<p><strong>ಶಿಕಾರಿಪುರ:</strong> ಅಸಮರ್ಪಕ ವಿದ್ಯುತ್ ಪೂರೈಕೆ ವಿರೋಧಿಸಿ ತಾಲ್ಲೂಕಿನ ಈಸೂರು ಮತ್ತು ಸುತ್ತಲಿನ ಗ್ರಾಮದ ರೈತರು ಮಂಗಳವಾರ ಮೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಿದರು.</p><p>ಮುಖಂಡ ಡಿ.ಎಸ್.ಈಶ್ವರಪ್ಪ ಮಾತನಾಡಿ, ತಾಲ್ಲೂಕಿನ ಹಿತ್ತಲ, ಮಾಡ್ರವಳ್ಳಿ, ಅರಷಿಣಗೆರೆ, ಈಸೂರು ಗ್ರಾಮದ ರೈತರ ಬೋರ್ವೆಲ್ಗಳಿಗೆ ಅಸಮರ್ಪಕ ವಿದ್ಯುತ್ ಪೂರೈಕೆ ಆಗುತ್ತಿದೆ. ಈಸೂರಿನಿಂದ ಅಂಜನಾಪುರವರೆಗೆ 110/11ಕೆವಿ ಸ್ಟೇಷನ್ಗೆ ವಿದ್ಯುತ್ ಮಾರ್ಗ ನಿರ್ಮಾಣಕ್ಕೆ ರೈತರು ವಿರೋಧ ವ್ಯಕ್ತಪಡಿಸಿ ನ್ಯಾಯಾಲದ ಮೊರೆ ಹೋಗಿರುವ ಕಾರಣಕ್ಕೆ ಈ ಭಾಗದ ರೈತರಿಗೆ ಉದ್ದೇಶಪೂರ್ವಕವಾಗಿ ತೊಂದರೆ ನೀಡಲಾಗುತ್ತಿದೆ ಎನ್ನುವ ಗುಮಾನಿ ರೈತರಿಗೆ ಬಂದಿದೆ. </p><p>ಬೇಸಿಗೆ ಬೆಳೆಗೆ ಬೋರ್ವೆಲ್ ನೀರು ಅಗತ್ಯವಿದ್ದು, ಸರ್ಕಾರ ಹೇಳಿರುವ ರೀತಿ ಅಥವಾ ತಾಲ್ಲೂಕಿನ ಇತರೆ ಭಾಗದಲ್ಲಿ ನೀಡುತ್ತಿರುವ ನಿಯಮಿತ ವಿದ್ಯುತ್ ರೀತಿಯಲ್ಲಿ ಪೂರೈಕೆ ಆಗುತ್ತಿಲ್ಲ. ವಾರದಲ್ಲಿ ಮೂರು ದಿನ ಸಮರ್ಪಕವಾಗಿ ವಿದ್ಯುತ್ ನೀಡಿದರೆ ಇನ್ನುಳಿದ ದಿನ ನಿಗದಿಯಂತೆ ವಿದ್ಯುತ್ ದೊರೆಯುತ್ತಿಲ್ಲ. ಹಗಲು 4 ಗಂಟೆ, ರಾತ್ರಿ 3 ಗಂಟೆ ವಿದ್ಯುತ್ ನೀಡಬೇಕು ಆದರೆ ಮೇನ್ಸಪ್ಲೆ ಇಲ್ಲ, ಲೈನ್ ಟ್ರಬಲ್ ಎನ್ನುವ ಸಬೂಬು ಹೇಳಿ ವಿದ್ಯುತ್ ಪೂರೈಕೆ ವ್ಯತ್ಯಾಸ ಆಗುತ್ತಿದೆ, ಒಮ್ಮೊಮ್ಮೆ ನಿರಂತರವಾಗಿ 5-6 ಗಂಟೆ ವಿದ್ಯುತ್ ನೀಡುತ್ತಿದ್ದು ಮೋಟರ್ಗೆ ತೊಂದರೆ ಆಗುತ್ತಿದೆ ಈ ಎಲ್ಲ ಸಮಸ್ಯೆ ಈ ಭಾಗದ ರೈತರಿಗೆ ಮಾತ್ರ ಎನ್ನುವುದು ಇಲ್ಲಿನ ವಿಶೇಷ ಅಧಿಕಾರಿಗಳು ಕೂಡಲೆ ಸಮಸ್ಯೆ ಪರಿಹಾರ ಮಾಡಬೇಕು ಇಲ್ಲವಾದರೆ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಸಿದರು.</p><p>ರೈತ ಮುಖಂಡ ಸಂತೋಷ್, ಬಸವರಾಜ್ ರೋತೆ, ತಾ.ಪಂ. ಮಾಜಿ ಅಧ್ಯಕ್ಷ ಎ.ಪರಮೇಶ್ವರಪ್ಪ, ಬಿ.ಎಂ.ಮಂಜಪ್ಪ, ಪಿ.ಸಿ.ಸುಭಾಷ್ಚಂದ್ರ, ಹೆಚ್.ವೀರಪ್ಪ, ಬೇಗೂರು ರೇವಪ್ಪ, ತಾರಕೇಶ, ಎಂ.ಮಂಜುನಾಥ, ಕೇಶವಮೂರ್ತಿ, ರುದ್ರಪ್ಪ, ವಿ.ಲೋಕಪ್ಪ, ಕರಿಬಸಪ್ಪ ಇತರರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿಕಾರಿಪುರ:</strong> ಅಸಮರ್ಪಕ ವಿದ್ಯುತ್ ಪೂರೈಕೆ ವಿರೋಧಿಸಿ ತಾಲ್ಲೂಕಿನ ಈಸೂರು ಮತ್ತು ಸುತ್ತಲಿನ ಗ್ರಾಮದ ರೈತರು ಮಂಗಳವಾರ ಮೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಿದರು.</p><p>ಮುಖಂಡ ಡಿ.ಎಸ್.ಈಶ್ವರಪ್ಪ ಮಾತನಾಡಿ, ತಾಲ್ಲೂಕಿನ ಹಿತ್ತಲ, ಮಾಡ್ರವಳ್ಳಿ, ಅರಷಿಣಗೆರೆ, ಈಸೂರು ಗ್ರಾಮದ ರೈತರ ಬೋರ್ವೆಲ್ಗಳಿಗೆ ಅಸಮರ್ಪಕ ವಿದ್ಯುತ್ ಪೂರೈಕೆ ಆಗುತ್ತಿದೆ. ಈಸೂರಿನಿಂದ ಅಂಜನಾಪುರವರೆಗೆ 110/11ಕೆವಿ ಸ್ಟೇಷನ್ಗೆ ವಿದ್ಯುತ್ ಮಾರ್ಗ ನಿರ್ಮಾಣಕ್ಕೆ ರೈತರು ವಿರೋಧ ವ್ಯಕ್ತಪಡಿಸಿ ನ್ಯಾಯಾಲದ ಮೊರೆ ಹೋಗಿರುವ ಕಾರಣಕ್ಕೆ ಈ ಭಾಗದ ರೈತರಿಗೆ ಉದ್ದೇಶಪೂರ್ವಕವಾಗಿ ತೊಂದರೆ ನೀಡಲಾಗುತ್ತಿದೆ ಎನ್ನುವ ಗುಮಾನಿ ರೈತರಿಗೆ ಬಂದಿದೆ. </p><p>ಬೇಸಿಗೆ ಬೆಳೆಗೆ ಬೋರ್ವೆಲ್ ನೀರು ಅಗತ್ಯವಿದ್ದು, ಸರ್ಕಾರ ಹೇಳಿರುವ ರೀತಿ ಅಥವಾ ತಾಲ್ಲೂಕಿನ ಇತರೆ ಭಾಗದಲ್ಲಿ ನೀಡುತ್ತಿರುವ ನಿಯಮಿತ ವಿದ್ಯುತ್ ರೀತಿಯಲ್ಲಿ ಪೂರೈಕೆ ಆಗುತ್ತಿಲ್ಲ. ವಾರದಲ್ಲಿ ಮೂರು ದಿನ ಸಮರ್ಪಕವಾಗಿ ವಿದ್ಯುತ್ ನೀಡಿದರೆ ಇನ್ನುಳಿದ ದಿನ ನಿಗದಿಯಂತೆ ವಿದ್ಯುತ್ ದೊರೆಯುತ್ತಿಲ್ಲ. ಹಗಲು 4 ಗಂಟೆ, ರಾತ್ರಿ 3 ಗಂಟೆ ವಿದ್ಯುತ್ ನೀಡಬೇಕು ಆದರೆ ಮೇನ್ಸಪ್ಲೆ ಇಲ್ಲ, ಲೈನ್ ಟ್ರಬಲ್ ಎನ್ನುವ ಸಬೂಬು ಹೇಳಿ ವಿದ್ಯುತ್ ಪೂರೈಕೆ ವ್ಯತ್ಯಾಸ ಆಗುತ್ತಿದೆ, ಒಮ್ಮೊಮ್ಮೆ ನಿರಂತರವಾಗಿ 5-6 ಗಂಟೆ ವಿದ್ಯುತ್ ನೀಡುತ್ತಿದ್ದು ಮೋಟರ್ಗೆ ತೊಂದರೆ ಆಗುತ್ತಿದೆ ಈ ಎಲ್ಲ ಸಮಸ್ಯೆ ಈ ಭಾಗದ ರೈತರಿಗೆ ಮಾತ್ರ ಎನ್ನುವುದು ಇಲ್ಲಿನ ವಿಶೇಷ ಅಧಿಕಾರಿಗಳು ಕೂಡಲೆ ಸಮಸ್ಯೆ ಪರಿಹಾರ ಮಾಡಬೇಕು ಇಲ್ಲವಾದರೆ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಸಿದರು.</p><p>ರೈತ ಮುಖಂಡ ಸಂತೋಷ್, ಬಸವರಾಜ್ ರೋತೆ, ತಾ.ಪಂ. ಮಾಜಿ ಅಧ್ಯಕ್ಷ ಎ.ಪರಮೇಶ್ವರಪ್ಪ, ಬಿ.ಎಂ.ಮಂಜಪ್ಪ, ಪಿ.ಸಿ.ಸುಭಾಷ್ಚಂದ್ರ, ಹೆಚ್.ವೀರಪ್ಪ, ಬೇಗೂರು ರೇವಪ್ಪ, ತಾರಕೇಶ, ಎಂ.ಮಂಜುನಾಥ, ಕೇಶವಮೂರ್ತಿ, ರುದ್ರಪ್ಪ, ವಿ.ಲೋಕಪ್ಪ, ಕರಿಬಸಪ್ಪ ಇತರರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>