<p><strong>ಭದ್ರಾವತಿ</strong>: ತಾಲ್ಲೂಕಿಗೆ ಜಲಾಶಯದ ನೀರು ಇರುವುದರಿಂದ ವರ್ಷಕ್ಕೆ ಎರಡು ಬಾರಿ ಭತ್ತ ಬೆಳೆಗೆ ಯಾವುದೇ ಅಡ್ಡಿ ಇಲ್ಲ. ಆದರೆ, ಮಳೆ ಆಧಾರಿತ ಜಮೀನು ಇರುವ ಹಿರಿಯೂರು, ಆನವೇರಿ, ಕೂಡ್ಲಿಗೆರೆ, ಹೊಳೆಹೊನ್ನೂರು ಭಾಗದಲ್ಲಿ ತೊಗರಿ, ರಾಗಿ, ಮೆಕ್ಕೆಜೋಳ ಬಿತ್ತನೆ ಕಾರ್ಯ ಈಗ ನಡೆದಿದೆ.</p>.<p>ಇದಕ್ಕಾಗಿ ರೈತ ಸಂಪರ್ಕ ಕೇಂದ್ರದಿಂದ ಬೀಜ ವಿತರಿಸುವ ಕೆಲಸ ನಡೆದಿದ್ದು, ಈ ಬೆಳೆಯನ್ನು ಅಂದಾಜು ನೂರು ಹೆಕ್ಟೇರ್ ಪ್ರದೇಶದಲ್ಲಿ ಕಾಣಬಹುದು ಎನ್ನುತ್ತಾರೆ ಕೃಷಿ ಇಲಾಖೆ ಅಧಿಕಾರಿ ಶಶಿಧರ.</p>.<p>‘ಭತ್ತ ಬೀಜವನ್ನು ಇನ್ನು ಎರಡು ಮೂರು ದಿನಗಳಲ್ಲಿ ಸಂಬಂಧಿಸಿದ ಸೊಸೈಟಿಗಳಿಗೆ, ರೈತಸಂಪರ್ಕ ಕೇಂದ್ರಗಳಿಗೆ ತಲುಪಿಸುವ ಕೆಲಸ ನಡೆಯಲಿದ್ದು, ಅಲ್ಲಿಂದ ಎರಡು ಮೂರು ದಿನಗಳಲ್ಲಿ ಅವುಗಳನ್ನು ಕೃಷಿಕರಿಗೆ ವಿತರಿಸುವ ಕೆಲಸ ನಡೆಯಲಿದೆ’ ಎಂದು ಕೃಷಿ ಇಲಾಖೆ ರಾಕೇಶ್ ಮಾಹಿತಿ ನೀಡಿದರು.</p>.<p>‘ಮುಂಗಾರು ಮಳೆಯಲ್ಲಿ ಬಿತ್ತನೆ ಕಾರ್ಯ ನಡೆದರೆ ಆನಂತರ ಸಹಜವಾಗಿ ಸಿಗುವಜಲಾಶಯ ನೀರು ಭತ್ತ ಬೆಳೆಗೆ ಹೆಚ್ಚಿನ ಸಹಕಾರಿ ಆಗಲಿದೆ. ಇದರ ನಡುವೆ ಒಣಭೂಮಿ ಜಾಗದಲ್ಲಿನ ಬಿತ್ತನೆಗೆ ಈಗ ಸಕಾಲವಾಗಿದ್ದು, ಇದರ ಚಟುವಟಿಕೆ ರಭಸದಿಂದ ನಡೆದಿದೆ’ ಎನ್ನುತ್ತಾರೆ ಕೃಷಿಕರು.</p>.<p class="Subhead"><strong>ಗೊಬ್ಬರ ಸಮಸ್ಯೆ ಇಲ್ಲ: </strong>ತಾಲ್ಲೂಕಿನಲ್ಲಿ ಗೊಬ್ಬರದ ಸಮಸ್ಯೆ ಇಲ್ಲ. ಈಗಾಗಲೇ ಸಬ್ಸಿಡಿ ದರದಲ್ಲಿ ವಿತರಣೆ ಮಾಡಬಹುದಾದ ರಸಗೊಬ್ಬರ ದಾಸ್ತಾನು ಸಾಕಷ್ಟಿದೆ ಎನ್ನುತ್ತವೆ ಕೃಷಿ ಇಲಾಖೆ ಮೂಲಗಳು.</p>.<p>ರೈತರು ಡಿಎಪಿ ರಸಗೊಬ್ಬರದ ಮೇಲೆಹೆಚ್ಚು ಅವಲಂಬಿತರಾಗದೆ 12:32:16, 10:26:26, 20:20:0 ಕಾಂಪ್ಲೆಕ್ಸ್ ರಸಗೊಬ್ಬರವನ್ನು ಶಿಫಾರಸು ಮಾಡಿದ ಪ್ರಮಾಣದಲ್ಲಿ ಬಳಕೆ ಮಾಡುವಂತೆ ಕೃಷಿ ಇಲಾಖೆ ಮನವಿ ಮಾಡಿದೆ.</p>.<p>ಬೆಳೆ ಮೇಲಿನ ಅಳತೆ ಪ್ರಮಾಣದವಿವರವನ್ನು ಪಡೆಯಲು ಸಮೀಪದ ರೈತ ಸಂಪರ್ಕ ಕೇಂದ್ರ, ಇಲ್ಲವೇ ಕೃಷಿ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸುವಂತೆ ಕೃಷಿ ಇಲಾಖೆ ಪ್ರಕಟಣೆ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಭದ್ರಾವತಿ</strong>: ತಾಲ್ಲೂಕಿಗೆ ಜಲಾಶಯದ ನೀರು ಇರುವುದರಿಂದ ವರ್ಷಕ್ಕೆ ಎರಡು ಬಾರಿ ಭತ್ತ ಬೆಳೆಗೆ ಯಾವುದೇ ಅಡ್ಡಿ ಇಲ್ಲ. ಆದರೆ, ಮಳೆ ಆಧಾರಿತ ಜಮೀನು ಇರುವ ಹಿರಿಯೂರು, ಆನವೇರಿ, ಕೂಡ್ಲಿಗೆರೆ, ಹೊಳೆಹೊನ್ನೂರು ಭಾಗದಲ್ಲಿ ತೊಗರಿ, ರಾಗಿ, ಮೆಕ್ಕೆಜೋಳ ಬಿತ್ತನೆ ಕಾರ್ಯ ಈಗ ನಡೆದಿದೆ.</p>.<p>ಇದಕ್ಕಾಗಿ ರೈತ ಸಂಪರ್ಕ ಕೇಂದ್ರದಿಂದ ಬೀಜ ವಿತರಿಸುವ ಕೆಲಸ ನಡೆದಿದ್ದು, ಈ ಬೆಳೆಯನ್ನು ಅಂದಾಜು ನೂರು ಹೆಕ್ಟೇರ್ ಪ್ರದೇಶದಲ್ಲಿ ಕಾಣಬಹುದು ಎನ್ನುತ್ತಾರೆ ಕೃಷಿ ಇಲಾಖೆ ಅಧಿಕಾರಿ ಶಶಿಧರ.</p>.<p>‘ಭತ್ತ ಬೀಜವನ್ನು ಇನ್ನು ಎರಡು ಮೂರು ದಿನಗಳಲ್ಲಿ ಸಂಬಂಧಿಸಿದ ಸೊಸೈಟಿಗಳಿಗೆ, ರೈತಸಂಪರ್ಕ ಕೇಂದ್ರಗಳಿಗೆ ತಲುಪಿಸುವ ಕೆಲಸ ನಡೆಯಲಿದ್ದು, ಅಲ್ಲಿಂದ ಎರಡು ಮೂರು ದಿನಗಳಲ್ಲಿ ಅವುಗಳನ್ನು ಕೃಷಿಕರಿಗೆ ವಿತರಿಸುವ ಕೆಲಸ ನಡೆಯಲಿದೆ’ ಎಂದು ಕೃಷಿ ಇಲಾಖೆ ರಾಕೇಶ್ ಮಾಹಿತಿ ನೀಡಿದರು.</p>.<p>‘ಮುಂಗಾರು ಮಳೆಯಲ್ಲಿ ಬಿತ್ತನೆ ಕಾರ್ಯ ನಡೆದರೆ ಆನಂತರ ಸಹಜವಾಗಿ ಸಿಗುವಜಲಾಶಯ ನೀರು ಭತ್ತ ಬೆಳೆಗೆ ಹೆಚ್ಚಿನ ಸಹಕಾರಿ ಆಗಲಿದೆ. ಇದರ ನಡುವೆ ಒಣಭೂಮಿ ಜಾಗದಲ್ಲಿನ ಬಿತ್ತನೆಗೆ ಈಗ ಸಕಾಲವಾಗಿದ್ದು, ಇದರ ಚಟುವಟಿಕೆ ರಭಸದಿಂದ ನಡೆದಿದೆ’ ಎನ್ನುತ್ತಾರೆ ಕೃಷಿಕರು.</p>.<p class="Subhead"><strong>ಗೊಬ್ಬರ ಸಮಸ್ಯೆ ಇಲ್ಲ: </strong>ತಾಲ್ಲೂಕಿನಲ್ಲಿ ಗೊಬ್ಬರದ ಸಮಸ್ಯೆ ಇಲ್ಲ. ಈಗಾಗಲೇ ಸಬ್ಸಿಡಿ ದರದಲ್ಲಿ ವಿತರಣೆ ಮಾಡಬಹುದಾದ ರಸಗೊಬ್ಬರ ದಾಸ್ತಾನು ಸಾಕಷ್ಟಿದೆ ಎನ್ನುತ್ತವೆ ಕೃಷಿ ಇಲಾಖೆ ಮೂಲಗಳು.</p>.<p>ರೈತರು ಡಿಎಪಿ ರಸಗೊಬ್ಬರದ ಮೇಲೆಹೆಚ್ಚು ಅವಲಂಬಿತರಾಗದೆ 12:32:16, 10:26:26, 20:20:0 ಕಾಂಪ್ಲೆಕ್ಸ್ ರಸಗೊಬ್ಬರವನ್ನು ಶಿಫಾರಸು ಮಾಡಿದ ಪ್ರಮಾಣದಲ್ಲಿ ಬಳಕೆ ಮಾಡುವಂತೆ ಕೃಷಿ ಇಲಾಖೆ ಮನವಿ ಮಾಡಿದೆ.</p>.<p>ಬೆಳೆ ಮೇಲಿನ ಅಳತೆ ಪ್ರಮಾಣದವಿವರವನ್ನು ಪಡೆಯಲು ಸಮೀಪದ ರೈತ ಸಂಪರ್ಕ ಕೇಂದ್ರ, ಇಲ್ಲವೇ ಕೃಷಿ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸುವಂತೆ ಕೃಷಿ ಇಲಾಖೆ ಪ್ರಕಟಣೆ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>