<p><strong>ಶಿವಮೊಗ್ಗ:</strong> ‘ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಮಾರ್ಚ್ ಕೊನೆಯ ವಾರ ಎರಡು ದಿನ ಏರ್ಪಡಿಸಲು ತೀರ್ಮಾನಿಸಲಾಗಿದೆ’ ಎಂದು ಅಧ್ಯಕ್ಷ ಡಿ. ಮಂಜುನಾಥ ತಿಳಿಸಿದ್ದಾರೆ.<br> <br>ಸಾಹಿತ್ಯ ಗ್ರಾಮದಲ್ಲಿ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸರ್ವಾನುಮತದ ತೀರ್ಮಾನ ಮಾಡಲಾಯಿತು. ಕಸಾಪ ಸದಸ್ಯರ ಬಳಿ ಹೋಗೋಣ, ಅವರಿಂದ ದೇಣಿಗೆ ಪಡೆಯೋಣ. ಎಲ್ಲರೂ ಸಹಾಯ ಮಾಡಲಿದ್ದಾರೆ ಎಂದು ಸಭೆಯಲ್ಲಿ ಚರ್ಚೆ ನಡೆಯಿತು.</p>.<p>‘ಪ್ರತಿನಿಧಿ ಶುಲ್ಕವಾಗಿ ₹ 200 ನಿಗದಿ ಮಾಡಲಾಯಿತು. ಸಮ್ಮೇಳನಕ್ಕೆ ಅಗತ್ಯವಾದ ಊಟ, ತಿಂಡಿ, ಶಾಮಿಯಾನ, ಇತರೆ ಖರ್ಚು ವೆಚ್ಚ ನಿಭಾಯಿಸಲು ದಾನಿಗಳ ಬಳಿ ನೆರವು ಕೇಳಲು ತೀರ್ಮಾನ ಮಾಡಲಾಯಿತು’ ಎಂದು ಹೇಳಿದ್ದಾರೆ.<br> <br>ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿ ನಡೆಯಲು ಸಹಕರಿಸಿದ ಎಲ್ಲರನ್ನೂ ಅಭಿನಂದಿಸಲಾಯಿತು. ಕಜಾಪ ನೇತೃತ್ವದಲ್ಲಿ ಏಳನೇ ಜಿಲ್ಲಾ ಜಾನಪದ ಸಮ್ಮೇಳನ ನಡೆಸುವುದು. ಹೊಸನಗರದಲ್ಲಿ ಸಾಹಿತ್ಯ ಹುಣ್ಣಿಮೆ ಏರ್ಪಡಿಸುವುದು ಸೇರಿದಂತೆ ಹಲವು ತೀರ್ಮಾನ ಮಾಡಲಾಯಿತು. <br> <br>ಉಮಾ ಕುಲಕರ್ಣಿ ಹಾಡು ಹೇಳಿದರು. ಕೆ.ಎಸ್.ಮಂಜಪ್ಪ ಸ್ವಾಗತಿಸಿದರು. ಎಂ.ಎಂ.ಸ್ವಾಮಿ ಹಿಂದಿನ ಸಭೆಯ ನಡಾವಳಿ ವಾಚಿಸಿದರು. ಡಿ. ಗಣೇಶ್ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿವಮೊಗ್ಗ:</strong> ‘ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಮಾರ್ಚ್ ಕೊನೆಯ ವಾರ ಎರಡು ದಿನ ಏರ್ಪಡಿಸಲು ತೀರ್ಮಾನಿಸಲಾಗಿದೆ’ ಎಂದು ಅಧ್ಯಕ್ಷ ಡಿ. ಮಂಜುನಾಥ ತಿಳಿಸಿದ್ದಾರೆ.<br> <br>ಸಾಹಿತ್ಯ ಗ್ರಾಮದಲ್ಲಿ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸರ್ವಾನುಮತದ ತೀರ್ಮಾನ ಮಾಡಲಾಯಿತು. ಕಸಾಪ ಸದಸ್ಯರ ಬಳಿ ಹೋಗೋಣ, ಅವರಿಂದ ದೇಣಿಗೆ ಪಡೆಯೋಣ. ಎಲ್ಲರೂ ಸಹಾಯ ಮಾಡಲಿದ್ದಾರೆ ಎಂದು ಸಭೆಯಲ್ಲಿ ಚರ್ಚೆ ನಡೆಯಿತು.</p>.<p>‘ಪ್ರತಿನಿಧಿ ಶುಲ್ಕವಾಗಿ ₹ 200 ನಿಗದಿ ಮಾಡಲಾಯಿತು. ಸಮ್ಮೇಳನಕ್ಕೆ ಅಗತ್ಯವಾದ ಊಟ, ತಿಂಡಿ, ಶಾಮಿಯಾನ, ಇತರೆ ಖರ್ಚು ವೆಚ್ಚ ನಿಭಾಯಿಸಲು ದಾನಿಗಳ ಬಳಿ ನೆರವು ಕೇಳಲು ತೀರ್ಮಾನ ಮಾಡಲಾಯಿತು’ ಎಂದು ಹೇಳಿದ್ದಾರೆ.<br> <br>ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿ ನಡೆಯಲು ಸಹಕರಿಸಿದ ಎಲ್ಲರನ್ನೂ ಅಭಿನಂದಿಸಲಾಯಿತು. ಕಜಾಪ ನೇತೃತ್ವದಲ್ಲಿ ಏಳನೇ ಜಿಲ್ಲಾ ಜಾನಪದ ಸಮ್ಮೇಳನ ನಡೆಸುವುದು. ಹೊಸನಗರದಲ್ಲಿ ಸಾಹಿತ್ಯ ಹುಣ್ಣಿಮೆ ಏರ್ಪಡಿಸುವುದು ಸೇರಿದಂತೆ ಹಲವು ತೀರ್ಮಾನ ಮಾಡಲಾಯಿತು. <br> <br>ಉಮಾ ಕುಲಕರ್ಣಿ ಹಾಡು ಹೇಳಿದರು. ಕೆ.ಎಸ್.ಮಂಜಪ್ಪ ಸ್ವಾಗತಿಸಿದರು. ಎಂ.ಎಂ.ಸ್ವಾಮಿ ಹಿಂದಿನ ಸಭೆಯ ನಡಾವಳಿ ವಾಚಿಸಿದರು. ಡಿ. ಗಣೇಶ್ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>