‘ಏಕಾಏಕಿ ಬೆಳಗಿನ ಜಾವ ಕಕ್ಕರಸಿ ಗ್ರಾಮದ ಸತೀಶ, ಕೃಷ್ಣಪ್ಪ, ರಾಮಚಂದ್ರ, ಪರಸಪ್ಪ ಹಾಗೂ ಇತರರು ಸೇರಿ 700 ಅಡಿಕೆ ಸಸಿ, 50 ಬಾಳೆಗಿಡಗಳನ್ನು ಹಾಗೂ 20 ಕೃಷಿ ಪೈಪ್ಗಳನ್ನು ಕಡಿದು ನಾಶ ಪಡಿಸಿದ್ದಾರೆ. ಭೋಜರಾಜ್ ಅವರ ಸಹೋದರ ನಿಂಗರಾಜ್ ಅವರು ಬೆಳೆಗೆ ನೀರು ಹಾಯಿಸಲು ಹೋದ ಸಂದರ್ಭದಲ್ಲಿ ಕಕ್ಕರಸಿ ಗ್ರಾಮಸ್ಥರು ಹಲ್ಲೆ ಮಾಡಲು ಯತ್ನಿಸಿದ್ದಲ್ಲದೆ, ಅವಾಚ್ಯ ಪದಗಳಿಂದ ನಿಂದಿಸಿ, ಜೀವ ಬೆದರಿಕೆ ಹಾಕಿದ್ದಾರೆ’ ಎಂದು ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.