<p><strong>ಶಿವಮೊಗ್ಗ: </strong>ಕುವೆಂಪು ರಂಗಮಂದಿರದಲ್ಲಿ ಮೇ 26ರಂದು ಸಂಜೆ 7ಕ್ಕೆ ‘ಮೃಗತೃಷ್ಣ’ ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.</p>.<p>ವಸುಮತಿ ಉಡುಪ ರಚನೆಯ ಈ ನಾಟಕವನ್ನು ಡಾ.ಸಾಸ್ವೆಹಳ್ಳಿ ಸತೀಶ್ ನಿರ್ದೇಶಿಸಿದ್ದಾರೆ. ಹೊಂಗಿರಣ ನಾಟಕ ತಂಡದ ಸದಸ್ಯರು ಅಭಿನಯಿಸಿದ್ದಾರೆ ಎಂದು ಹೊಂಗಿರಣ ಸಂಸ್ಥೆಯ ಅಧ್ಯಕ್ಷ ಚಂದ್ರಶೇಖರ ಹಿರೇಗೋಣಿಗೆರೆ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದರು.</p>.<p>ಇದೊಂದು ಅದ್ಭುತ ನಾಟಕ. ಮನುಷ್ಯನಿಗೆ ಬಂದ ಮುಪ್ಪು ಸ್ವೀಕರಿಸದೆ, ಭಯಪಟ್ಟು ಕೊನೆಗೆ ಸಾವಿಗಾಗಿಯೇ ತವಕಿಸುವ ತಲ್ಲಣ ಈ ನಾಟಕದ ಕೇಂದ್ರ ಬಿಂದು. ಪ್ರೀತಿ ಕಾಲಾತೀತ, ಸೀಮಾತೀತ, ನಿತ್ಯನೂತನ ಎಂದುಕೊಂಡರೂ, ಸ್ವಾರ್ಥಕ್ಕಾಗಿ ತುಡಿಯುವುದು ಈ ನಾಟಕದ ಪ್ರಮುಖ ಸಂಘರ್ಷ ಎಂದು ವಿಶ್ಲೇಷಿಸಿದರು.</p>.<p>ಇದೊಂದು ಸಂಘರ್ಷದ ಮುಖಾಮುಖಿ. ಪ್ರತಿಯೊಬ್ಬ ಮನುಷ್ಯನಿಗೂ ಹುಟ್ಟು, ಯೌವನ, ಮುಪ್ಪು ಸಹಜವಾಗಿದ್ದರೂ, ಚಿರಂಜೀವಿಯಾಗಿರಬಹುದೇ ಎಂಬ ಉತ್ತರಕ್ಕೆ ಈ ನಾಟಕ ಉತ್ತರ ನೀಡುತ್ತದೆ. ₨ 5 ಶುಲ್ಕ ನಿಗದಿ ಮಾಡಲಾಗಿದೆ ಎಂದರು.</p>.<p>ಪತ್ರಿಕಾಗೋಷ್ಠಿಯಲ್ಲಿ ಶಿವಮೊಗ್ಗ ಹರೀಶ್, ಸುಂದರೇಶ್, ಸುಶ್ಮಿತಾ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿವಮೊಗ್ಗ: </strong>ಕುವೆಂಪು ರಂಗಮಂದಿರದಲ್ಲಿ ಮೇ 26ರಂದು ಸಂಜೆ 7ಕ್ಕೆ ‘ಮೃಗತೃಷ್ಣ’ ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.</p>.<p>ವಸುಮತಿ ಉಡುಪ ರಚನೆಯ ಈ ನಾಟಕವನ್ನು ಡಾ.ಸಾಸ್ವೆಹಳ್ಳಿ ಸತೀಶ್ ನಿರ್ದೇಶಿಸಿದ್ದಾರೆ. ಹೊಂಗಿರಣ ನಾಟಕ ತಂಡದ ಸದಸ್ಯರು ಅಭಿನಯಿಸಿದ್ದಾರೆ ಎಂದು ಹೊಂಗಿರಣ ಸಂಸ್ಥೆಯ ಅಧ್ಯಕ್ಷ ಚಂದ್ರಶೇಖರ ಹಿರೇಗೋಣಿಗೆರೆ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದರು.</p>.<p>ಇದೊಂದು ಅದ್ಭುತ ನಾಟಕ. ಮನುಷ್ಯನಿಗೆ ಬಂದ ಮುಪ್ಪು ಸ್ವೀಕರಿಸದೆ, ಭಯಪಟ್ಟು ಕೊನೆಗೆ ಸಾವಿಗಾಗಿಯೇ ತವಕಿಸುವ ತಲ್ಲಣ ಈ ನಾಟಕದ ಕೇಂದ್ರ ಬಿಂದು. ಪ್ರೀತಿ ಕಾಲಾತೀತ, ಸೀಮಾತೀತ, ನಿತ್ಯನೂತನ ಎಂದುಕೊಂಡರೂ, ಸ್ವಾರ್ಥಕ್ಕಾಗಿ ತುಡಿಯುವುದು ಈ ನಾಟಕದ ಪ್ರಮುಖ ಸಂಘರ್ಷ ಎಂದು ವಿಶ್ಲೇಷಿಸಿದರು.</p>.<p>ಇದೊಂದು ಸಂಘರ್ಷದ ಮುಖಾಮುಖಿ. ಪ್ರತಿಯೊಬ್ಬ ಮನುಷ್ಯನಿಗೂ ಹುಟ್ಟು, ಯೌವನ, ಮುಪ್ಪು ಸಹಜವಾಗಿದ್ದರೂ, ಚಿರಂಜೀವಿಯಾಗಿರಬಹುದೇ ಎಂಬ ಉತ್ತರಕ್ಕೆ ಈ ನಾಟಕ ಉತ್ತರ ನೀಡುತ್ತದೆ. ₨ 5 ಶುಲ್ಕ ನಿಗದಿ ಮಾಡಲಾಗಿದೆ ಎಂದರು.</p>.<p>ಪತ್ರಿಕಾಗೋಷ್ಠಿಯಲ್ಲಿ ಶಿವಮೊಗ್ಗ ಹರೀಶ್, ಸುಂದರೇಶ್, ಸುಶ್ಮಿತಾ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>