗಳು ಪೂರ್ಣ ಪ್ರಮಾಣದಲ್ಲಿ ನಡೆಯುತ್ತಿರುವ ಹೊತ್ತಿಗೆ ಇಂತ ಕಾರ್ಯಾಗಾರಗಳನ್ನು ನಡೆಸುವುದು ಕಷ್ಟ. ಆದ್ದರಿಂದ ಲಾಕ್ಡೌನ್ ಅವಧಿಯನ್ನು ಕಾರ್ಯಾಗಾರಕ್ಕಾಗಿ ಬಳಸಿಕೊಳ್ಳುವ ಮೂಲಕ ಚರಕ ಕ್ರಿಯಾಶೀಲ ಹೆಜ್ಜೆ ಇಟ್ಟಿದೆ.</p>.<p>ಪಡಿಯಚ್ಚು ಮುದ್ರಣ ರಾಜಸ್ಥಾನ, ಗುಜರಾತ್ನಂತಹ ರಾಜ್ಯಗಳಲ್ಲಿ ಬಟ್ಟೆಯ ಮೇಲೆ ಚಿತ್ರಗಳನ್ನು ಮುದ್ರಿಸುವ ಕಲೆ ಪಾರಂಪರಿಕವಾಗಿದೆ. ಆಂಧ್ರದಲ್ಲೂ ‘ಕಲಂಕಾರಿ’ ಎಂಬ ಹಳೆಯ ಪರಂಪರೆ ಇನ್ನೂ ಚಾಲ್ತಿಯಲ್ಲಿದೆ.</p>.<p>‘ಕರ್ನಾಟಕದಲ್ಲಿ ಮುದ್ರಣಕ್ಕೆ ಸಂಬಂಧಪಟ್ಟ ಅಂತಹ ಪರಂಪರೆ ಇಲ್ಲ. ಹಾಗೆಂದು ಇಲ್ಲಿನವರು ರಾಜಸ್ಥಾನ, ಗುಜರಾತ್, ಆಂಧ್ರದ ಶೈಲಿ ಅನುಕರಿಸಿದರೆ ಆ ರಾಜ್ಯದವರು ಮತ್ತಷ್ಟು ಮುಂದಕ್ಕೆ ಹೋಗುವ ಹೊತ್ತಿಗೆ ನಾವು ಹಿಂದೆಯೇ ಉಳಿಯಬೇಕಾಗುತ್ತದೆ’ ಎನ್ನುತ್ತಾರೆ ದೇಸೀ ಚಿಂತಕ ಪ್ರಸನ್ನ.</p>.<p>ಕರ್ನಾಟಕದ ದೃಶ್ಯ ಜಾನಪದ ಪರಂಪರೆಗಳಿಂದ ಕೊಡು–ಕೊಳ್ಳುವಿಕೆಯ ಮೂಲಕ ಬಟ್ಟೆಗಳ ಮೇಲಿನ ಪಡಿಯಚ್ಚು ಮುದ್ರಣದ ಪರ್ಯಾಯ ಶೈಲಿಯನ್ನು ಅನ್ವೇಷಿಸುವ ಪ್ರಯತ್ನ ಕಾರ್ಯಾಗಾರದ ಮೂಲಕ ನಡೆಯುತ್ತಿದೆ.</p>.<p>ಇತ್ತೀಚಿನ ವರ್ಷಗಳಲ್ಲಿ ಗುಜರಾತ್, ರಾಜಸ್ಥಾನದಂತಹ ರಾಜ್ಯಗಳಲ್ಲಿ ಯಂತ್ರಗಳನ್ನು ಬಳಸಿ ಬಟ್ಟೆಗಳ ಮೇಲೆ ಪಡಿಯಚ್ಚು ಮುದ್ರಣ ಮಾಡುತ್ತಿರುವರ ಸಂಖ್ಯೆ ಹೆಚ್ಚುತ್ತಿದೆ. ಇದರಿಂದಾಗಿ ಚಿತ್ರಗಳಲ್ಲಿ ಏಕತಾನತೆ ಕಾಣಲು ಆರಂಭವಾಗಿದೆ. ಅದನ್ನು ಮುರಿದು ಕಟ್ಟುವ ಪ್ರಯತ್ನದ ಭಾಗವಾಗಿಯೂ ಕಾರ್ಯಾಗಾರ ಸಂಯೋಜನೆಗೊಂಡಿದೆ.</p>.<p>ಬಟ್ಟೆಗಳ ಮೇಲೆ ಪಡಿಯಚ್ಚು ಮುದ್ರಣವಾದ ನಂತರ ಮೆರಗು ನೀಡಲು ಕಸೂತಿ ಹಾಕಲಾಗುತ್ತದೆ. ಮನೆಯಲ್ಲೇ ಕುಳಿತು ಕಸೂತಿ ಹಾಕುವ ಕಲೆ ಮಲೆನಾಡಿನ ಹಳ್ಳಿಗಳ ಹೆಣ್ಣುಮಕ್ಕಳಿಗೆ ಕರಗತವಾಗಿದ್ದರೂ ಆ ಕಲೆಯ ಸೂಕ್ಷ್ಮ ಸಂಗತಿಗಳ ಅರಿವು ಅವರಿಗಿಲ್ಲ. ಪಡಿಯಚ್ಚು ಮುದ್ರಣ ಮಾಡಿದ ಬಟ್ಟೆಗಳ ಮೇಲೆ ಯಾವ ರೀತಿಯ ಕಸೂತಿ ಹಾಕುವುದರಿಂದ ಯಾವ ಪರಿಣಾಮ ಉಂಟಾಗುತ್ತದೆ ಎನ್ನುವ ಬಗ್ಗೆ ಮುದ್ರಣಕಾರರು ಮತ್ತು ಕಸೂತಿಕಾರರ ನಡುವೆ ಪರಸ್ಪರ ಮಾತುಕತೆ ನಡೆದು ಮುಖಾಮುಖಿಯಾಗಲು ಕಾರ್ಯಾಗಾರ ವೇದಿಕೆ ಸೃಷ್ಟಿಸಿದೆ.</p>.<p>ಈ ಮೂಲಕ ಮುದ್ರಣ ಹಾಗೂ ಕಸೂತಿ ನಡುವೆ ಸಮನ್ವಯ ತರುವ ಗುರಿಯಿಂದ ಕಾರ್ಯಾಗಾರ ನಡೆಯುತ್ತಿದೆ. ಕುಶಲಕರ್ಮಿಗಳೆಂದರೆ ಕೇವಲ ತಲೆತಗ್ಗಿಸಿ ಕೆಲಸ ಮಾಡುವವರಷ್ಟೇ ಅಲ್ಲ, ವಿನ್ಯಾಸಕಾರರಲ್ಲಿ ಇರುವ ಒಳನೋಟಗಳನ್ನು ಕುಶಲಕರ್ಮಿಗಳಲ್ಲೂ ಜಾಗೃತಗೊಳಿಸುವುದು ಕಾರ್ಯಾಗಾರದ ಉದ್ದೇಶವಾಗಿದೆ.</p>.<p>ಮೈಸೂರಿನ ಕಾವಾ ಸಂಸ್ಥೆಯ ಪದವೀಧರ ಕಲಾವಿದ ನಿರಂಜನ್, ದೇಸೀ ಚಿಂತಕ ಪ್ರಸನ್ನ, ವಿನ್ಯಾಸಕ ರಾದ ಪದ್ಮಶ್ರೀ, ರುದ್ರಪ್ಪ ಮೊದಲಾದವರ ಮಾರ್ಗದರ್ಶನದಲ್ಲಿ ಕಾರ್ಯಾಗಾರ ಸಾಗಿದೆ.</p>.<p>***</p>.<p>ಲಾಕ್ಡೌನ್ ಅವಧಿಯನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ಚರಕ ಮುದ್ರಣ, ಕಸೂತಿ ಕಾರ್ಯಾಗಾರ ಆಯೋಜಿಸಿದೆ. ಇದರಿಂದ ಹಲವು ಹೊಸ ವಿಷಯಗಳನ್ನು ತಿಳಿದುಕೊಳ್ಳಲು ಸಾಧ್ಯವಾಗಿದೆ.</p>.<p><strong>- ಮಹಾಲಕ್ಷ್ಮಿ, ಚರಕ ಸಂಸ್ಥೆ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>