‘15 ವರ್ಷಗಳಿಂದ ಪಕ್ಷದಲ್ಲಿ ಇದ್ದೇನೆ. ಪಟ್ಟಣ ಪಂಚಾಯಿತಿ ಚುನಾವಣೆ ಅಭ್ಯರ್ಥಿಗಳ ಆಯ್ಕೆಗೆ ಕೆಪಿಸಿಸಿ ಹಿಂದೆಂದೂ ಆಯ್ಕೆ ಸಮಿತಿ ರಚಿಸಿರುವ ಉದಾಹರಣೆ ಇಲ್ಲ. ಇಂತಹ ನಿರ್ಧಾರವನ್ನು ಈ ಬಾರಿ ಏಕೆ ತೆಗೆದುಕೊಂಡಿದೆ ಎಂಬ ಪ್ರಶ್ನೆ ಮೂಡಿದೆ. ಆಯ್ಕೆ ಸಮಿತಿ ರಚನೆ ಬೇಸರ ತಂದಿದೆ. ಪಕ್ಷದಿಂದ ಸ್ಪರ್ಧಿಸಲು ಬಯಸುವ ಅಭ್ಯರ್ಥಿಗಳ ಪಟ್ಟಿಯನ್ನು ಜಿಲ್ಲಾ ಕಚೇರಿಗೆ ಕಳುಹಿಸುತ್ತೇನೆ’ ಎಂದು ಕಿಮ್ಮನೆ ಸಭೆಗೆ ತಿಳಿಸಿದರು.