ಹೀಗಾಗಿ ವಿದ್ಯಾರ್ಥಿಯು ತನ್ನ ಸ್ನೇಹಿತರಿಂದ ಬೈಕ್ ಪಡೆದು ಆಕೆಯನ್ನು ಖಲಂದರ್ ನಗರದ ಮನೆಗೆ ಕರೆದುಕೊಂಡು ಬಂದಿದ್ದ. ವಾಪಸ್ ತೆರಳುವಾಗ ಅಲ್ಲಿನ ಝೆಂಡಾ ಕಟ್ಟೆಯ ಬಳಿ ಗುಂಪೊಂದು ವಿದ್ಯಾರ್ಥಿಯನ್ನು ಅಡ್ಡಗಟ್ಟಿದೆ. ಆತನ ಹೆಸರು ಕೇಳಿದ ಗುಂಪು, ‘ನಮ್ಮ ಸಮುದಾಯದ ಹುಡುಗಿಯನ್ನು ಏಕೆ ಬೈಕ್ನಲ್ಲಿ ಕೂರಿಸಿಕೊಂಡು ಬಂದೆ’ ಎಂದು ಪ್ರಶ್ನಿಸಿ ಹಲ್ಲೆ ಮಾಡಿದೆ.