ಕೂಲಿ ಮಾಡಿ ಬದುಕು ಸಾಗಿಸುತ್ತಿದ್ದ ಈ ಎರಡೂ ಕುಟುಂಬಗಳಿಗೆ ಭವಿಷ್ಯದ್ದೇ ಪ್ರಶ್ನೆಯಾಗಿದೆ. ಅಪಘಾತ ಇನ್ಶೂರೆನ್ಸ್ ಹಣದ ಮೇಲೆ ಈ ಕುಟುಂಬಗಳ ಬದುಕು ನಿಂತಿದೆ. ಈ ವಿಚಾರದಲ್ಲಿ ಸರ್ಕಾರ ಸ್ಪಂದಿಸಬೇಕಿದೆ. ಮಾಸ್ತಿಕಟ್ಟೆಯ ಯುವ ಮಿತ್ರರು ಸಂಘಟನೆ ಕಟ್ಟಿಕೊಂಡು ಈ ಕುಟುಂಬಗಳಿಗೆ ಆರ್ಥಿಕ ನೆರವು ದೊರಕಿಸಿಕೊಡಲು ಮುಂದಾಗಿದ್ದಾರೆ. ತಾಯಿ, ಅನಾಥ ಮಕ್ಕಳ ಬದುಕಿಗಾಗಿ ಸಾಂತ್ವನ, ಆಸರೆ, ಆಶ್ರಯ ಸಿಗಲಿ ಎಂಬುದು ಗ್ರಾಮಸ್ಥರ ಆಶಯವಾಗಿದೆ.