<p><strong>ಶಿವಮೊಗ್ಗ</strong>: ರೈತರು ಗೇಣಿ ಸಾಗುವಳಿ ಮಾಡಿಕೊಂಡು ಬರುತ್ತಿರುವ ಶಾಲಾ ಜಮೀನುಗಳನ್ನು ವಶಕ್ಕೆ ಪಡೆಯಲು ಸರ್ಕಾರ ಮುಂದಾಗಿದೆ. ಅದು ಅವೈಜ್ಞಾನಿಕ ಎಂದು ಶಾಲಾ ಜಮೀನು ಗೇಣಿ ರೈತರ ಹೋರಾಟ ಸಮಿತಿ ಅಧ್ಯಕ್ಷ ಕಲ್ಲೂರು ಮೇಘರಾಜ್ ಹೇಳಿದರು.</p>.<p>ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಸರ್ಕಾರ ಶಾಲಾ ಜಮೀನುಗಳ ಗೇಣಿದಾರರು, ರೈತ ಮುಖಂಡರ ಸಭೆ ಕರೆದು ಚರ್ಚಿಸದೇ ಶಾಲಾ ಜಮೀನುಗಳ ಬಗ್ಗೆ ವಿಶೇಷ ಕಾನೂನು ತರಲು ಹೊರಟಿರುವುದು ಅಸಂಬದ್ಧ ಹಾಗೂ ಅಪರಿಪಕ್ವ ನಿರ್ಧಾರ. ಅದನ್ನು ಸಮಿತಿ ತೀವ್ರವಾಗಿ ಖಂಡಿಸುತ್ತದೆ ಎಂದರು.</p>.<p>ಭೂವಿದ್ಯಾದಾನ ಚಳವಳಿ ವೇಳೆ ಸರ್ಕಾರಿ ಶಾಲೆಗಳಿಗೆ ರಾಜ್ಯದಾದ್ಯಂತ ಸಾವಿರಾರು ಎಕರೆ ಜಮೀನನ್ನು ದಾನಿಗಳು ಕೊಟ್ಟಿದ್ದರಿಂದ ಆಟದ ಮೈದಾನ, ಕಟ್ಟಡ ಇನ್ನಿತರ ಉದ್ದೇಶಕ್ಕೆ ಅವು ಬಳಕೆಯಾಗುತ್ತಿವೆ. ಶಾಲೆಯಿಂದ ದೂರವಿದ್ದ ಜಮೀನನ್ನು ಆ ಗ್ರಾಮದ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಗೇಣಿಗೆ ನೀಡಲಾಗಿತ್ತು ಎಂದರು.</p>.<p>ಶಾಲಾ ಜಮೀನು ವಶಪಡಿಸಿಕೊಂಡಲ್ಲಿ ಸರ್ಕಾರದ ವಿರುದ್ಧ ಕಾನೂನು ಹೋರಾಟ ನಡೆಸಲಾಗುವುದು ಎಂದರು.</p>.<p>ಕೆ.ಆರ್.ಶಿವಣ್ಣ, ಕೊಡ್ಲೂರು ಶ್ರೀಧರ್, ಅರಸಾಳು ರಂಗನಾಥ್, ಅಲೀಂ ಖಾನ್, ಲೋಕೇಶ್ ಶಿರಾಳಕೊಪ್ಪ, ಶಂಕ್ರಾನಾಯ್ಕ, ಎಚ್.ಎಂ.ಸಂಗಯ್ಯ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿವಮೊಗ್ಗ</strong>: ರೈತರು ಗೇಣಿ ಸಾಗುವಳಿ ಮಾಡಿಕೊಂಡು ಬರುತ್ತಿರುವ ಶಾಲಾ ಜಮೀನುಗಳನ್ನು ವಶಕ್ಕೆ ಪಡೆಯಲು ಸರ್ಕಾರ ಮುಂದಾಗಿದೆ. ಅದು ಅವೈಜ್ಞಾನಿಕ ಎಂದು ಶಾಲಾ ಜಮೀನು ಗೇಣಿ ರೈತರ ಹೋರಾಟ ಸಮಿತಿ ಅಧ್ಯಕ್ಷ ಕಲ್ಲೂರು ಮೇಘರಾಜ್ ಹೇಳಿದರು.</p>.<p>ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಸರ್ಕಾರ ಶಾಲಾ ಜಮೀನುಗಳ ಗೇಣಿದಾರರು, ರೈತ ಮುಖಂಡರ ಸಭೆ ಕರೆದು ಚರ್ಚಿಸದೇ ಶಾಲಾ ಜಮೀನುಗಳ ಬಗ್ಗೆ ವಿಶೇಷ ಕಾನೂನು ತರಲು ಹೊರಟಿರುವುದು ಅಸಂಬದ್ಧ ಹಾಗೂ ಅಪರಿಪಕ್ವ ನಿರ್ಧಾರ. ಅದನ್ನು ಸಮಿತಿ ತೀವ್ರವಾಗಿ ಖಂಡಿಸುತ್ತದೆ ಎಂದರು.</p>.<p>ಭೂವಿದ್ಯಾದಾನ ಚಳವಳಿ ವೇಳೆ ಸರ್ಕಾರಿ ಶಾಲೆಗಳಿಗೆ ರಾಜ್ಯದಾದ್ಯಂತ ಸಾವಿರಾರು ಎಕರೆ ಜಮೀನನ್ನು ದಾನಿಗಳು ಕೊಟ್ಟಿದ್ದರಿಂದ ಆಟದ ಮೈದಾನ, ಕಟ್ಟಡ ಇನ್ನಿತರ ಉದ್ದೇಶಕ್ಕೆ ಅವು ಬಳಕೆಯಾಗುತ್ತಿವೆ. ಶಾಲೆಯಿಂದ ದೂರವಿದ್ದ ಜಮೀನನ್ನು ಆ ಗ್ರಾಮದ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಗೇಣಿಗೆ ನೀಡಲಾಗಿತ್ತು ಎಂದರು.</p>.<p>ಶಾಲಾ ಜಮೀನು ವಶಪಡಿಸಿಕೊಂಡಲ್ಲಿ ಸರ್ಕಾರದ ವಿರುದ್ಧ ಕಾನೂನು ಹೋರಾಟ ನಡೆಸಲಾಗುವುದು ಎಂದರು.</p>.<p>ಕೆ.ಆರ್.ಶಿವಣ್ಣ, ಕೊಡ್ಲೂರು ಶ್ರೀಧರ್, ಅರಸಾಳು ರಂಗನಾಥ್, ಅಲೀಂ ಖಾನ್, ಲೋಕೇಶ್ ಶಿರಾಳಕೊಪ್ಪ, ಶಂಕ್ರಾನಾಯ್ಕ, ಎಚ್.ಎಂ.ಸಂಗಯ್ಯ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>