ಮಾರಿಕಾಂಬ ಜಾತ್ರೆ ಹಿನ್ನೆಲೆಯಲ್ಲಿ ಶನಿವಾರ ದೇವಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು
ಕುಸ್ತಿ ಪಂದ್ಯಾವಳಿ; ಗೆದ್ದವರಿಗೆ ₹50 ಸಾವಿರ ಬಹುಮಾನ
ಮಾರಿಕಾಂಬ ಜಾತ್ರೆ ಅಂಗವಾಗಿ ಮಾರ್ಚ್ 15ರಿಂದ 17ರವರೆಗೆ 3 ದಿನಗಳ ಕಾಲ ನೆಹರೂ ಕ್ರೀಡಾಂಗಣದಲ್ಲಿ ರಾಜ್ಯಮಟ್ಟದ ಬಯಲು ಕುಸ್ತಿ ಪಂದ್ಯಾವಳಿ ಆಯೋಜಿಸಲಾಗಿದೆ. ಪ್ರತಿದಿನ ಮಧ್ಯಾಹ್ನ 3 ಗಂಟೆಗೆ ಕುಸ್ತಿ ಆರಂಭವಾಗಲಿದೆ. ಗೆದ್ದ ಪೈಲ್ವಾನರಿಗೆ ಕೊನೆಯ ದಿನ ಬೆಳ್ಳಿಗದೆ ಮತ್ತು ₹50 ಸಾವಿರ ನಗದು ಬಹುಮಾನ ನೀಡಿ ಗೌರವಿಸಲಾಗುವುದು ಎಂದು ಎನ್.ಮಂಜುನಾಥ್ ತಿಳಿಸಿದರು.