ಶಿವಮೊಗ್ಗ: ’ಹವಾಮಾನ ವೈಪರಿತ್ಯದ ಕಾರಣ ನಮಗೆ ಪೆಹಲ್ಗಾಂವ್ನ ಬೇಸ್ ಕ್ಯಾಂಪ್ನಿಂದ ಮುಂದೆ ಅಮರನಾಥನ ಸನ್ನಿಧಾನಕ್ಕೆ ಹೋಗಲು ಸಾಧ್ಯವಾಗಲಿಲ್ಲ. ಹೀಗಾಗಿ ವಾಪಸ್ ಮರಳುತ್ತಿದ್ದೇವೆ. ಎಲ್ಲರೂ ಸುರಕ್ಷಿತವಾಗಿದ್ದೇವೆ‘ ಎಂದು ಶಿವಮೊಗ್ಗ ಮಹಾನಗರ ಪಾಲಿಕೆ ಮಾಜಿ ಉಪಮೇಯರ್ ಸುರೇಖಾ ಮುರಳೀಧರ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.