ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕಾರಿಪುರ | ಚಾಕುವಿನಿಂದ ಇರಿದು ವ್ಯಕ್ತಿ ಕೊಲೆ

Published 21 ಆಗಸ್ಟ್ 2023, 16:20 IST
Last Updated 21 ಆಗಸ್ಟ್ 2023, 16:20 IST
ಅಕ್ಷರ ಗಾತ್ರ

ಶಿಕಾರಿಪುರ: ಪಟ್ಟಣದ ಈದ್ ಮಿಲಾದ್ ಆಚರಣೆ ಸಮಿತಿಯ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಆಯ್ಕೆಗೆ ಸಂಬಂಧಿಸಿದಂತೆ ಉಂಟಾದ ಭಿನ್ನಾಭಿಪ್ರಾಯದಿಂದಾಗಿ ಸೋಮವಾರ ವ್ಯಕ್ತಿಯೊಬ್ಬರನ್ನು ಕೊಲೆ ಮಾಡಲಾಗಿದೆ.

ಈದ್ ಮಿಲಾದ್ ಆಚರಣೆ ಸಮಿತಿಯ ಅಧ್ಯಕ್ಷ ಮತ್ತು ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಭಾನುವಾರ ಮುಗಿದಿತ್ತು. ಈ ಕುರಿತು ಅಸಮಾಧಾನ ಹೊಂದಿದ್ದ ಕೆಲವರು ಸೋಮವಾರ ಮತ್ತೆ ಇಲ್ಲಿನ ಕೆಎಚ್‌ಬಿ ಬಡಾವಣೆಯ ಖಾಲಿ ನಿವೇಶನವೊಂದರಲ್ಲಿ ಸಭೆ ಆಯೋಜಿಸಿದ್ದರು. ಈ ಸಂದರ್ಭ ಪರಸ್ಪರರಲ್ಲಿ ಕಂಡುಬಂದ ಮಾತಿನ ಚಕಮಕಿ ಗದ್ದಲಕ್ಕೆ ತಿರುಗಿ, ಜನ್ನತ್‌ಗಲ್ಲಿಯ ನಿವಾಸಿ ಜಾಫರ್‌ (32) ಕೊಲೆಗೀಡಾಗಿದ್ದಾರೆ.

‘ಸಮಿತಿ ಕುರಿತು ಚರ್ಚಿಸಲು ಎಸ್.ಎನ್. ಬಾಬು (ಸಾದಿರ್‌ ಅಹಮ್ಮದ್‌) ಗುಂಪಿನವರು ನಮ್ಮನ್ನು ಸಭೆಗೆ ಕರೆದಿದ್ದರು. ಜಾಫರ್ ಹಾಗೂ ಇಸ್ಮಾಯಿಲ್ ಜೊತೆಗೆ ಕೆಎಚ್‌ಬಿ ಬಡಾವಣೆಗೆ ತೆರಳಿದ್ದೆ. ಸಭೆಯಲ್ಲಿ ಭಾಗಿಯಾಗಿದ್ದ ಶಿವಮೊಗ್ಗದ ಸದ್ದು, ರೋಷನ್, ಶಿಕಾರಿಪುರದ ಶೋಹಿಬುಲ್ಲಾ, ಸಲ್ಮಾನ್ ಹಾಗೂ ಆರಿಫ್ ಅವರು ಜಾಫರ್ ಮೇಲೆ ಹಲ್ಲೆ ನಡೆಸಿ ಚಾಕುವಿನಿಂದ ಇರಿದಿದ್ದಾರೆ’ ಎಂದು ಪುರಸಭೆ ಸದಸ್ಯ ರೋಷನ್ (ಮೊಹಮದ್ ದಸ್ತಗೀರ್) ತಿಳಿಸಿದರು.

‘ತೀವ್ರವಾಗಿ ಗಾಯಗೊಂಡಿದ್ದ ಜಾಫರ್‌ ಆಸ್ಪತ್ರೆಗೆ ಕರೆದೊಯ್ಯುವಾಗ ಮೃತಪಟ್ಟರು. ಈ ಸಂಬಂಧ 9 ಜನರ ವಿರುದ್ಧ ಪಟ್ಟಣದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇವೆ’ ಎಂದರು.

ಸಭೆಯಲ್ಲಿ ಪಾಲ್ಗೊಂಡವರೆಲ್ಲಾ ಪರಿಚಿತರೇ ಆಗಿದ್ದರು. ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿ ಕೊಲೆಯಲ್ಲಿ ಅಂತ್ಯವಾಗಿದೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದ್ದು, ತನಿಖೆ ಮುಂದುವರಿದಿದೆ ಎಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‌ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT