<p>ಕಾರ್ಗಲ್: ಜೋಗ ಜಲಪಾತವನ್ನು ಒಳಗೊಂಡ ಶರಾವತಿ ಕಣಿವೆ ಪ್ರದೇಶದಲ್ಲಿ ಭಾರಿ ಪ್ರಮಾಣದ ಮಳೆ ಸುರಿಯುತ್ತಿದ್ದು, ಕಣಿವೆಯಾಳದಲ್ಲಿ ಜಲ ವಿದ್ಯುತ್ ಬಳಕೆಗಾಗಿ ನಿರ್ಮಾಣಗೊಂಡಿರುವ ಅಂಬುತೀರ್ಥ ಮಿನಿ ಅಣೆಕಟ್ಟೆ ಭರ್ತಿಯಾಗಿದೆ.</p>.<p>ಜೋಗದಲ್ಲಿರುವ ಲೋಕೋಪಯೋಗಿ ಇಲಾಖೆಯ ಅತಿಥಿ ಗೃಹದ ಬಳಿಯಿಂದ ಕಾಣಿಸುವ ಈ ಸುಂದರ ಕಣಿವೆಯ ದೃಶ್ಯದಲ್ಲಿ ಮಹಾತ್ಮ ಗಾಂಧಿ ಜಲವಿದ್ಯುದಾಗರ ಮತ್ತು ಅಂಬುತೀರ್ಥ ಅಣೆಕಟ್ಟೆ ಪ್ರವಾಸಿಗರ ಕಣ್ಮನ ಸೆಳೆಯುತ್ತಿದೆ.</p>.<p>ಕಣಿವೆಯ ಇಕ್ಕೆಲಗಳಲ್ಲಿ ಉದ್ದಕ್ಕೂ ಹರಡಿಕೊಂಡಿರುವ ಪಶ್ಚಿಮಘಟ್ಟಗಳ ಪರ್ವತ ಶ್ರೇಣಿಗಳನ್ನು ಬಿಗಿದಪ್ಪಿಕೊಂಡಿರುವ ಹಸಿರು ವನರಾಶಿಗಳು, ಅಪೂರ್ವ ಪ್ರಾಣಿ, ಪಕ್ಷಿ ಸಂಕುಲಗಳು, ಆಯುರ್ವೇದದ ಗಿಡಮೂಲಿಕೆಗಳ ಸಸ್ಯ ಸಂಕುಲ ಕಾಣಸಿಗುತ್ತದೆ. ಬೆಟ್ಟ–ಗುಡ್ಡಗಳ ತಪ್ಪಲಿನಿಂದ ಕಣಿವೆಯನ್ನು ಮುತ್ತಿಕ್ಕಲು ಬರುವಂತೆ ಭಾಸವಾಗುವ ಪುಟ್ಟ ಪುಟ್ಟ ತೊರೆಗಳು ಈ ಸಾಲಿನಲ್ಲಿ ಸೇರಿಕೊಂಡಿದೆ.</p>.<p>ಹಸಿರು ವನರಾಶಿಯೊಂದಿಗೆ ಶರಾವತಿ ಕೊಳ್ಳದಿಂದ ಮೇಲೇರುವ ಶ್ವೇತ ವರ್ಣದ ಮಂಜು ಮುಸುಕಿದ ಜಲಸಿರಿಯ ಸಿಂಚನ ಮೋಡದೊಂದಿಗೆ ಬೆರೆತು ಸಾಗುವ ಸುಂದರ ದೃಶ್ಯವನ್ನು ಸಾವಿರಾರು ಪ್ರವಾಸಿಗರು ಕಣ್ತುಂಬಿಕೊಳ್ಳುತ್ತಿದ್ದಾರೆ.</p>.<p>‘ಇದು ಬಹು ಅಪಾಯಕಾರಿಯಾದ ಸ್ಥಳವಾಗಿರುವುದರಿಂದ ಪ್ರಾಧಿಕಾರ ಪ್ರವಾಸಿಗರ ರಕ್ಷಣೆಗೆ ಭದ್ರತಾ ಸಿಬ್ಬಂದಿಯನ್ನು ನೇಮಿಸಬೇಕು’ ಎಂಬುದು ಸ್ಥಳೀಯರ ಒತ್ತಾಯವಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕಾರ್ಗಲ್: ಜೋಗ ಜಲಪಾತವನ್ನು ಒಳಗೊಂಡ ಶರಾವತಿ ಕಣಿವೆ ಪ್ರದೇಶದಲ್ಲಿ ಭಾರಿ ಪ್ರಮಾಣದ ಮಳೆ ಸುರಿಯುತ್ತಿದ್ದು, ಕಣಿವೆಯಾಳದಲ್ಲಿ ಜಲ ವಿದ್ಯುತ್ ಬಳಕೆಗಾಗಿ ನಿರ್ಮಾಣಗೊಂಡಿರುವ ಅಂಬುತೀರ್ಥ ಮಿನಿ ಅಣೆಕಟ್ಟೆ ಭರ್ತಿಯಾಗಿದೆ.</p>.<p>ಜೋಗದಲ್ಲಿರುವ ಲೋಕೋಪಯೋಗಿ ಇಲಾಖೆಯ ಅತಿಥಿ ಗೃಹದ ಬಳಿಯಿಂದ ಕಾಣಿಸುವ ಈ ಸುಂದರ ಕಣಿವೆಯ ದೃಶ್ಯದಲ್ಲಿ ಮಹಾತ್ಮ ಗಾಂಧಿ ಜಲವಿದ್ಯುದಾಗರ ಮತ್ತು ಅಂಬುತೀರ್ಥ ಅಣೆಕಟ್ಟೆ ಪ್ರವಾಸಿಗರ ಕಣ್ಮನ ಸೆಳೆಯುತ್ತಿದೆ.</p>.<p>ಕಣಿವೆಯ ಇಕ್ಕೆಲಗಳಲ್ಲಿ ಉದ್ದಕ್ಕೂ ಹರಡಿಕೊಂಡಿರುವ ಪಶ್ಚಿಮಘಟ್ಟಗಳ ಪರ್ವತ ಶ್ರೇಣಿಗಳನ್ನು ಬಿಗಿದಪ್ಪಿಕೊಂಡಿರುವ ಹಸಿರು ವನರಾಶಿಗಳು, ಅಪೂರ್ವ ಪ್ರಾಣಿ, ಪಕ್ಷಿ ಸಂಕುಲಗಳು, ಆಯುರ್ವೇದದ ಗಿಡಮೂಲಿಕೆಗಳ ಸಸ್ಯ ಸಂಕುಲ ಕಾಣಸಿಗುತ್ತದೆ. ಬೆಟ್ಟ–ಗುಡ್ಡಗಳ ತಪ್ಪಲಿನಿಂದ ಕಣಿವೆಯನ್ನು ಮುತ್ತಿಕ್ಕಲು ಬರುವಂತೆ ಭಾಸವಾಗುವ ಪುಟ್ಟ ಪುಟ್ಟ ತೊರೆಗಳು ಈ ಸಾಲಿನಲ್ಲಿ ಸೇರಿಕೊಂಡಿದೆ.</p>.<p>ಹಸಿರು ವನರಾಶಿಯೊಂದಿಗೆ ಶರಾವತಿ ಕೊಳ್ಳದಿಂದ ಮೇಲೇರುವ ಶ್ವೇತ ವರ್ಣದ ಮಂಜು ಮುಸುಕಿದ ಜಲಸಿರಿಯ ಸಿಂಚನ ಮೋಡದೊಂದಿಗೆ ಬೆರೆತು ಸಾಗುವ ಸುಂದರ ದೃಶ್ಯವನ್ನು ಸಾವಿರಾರು ಪ್ರವಾಸಿಗರು ಕಣ್ತುಂಬಿಕೊಳ್ಳುತ್ತಿದ್ದಾರೆ.</p>.<p>‘ಇದು ಬಹು ಅಪಾಯಕಾರಿಯಾದ ಸ್ಥಳವಾಗಿರುವುದರಿಂದ ಪ್ರಾಧಿಕಾರ ಪ್ರವಾಸಿಗರ ರಕ್ಷಣೆಗೆ ಭದ್ರತಾ ಸಿಬ್ಬಂದಿಯನ್ನು ನೇಮಿಸಬೇಕು’ ಎಂಬುದು ಸ್ಥಳೀಯರ ಒತ್ತಾಯವಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>