‘ಸಮಿತಿ ಕುರಿತು ಚರ್ಚಿಸಲು ಎಸ್.ಎನ್. ಬಾಬು (ಸಾದಿರ್ ಅಹಮ್ಮದ್) ಗುಂಪಿನವರು ನಮ್ಮನ್ನು ಸಭೆಗೆ ಕರೆದಿದ್ದರು. ಜಾಫರ್ ಹಾಗೂ ಇಸ್ಮಾಯಿಲ್ ಜೊತೆಗೆ ಕೆಎಚ್ಬಿ ಬಡಾವಣೆಗೆ ತೆರಳಿದ್ದೆ. ಸಭೆಯಲ್ಲಿ ಭಾಗಿಯಾಗಿದ್ದ ಶಿವಮೊಗ್ಗದ ಸದ್ದು, ರೋಷನ್, ಶಿಕಾರಿಪುರದ ಶೋಹಿಬುಲ್ಲಾ, ಸಲ್ಮಾನ್ ಹಾಗೂ ಆರಿಫ್ ಅವರು ಜಾಫರ್ ಮೇಲೆ ಹಲ್ಲೆ ನಡೆಸಿ ಚಾಕುವಿನಿಂದ ಇರಿದಿದ್ದಾರೆ’ ಎಂದು ಪುರಸಭೆ ಸದಸ್ಯ ರೋಷನ್ (ಮೊಹಮದ್ ದಸ್ತಗೀರ್) ತಿಳಿಸಿದರು.