ಶಾಲೆ ಆವರಣದಲ್ಲಿ ಬೆಳೆದು ನಿಂತ ಅಕೇಶಿಯ ಮರಗಳ ಕಡಿತಲೆಗೆ ಈಗಾಗಲೇ ಹಲವು ಬಾರಿ ಶಾಸಕ ಆರಗ ಜ್ಞಾನೇಂದ್ರ ಅವರಲ್ಲಿ ಮನವಿ ಮಾಡಿದ್ದೇವೆ. ನಗರ ವಲಯ ಅರಣ್ಯ ಇಲಾಖೆಗೆ ಲಿಖಿತ ದೂರು ನೀಡಿದ್ದೇವೆ. ಆದರೆ ಈವರೆಗೂ ಯಾವುದೇ ಕ್ರಮ ಆಗಿಲ್ಲ
ಪುಟ್ಟಪ್ಪ. ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ
ಶಾಲೆಗೆ 2.16 ಗುಂಟೆ ಜಮೀನು ಮಂಜೂರಾಗಿದೆ. ಎರಡು ದಶಕಗಳ ಹಿಂದೆ ನೆಟ್ಟು ಬೆಳಸಿದ್ದ ಸುಮಾರು 500ಕ್ಕೂ ಹೆಚ್ಚು ಅಕೇಶಿಯ ಮರಗಳು ಕಾಂಪೌಂಡಿಗೆ ಹಾನಿ ಉಂಟುಮಾಡಿವೆ. ಕಡಿತಲೆಗೆ ಅರಣ್ಯ ಇಲಾಖೆ ಮೀನ– ಮೇಷ ಎಣಿಸುತ್ತಿದೆ.