‘ಸಿಗಂದೂರಿನಲ್ಲಿ ಈಚೆಗೆ ನಡೆದ ಘಟನೆಗಳು ಬೇಸರ ತರಿಸಿವೆ. ಈಡಿಗ ಸಮಾಜವು ಹಿಂದುಳಿದ ಸಮಾಜವಾಗಿದ್ದು, ತಲತಲಾಂತರದಿಂದ ಚೌಡೇಶ್ವರಿ ದೇವಿಯನ್ನು ಪೂಜಿಸುತ್ತಾ ಬಂದಿದೆ. ಧರ್ಮಸ್ಥಳದಲ್ಲಿ ಹೇಗೆ ವೀರೇಂದ್ರಹೆಗ್ಗಡೆ ಅವರು ಕ್ಷೇತ್ರವನ್ನು ನಿಭಾಯಿಸುತ್ತಿದ್ದಾರೋ ಹಾಗೆಯೇ ಸಿಗಂದೂರಿನಲ್ಲಿ ರಾಮಪ್ಪ ಅವರು ಕ್ಷೇತ್ರದ ಬೆಳವಣಿಗೆಗೆ ಕಾರಣರಾಗಿದ್ದಾರೆ. ಆದರೆ, ಅಲ್ಲಿನ ಅರ್ಚಕ ಶೇಷಗಿರಿ ಭಟ್ಟರು ಇದನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ’ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.