45 ವರ್ಷಗಳ ಹಿಂದೆ ನಿಸರಾಣಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಓದಿದ್ದ ಶ್ರೀನಿವಾಸ ಹೆಗಡೆ ಅವರೇ ಶಾಲೆಯ ನೆರವಿಗೆ ನಿಂತಿದ್ದಾರೆ. ಸರ್ಕಾರಿ ಶಾಲೆಯಲ್ಲಿ ಓದಿ, ನಾಡಿನ ಪ್ರತಿಷ್ಠಿತ ಸಂಸ್ಥೆಯಾದ ಬೆಂಗಳೂರಿನ ಬಿಇಎಲ್ (ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್) ವ್ಯವಸ್ಥಾಪಕ ನಿರ್ದೇಶಕ ಸ್ಥಾನಕ್ಕೂ ಏರಿದ ಅವರು, ಬಾಲ್ಯದಲ್ಲಿ ಕಲಿತ ಶಾಲೆಗೆ ನೆರವಾಗಬೇಕು ಎಂಬ ಹಂಬಲಕ್ಕೆ ಚಾಲನೆ ದೊರೆತಿದೆ. ಕಂಪೆನಿ ತನ್ನ ಸಾಮಾಜಿಕ ಹೊಣೆಗಾರಿಕೆ ನಿಧಿಯ ಚಟುವಟಿಕೆ (ಸಿಎಸ್ಆರ್) ಅಡಿ ಶಾಲೆಗೆ ನೆರವು ನೀಡಿದೆ. ಅದರ ಫಲವಾಗಿ,
₹ 80 ಲಕ್ಷ ವೆಚ್ಚದಲ್ಲಿ ನಿಸರಾಣಿ ಸರ್ಕಾರಿ ಶಾಲೆಗೆಸುಸಜ್ಜಿತ ಕಟ್ಟಡ ದೊರೆತಿದೆ. ಜೊತೆಗೆ ₹ 5 ಲಕ್ಷ ವೆಚ್ಚದ ಪೀಠೋಪಕರಣ ಹಾಗೂ ಬೋಧನಾ ಸಾಮಗ್ರಿಗಳ ಕೊಡುಗೆಯೂ ದೊರೆತಿದೆ.