<p><strong>ಶಿಕಾರಿಪುರ</strong>: ಸಿನಿಮಾ ಹಾಗೂ ರಂಗಭೂಮಿ ಕ್ಷೇತ್ರಕ್ಕೆ ನಟ ದಿವಂಗತ ಶಂಕರ್ ನಾಗ್ ಅವರು ಅಪಾರ ಕೊಡುಗೆ ನೀಡಿದ್ದಾರೆ ಎಂದು ಚಲನಚಿತ್ರ ನಿರ್ದೇಶಕ ವೈಭವ್ ಬಸವರಾಜ್ ಶ್ಲಾಘಿಸಿದರು.</p>.<p>ಪಟ್ಟಣದ ಮಂಜುನಾಥ ನಾಟ್ಯ ಸಂಘದ ರಂಗಮಂಟಪದಲ್ಲಿ ಶಂಕರ್ನಾಗ್ ಅಭಿಮಾನಿಗಳ ಬಳಗದಿಂದ ಗುರುವಾರ ಹಮ್ಮಿಕೊಂಡಿದ್ದ ಶಂಕರ್ನಾಗ್ ಅವರ ಜನ್ಮದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಮನುಷ್ಯ ಸತ್ತ ಮೇಲೂ ಜನತೆ ನೆನಪಿಸಿಕೊಳ್ಳುವಂತಹ ಕಾರ್ಯ ಮಾಡಬೇಕು. ರಂಗಭೂಮಿ ಕ್ಷೇತ್ರದ ಮೂಲಕ ಶಂಕರ್ನಾಗ್ ರಾಜ್ಯಕ್ಕೆ ಪರಿಚಯವಾದರು. ನಟರಾಗಿ, ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ಅತಿ ಕಡಿಮೆ ವಯಸ್ಸಿನಲ್ಲಿ ಚಿತ್ರರಂಗದಲ್ಲಿ ಉತ್ತಮ ಹೆಸರು ಪಡೆದಿದ್ದರು’ ಎಂದರು.</p>.<p>ಅಭಿಮಾನಿಗಳ ಬಳಗದ ಪದಾಧಿಕಾರಿಗಳಾದ ವಿಠ್ಠಲ್ ಮಹೇಂದ್ರಕರ್, ಕೃಷ್ಣಮೂರ್ತಿ, ಸುರೇಶ್ ಹೂವಿನಮಂಡಿ, ಎಸ್.ಎಸ್.ರಾಘವೇಂದ್ರ, ಶ್ರೀನಿವಾಸನಾಯ್ಡು, ಚಂದ್ರು, ಬೆಣ್ಣೆ ಪ್ರವೀಣ್, ಯು.ರಾಜು, ವೀರನಗೌಡ, ವಿನಯ್, ಸಿದ್ದನಗೌಡ, ಮಂಜು, ಕಾರ್ತಿಕ್, ಜೆ.ಎಸ್.ಮಂಜುನಾಥ್, ಹದಡಿ ಪ್ರವೀಣ್, ಡಿ.ಕೆ.ಪ್ರವೀಣ್ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿಕಾರಿಪುರ</strong>: ಸಿನಿಮಾ ಹಾಗೂ ರಂಗಭೂಮಿ ಕ್ಷೇತ್ರಕ್ಕೆ ನಟ ದಿವಂಗತ ಶಂಕರ್ ನಾಗ್ ಅವರು ಅಪಾರ ಕೊಡುಗೆ ನೀಡಿದ್ದಾರೆ ಎಂದು ಚಲನಚಿತ್ರ ನಿರ್ದೇಶಕ ವೈಭವ್ ಬಸವರಾಜ್ ಶ್ಲಾಘಿಸಿದರು.</p>.<p>ಪಟ್ಟಣದ ಮಂಜುನಾಥ ನಾಟ್ಯ ಸಂಘದ ರಂಗಮಂಟಪದಲ್ಲಿ ಶಂಕರ್ನಾಗ್ ಅಭಿಮಾನಿಗಳ ಬಳಗದಿಂದ ಗುರುವಾರ ಹಮ್ಮಿಕೊಂಡಿದ್ದ ಶಂಕರ್ನಾಗ್ ಅವರ ಜನ್ಮದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಮನುಷ್ಯ ಸತ್ತ ಮೇಲೂ ಜನತೆ ನೆನಪಿಸಿಕೊಳ್ಳುವಂತಹ ಕಾರ್ಯ ಮಾಡಬೇಕು. ರಂಗಭೂಮಿ ಕ್ಷೇತ್ರದ ಮೂಲಕ ಶಂಕರ್ನಾಗ್ ರಾಜ್ಯಕ್ಕೆ ಪರಿಚಯವಾದರು. ನಟರಾಗಿ, ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ಅತಿ ಕಡಿಮೆ ವಯಸ್ಸಿನಲ್ಲಿ ಚಿತ್ರರಂಗದಲ್ಲಿ ಉತ್ತಮ ಹೆಸರು ಪಡೆದಿದ್ದರು’ ಎಂದರು.</p>.<p>ಅಭಿಮಾನಿಗಳ ಬಳಗದ ಪದಾಧಿಕಾರಿಗಳಾದ ವಿಠ್ಠಲ್ ಮಹೇಂದ್ರಕರ್, ಕೃಷ್ಣಮೂರ್ತಿ, ಸುರೇಶ್ ಹೂವಿನಮಂಡಿ, ಎಸ್.ಎಸ್.ರಾಘವೇಂದ್ರ, ಶ್ರೀನಿವಾಸನಾಯ್ಡು, ಚಂದ್ರು, ಬೆಣ್ಣೆ ಪ್ರವೀಣ್, ಯು.ರಾಜು, ವೀರನಗೌಡ, ವಿನಯ್, ಸಿದ್ದನಗೌಡ, ಮಂಜು, ಕಾರ್ತಿಕ್, ಜೆ.ಎಸ್.ಮಂಜುನಾಥ್, ಹದಡಿ ಪ್ರವೀಣ್, ಡಿ.ಕೆ.ಪ್ರವೀಣ್ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>