<p><strong>ಸಾಗರ: </strong>ಶರಾವತಿ ನದಿ ಕಣಿವೆಯ ಪಶ್ಚಿಮಘಟ್ಟ ಪ್ರದೇಶದಲ್ಲಿ ಕೈಗೊಳ್ಳಲು ಮುಂದಾಗಿರುವ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯ ವಿವರಗಳನ್ನು ಸರ್ಕಾರ ಬಹಿರಂಗ ಪಡಿಸಬೇಕು ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಒತ್ತಾಯಿಸಿದ್ದಾರೆ. </p>.<p>ಇಲ್ಲಿನ ಉಪವಿಭಾಗಾಧಿಕಾರಿ ಕಚೇರಿ ಎದುರು ರೈತ ಸಂಘ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ವಿರೋಧಿಸಿ ಹಮ್ಮಿಕೊಂಡಿರುವ ಅನಿರ್ದಿಷ್ಠಾವಧಿ ಧರಣಿ ಸತ್ಯಾಗ್ರಹವನ್ನು ಬೆಂಬಲಿಸಿ ಮಂಗಳವಾರ ಮಾತನಾಡಿದರು.</p>.<p>ಯೋಜನೆಯ ವಿಸ್ತೃತ ಯೋಜನಾ ವರದಿಯನ್ನು ಸರ್ಕಾರ ಮುಚ್ಚಿಡುತ್ತಿದೆ. ಈ ಯೋಜನೆಯಿಂದ ಎಷ್ಟು ಮರಗಳು, ಜೀವವೈವಿಧ್ಯ ನಾಶವಾಗುತ್ತದೆ. ಸಂತ್ರಸ್ತರಾಗುವವರ ಸಂಖ್ಯೆ ಎಷ್ಟು, ವಿದ್ಯುತ್ ವಿತರಣಾ ಮಾರ್ಗಕ್ಕಾಗಿ ಎಷ್ಟು ಪ್ರಮಾಣದ ಕೃಷಿಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಬೇಕಾಗುತ್ತದೆ ಎಂಬ ವಿವರಗಳನ್ನು ಸಾರ್ವಜನಿಕರಿಗೆ ತಿಳಿಸಬೇಕು ಎಂದು ಆಗ್ರಹಿಸಿದರು.</p>.<p>ಒಂದೆಡೆ ಸರ್ಕಾರ ‘ನೀರಿದ್ದರೆ ನಾಳೆ’ ಎಂಬ ಕಾರ್ಯಕ್ರಮ ರೂಪಿಸುತ್ತದೆ. ಮತ್ತೊಂದಡೆ ಪಶ್ಚಿಮಘಟ್ಟದ ಜಲಮೂಲ ನಾಶಪಡಿಸುವ ಪಂಪ್ಡ್ ಸ್ಟೋರೇಜ್ನಂತಹ ಯೋಜನೆ ಜಾರಿಗೆ ಮುಂದಾಗುವುದು ವಿಪರ್ಯಾಸದ ಸಂಗತಿ ಎಂದರು. </p>.<p>ಹವಾಮಾನ ವೈಪರೀತ್ಯದಿಂದ ಕೃಷಿ ಸೇರಿದಂತೆ ವಿವಿಧ ವಲಯಗಳು ತತ್ತರಿಸಿವೆ. ಪಶ್ಚಿಮಘಟ್ಟದಂತಹ ಪರಿಸರಸೂಕ್ಷ್ಮ ಪ್ರದೇಶದಲ್ಲಿ ಸುರಂಗ ಕೊರೆದು ಯೋಜನೆ ಜಾರಿ ಮಾಡಿದರೆ ಹವಾಮಾನ ವೈಪರೀತ್ಯಕ್ಕೆ ಸರ್ಕಾರವೇ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದು ಹೇಳಿದರು.</p>.<p>‘ಮುಂದಿನ ಪೀಳಿಗೆಗೆ ಬದುಕಲು ಸಹನೀಯವಾದ ಪರಿಸರವನ್ನು ಕಾಪಾಡಿಕೊಳ್ಳುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ವಿದ್ಯುತ್ ಉತ್ಪಾದನೆ ಅಗತ್ಯ ಎಂಬ ಕಾರಣಕ್ಕೆ ಪರಿಸರವನ್ನು ಹಾಳು ಮಾಡುವ ತಪ್ಪಿಗೆ ನಾವು ಮುಂದಾಗಬಾರದು. ಪರ್ಯಾಯ ಮಾರ್ಗಗಳ ಕುರಿತು ತಜ್ಞರೊಂದಿಗೆ ಸರ್ಕಾರ ಸಮಾಲೋಚಿಸಬೇಕು’ ಎಂದು ಒತ್ತಾಯಿಸಿದರು.</p>.<p>ಈ ಹಿಂದೆ ಜಲ ವಿದ್ಯುತ್ ಉತ್ಪಾದನೆಗಾಗಿ ಶರಾವತಿ ಕಣಿವೆ ಪ್ರದೇಶದಿಂದ ಒಕ್ಕಲೆಬ್ಬಿಸಿದ ಸಂತ್ರಸ್ತರಿಗೆ ದೀರ್ಘಕಾಲದ ನಂತರವೂ ಭೂಮಿಯ ಹಕ್ಕು ಕೊಡಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಇಂದಿಗೂ ಮುಳುಗಡೆ ಸಂತ್ರಸ್ತರು ಮೂಲ ಸೌಕರ್ಯಗಳಿಂದ ವಂಚಿತರಾಗಿರುವ ಹಳ್ಳಿಗಳಲ್ಲಿ ಬದುಕುತ್ತಿದ್ದಾರೆ. ಈ ಕಾರಣ ಮತ್ತೊಂದು ಯೋಜನೆ ಅಗತ್ಯವಿಲ್ಲ ಎಂದು ರೈತ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಶಿವಾನಂದ ಕುಗ್ವೆ ಪ್ರತಿಪಾದಿಸಿದರು.</p>.<p>ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ದಿನೇಶ್ ಶಿರವಾಳ, ಪ್ರಮುಖರಾದ ಅಖಿಲೇಶ್ ಚಿಪ್ಪಳಿ, ಶಂಕರ್ ಶರ್ಮ, ರಮೇಶ್ ಕೆಳದಿ, ಎನ್.ಡಿ.ವಸಂತ ಕುಮಾರ್, ಕರಿಬಸಪ್ಪಗೌಡ, ಸತೀಶ್ ಅಂಗಡಿ, ಜಯಲಕ್ಷ್ಮಿ, ರಾಮಚಂದ್ರಪ್ಪ, ಹಿತಕರ ಜೈನ್, ಎಚ್.ಬಿ.ರಾಘವೇಂದ್ರ, ಭದ್ರೇಶ್ ಬಾಳಗೋಡು, ಪರಮೇಶ್ವರ ದೂಗೂರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಾಗರ: </strong>ಶರಾವತಿ ನದಿ ಕಣಿವೆಯ ಪಶ್ಚಿಮಘಟ್ಟ ಪ್ರದೇಶದಲ್ಲಿ ಕೈಗೊಳ್ಳಲು ಮುಂದಾಗಿರುವ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯ ವಿವರಗಳನ್ನು ಸರ್ಕಾರ ಬಹಿರಂಗ ಪಡಿಸಬೇಕು ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಒತ್ತಾಯಿಸಿದ್ದಾರೆ. </p>.<p>ಇಲ್ಲಿನ ಉಪವಿಭಾಗಾಧಿಕಾರಿ ಕಚೇರಿ ಎದುರು ರೈತ ಸಂಘ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ವಿರೋಧಿಸಿ ಹಮ್ಮಿಕೊಂಡಿರುವ ಅನಿರ್ದಿಷ್ಠಾವಧಿ ಧರಣಿ ಸತ್ಯಾಗ್ರಹವನ್ನು ಬೆಂಬಲಿಸಿ ಮಂಗಳವಾರ ಮಾತನಾಡಿದರು.</p>.<p>ಯೋಜನೆಯ ವಿಸ್ತೃತ ಯೋಜನಾ ವರದಿಯನ್ನು ಸರ್ಕಾರ ಮುಚ್ಚಿಡುತ್ತಿದೆ. ಈ ಯೋಜನೆಯಿಂದ ಎಷ್ಟು ಮರಗಳು, ಜೀವವೈವಿಧ್ಯ ನಾಶವಾಗುತ್ತದೆ. ಸಂತ್ರಸ್ತರಾಗುವವರ ಸಂಖ್ಯೆ ಎಷ್ಟು, ವಿದ್ಯುತ್ ವಿತರಣಾ ಮಾರ್ಗಕ್ಕಾಗಿ ಎಷ್ಟು ಪ್ರಮಾಣದ ಕೃಷಿಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಬೇಕಾಗುತ್ತದೆ ಎಂಬ ವಿವರಗಳನ್ನು ಸಾರ್ವಜನಿಕರಿಗೆ ತಿಳಿಸಬೇಕು ಎಂದು ಆಗ್ರಹಿಸಿದರು.</p>.<p>ಒಂದೆಡೆ ಸರ್ಕಾರ ‘ನೀರಿದ್ದರೆ ನಾಳೆ’ ಎಂಬ ಕಾರ್ಯಕ್ರಮ ರೂಪಿಸುತ್ತದೆ. ಮತ್ತೊಂದಡೆ ಪಶ್ಚಿಮಘಟ್ಟದ ಜಲಮೂಲ ನಾಶಪಡಿಸುವ ಪಂಪ್ಡ್ ಸ್ಟೋರೇಜ್ನಂತಹ ಯೋಜನೆ ಜಾರಿಗೆ ಮುಂದಾಗುವುದು ವಿಪರ್ಯಾಸದ ಸಂಗತಿ ಎಂದರು. </p>.<p>ಹವಾಮಾನ ವೈಪರೀತ್ಯದಿಂದ ಕೃಷಿ ಸೇರಿದಂತೆ ವಿವಿಧ ವಲಯಗಳು ತತ್ತರಿಸಿವೆ. ಪಶ್ಚಿಮಘಟ್ಟದಂತಹ ಪರಿಸರಸೂಕ್ಷ್ಮ ಪ್ರದೇಶದಲ್ಲಿ ಸುರಂಗ ಕೊರೆದು ಯೋಜನೆ ಜಾರಿ ಮಾಡಿದರೆ ಹವಾಮಾನ ವೈಪರೀತ್ಯಕ್ಕೆ ಸರ್ಕಾರವೇ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದು ಹೇಳಿದರು.</p>.<p>‘ಮುಂದಿನ ಪೀಳಿಗೆಗೆ ಬದುಕಲು ಸಹನೀಯವಾದ ಪರಿಸರವನ್ನು ಕಾಪಾಡಿಕೊಳ್ಳುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ವಿದ್ಯುತ್ ಉತ್ಪಾದನೆ ಅಗತ್ಯ ಎಂಬ ಕಾರಣಕ್ಕೆ ಪರಿಸರವನ್ನು ಹಾಳು ಮಾಡುವ ತಪ್ಪಿಗೆ ನಾವು ಮುಂದಾಗಬಾರದು. ಪರ್ಯಾಯ ಮಾರ್ಗಗಳ ಕುರಿತು ತಜ್ಞರೊಂದಿಗೆ ಸರ್ಕಾರ ಸಮಾಲೋಚಿಸಬೇಕು’ ಎಂದು ಒತ್ತಾಯಿಸಿದರು.</p>.<p>ಈ ಹಿಂದೆ ಜಲ ವಿದ್ಯುತ್ ಉತ್ಪಾದನೆಗಾಗಿ ಶರಾವತಿ ಕಣಿವೆ ಪ್ರದೇಶದಿಂದ ಒಕ್ಕಲೆಬ್ಬಿಸಿದ ಸಂತ್ರಸ್ತರಿಗೆ ದೀರ್ಘಕಾಲದ ನಂತರವೂ ಭೂಮಿಯ ಹಕ್ಕು ಕೊಡಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಇಂದಿಗೂ ಮುಳುಗಡೆ ಸಂತ್ರಸ್ತರು ಮೂಲ ಸೌಕರ್ಯಗಳಿಂದ ವಂಚಿತರಾಗಿರುವ ಹಳ್ಳಿಗಳಲ್ಲಿ ಬದುಕುತ್ತಿದ್ದಾರೆ. ಈ ಕಾರಣ ಮತ್ತೊಂದು ಯೋಜನೆ ಅಗತ್ಯವಿಲ್ಲ ಎಂದು ರೈತ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಶಿವಾನಂದ ಕುಗ್ವೆ ಪ್ರತಿಪಾದಿಸಿದರು.</p>.<p>ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ದಿನೇಶ್ ಶಿರವಾಳ, ಪ್ರಮುಖರಾದ ಅಖಿಲೇಶ್ ಚಿಪ್ಪಳಿ, ಶಂಕರ್ ಶರ್ಮ, ರಮೇಶ್ ಕೆಳದಿ, ಎನ್.ಡಿ.ವಸಂತ ಕುಮಾರ್, ಕರಿಬಸಪ್ಪಗೌಡ, ಸತೀಶ್ ಅಂಗಡಿ, ಜಯಲಕ್ಷ್ಮಿ, ರಾಮಚಂದ್ರಪ್ಪ, ಹಿತಕರ ಜೈನ್, ಎಚ್.ಬಿ.ರಾಘವೇಂದ್ರ, ಭದ್ರೇಶ್ ಬಾಳಗೋಡು, ಪರಮೇಶ್ವರ ದೂಗೂರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>