<p><strong>ಸಾಗರ:</strong> ‘ನಾವು ಎಷ್ಟೇ ಉನ್ನತ ಸ್ಥಾನಕ್ಕೆ ಏರಿದರೂ ಅದರಲ್ಲಿ ಸಮಾಜದ ಪಾಲು ಇರುತ್ತದೆ. ಸಮಾಜವನ್ನು ಮರೆಯುವ ಪ್ರವೃತ್ತಿ ಸರಿಯಲ್ಲ’ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು.</p>.<p>ಇಲ್ಲಿನ ಆರ್ಯ ಈಡಿಗರ ಸಭಾಭವನದಲ್ಲಿ ಪ್ರಾಂತ್ಯ ಆರ್ಯ ಈಡಿಗರ ಸಂಘ ಎಚ್. ಚನ್ನಪ್ಪ ಬಂಗಾರಮ್ಮ ಹುಣಸೆಕಟ್ಟೆ ಶಿಕಾರಿಪುರ ಇವರ ದತ್ತಿನಿಧಿಯಿಂದ ಶನಿವಾರ ಏರ್ಪಡಿಸಿದ್ದ ಹೆಚ್ಚು ಅಂಕ ಗಳಿಸಿದ ಈಡಿಗ ಸಮಾಜದ ವಿದ್ಯಾರ್ಥಿಗಳ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>‘ಯಾವುದೇ ವ್ಯಕ್ತಿ ದೊಡ್ಡ ಪದವಿ ಗಳಿಸಿ ಹುದ್ದೆಗೆ ಏರಿದ ಮಾತ್ರಕ್ಕೆ ಸಮುದಾಯದಿಂದ ಬೇರೆಯಾಗಿ ತನ್ನನ್ನು ನೋಡಿಕೊಳ್ಳುವ ಮನೋಭಾವ ಬೆಳೆಸಿಕೊಳ್ಳಬಾರದು. ನಾನು ಕೂಡ ಸಮುದಾಯದ ಒಂದು ಭಾಗ ಎಂಬ ಭಾವನೆ ಅಗತ್ಯ’ ಎಂದರು.</p>.<p>ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿ, ಸ್ನಾತಕೋತ್ತರ ಪದವಿಯಲ್ಲಿ ಹೆಚ್ಚು ಅಂಕ ಗಳಿಸಿದ ಈಡಿಗ ಸಮಾಜದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.</p>.<p>ಈಡಿಗರ ಸಂಘದ ಪ್ರಮುಖರಾದ ಎಂ. ಹಾಲಪ್ಪ ಮೆಳವರಿಗೆ, ಟಿ. ರಘುಪತಿ, ಎಚ್.ಆರ್. ರವಿಕುಮಾರ್, ಬರೂರು ನಾಗರಾಜ್ ಇದ್ದರು.</p>.<p>ಎಚ್.ಎನ್. ದಿವಾಕರ್ ಸ್ವಾಗತಿಸಿದರು. ಎಂ.ಸಿ. ಪರಶುರಾಮಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೆ.ಎಂ. ಕರುಣಾಕರ ವಂದಿಸಿದರು. ರವಿಕುಮಾರ್ ನಿರೂಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಾಗರ:</strong> ‘ನಾವು ಎಷ್ಟೇ ಉನ್ನತ ಸ್ಥಾನಕ್ಕೆ ಏರಿದರೂ ಅದರಲ್ಲಿ ಸಮಾಜದ ಪಾಲು ಇರುತ್ತದೆ. ಸಮಾಜವನ್ನು ಮರೆಯುವ ಪ್ರವೃತ್ತಿ ಸರಿಯಲ್ಲ’ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು.</p>.<p>ಇಲ್ಲಿನ ಆರ್ಯ ಈಡಿಗರ ಸಭಾಭವನದಲ್ಲಿ ಪ್ರಾಂತ್ಯ ಆರ್ಯ ಈಡಿಗರ ಸಂಘ ಎಚ್. ಚನ್ನಪ್ಪ ಬಂಗಾರಮ್ಮ ಹುಣಸೆಕಟ್ಟೆ ಶಿಕಾರಿಪುರ ಇವರ ದತ್ತಿನಿಧಿಯಿಂದ ಶನಿವಾರ ಏರ್ಪಡಿಸಿದ್ದ ಹೆಚ್ಚು ಅಂಕ ಗಳಿಸಿದ ಈಡಿಗ ಸಮಾಜದ ವಿದ್ಯಾರ್ಥಿಗಳ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>‘ಯಾವುದೇ ವ್ಯಕ್ತಿ ದೊಡ್ಡ ಪದವಿ ಗಳಿಸಿ ಹುದ್ದೆಗೆ ಏರಿದ ಮಾತ್ರಕ್ಕೆ ಸಮುದಾಯದಿಂದ ಬೇರೆಯಾಗಿ ತನ್ನನ್ನು ನೋಡಿಕೊಳ್ಳುವ ಮನೋಭಾವ ಬೆಳೆಸಿಕೊಳ್ಳಬಾರದು. ನಾನು ಕೂಡ ಸಮುದಾಯದ ಒಂದು ಭಾಗ ಎಂಬ ಭಾವನೆ ಅಗತ್ಯ’ ಎಂದರು.</p>.<p>ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿ, ಸ್ನಾತಕೋತ್ತರ ಪದವಿಯಲ್ಲಿ ಹೆಚ್ಚು ಅಂಕ ಗಳಿಸಿದ ಈಡಿಗ ಸಮಾಜದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.</p>.<p>ಈಡಿಗರ ಸಂಘದ ಪ್ರಮುಖರಾದ ಎಂ. ಹಾಲಪ್ಪ ಮೆಳವರಿಗೆ, ಟಿ. ರಘುಪತಿ, ಎಚ್.ಆರ್. ರವಿಕುಮಾರ್, ಬರೂರು ನಾಗರಾಜ್ ಇದ್ದರು.</p>.<p>ಎಚ್.ಎನ್. ದಿವಾಕರ್ ಸ್ವಾಗತಿಸಿದರು. ಎಂ.ಸಿ. ಪರಶುರಾಮಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೆ.ಎಂ. ಕರುಣಾಕರ ವಂದಿಸಿದರು. ರವಿಕುಮಾರ್ ನಿರೂಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>