<p><strong>ಭದ್ರಾವತಿ: </strong>‘ಭಕ್ತರ ಸಾಮೀಪ್ಯಕ್ಕೆ ದೇವರು ಪ್ರತಿಷ್ಠಾಪಿತನಾದರೆ ಶಕ್ತಿಯ ಸಂಕಲ್ಪ ಮತ್ತಷ್ಟು ಹೆಚ್ಚಲಿದೆ’ ಎಂದು ಮಂತ್ರಾಲಯದ ಸುಬುಧೇಂದ್ರತೀರ್ಥ ಶ್ರೀಪಾದರು ಹೇಳಿದರು.</p>.<p>ಸಂಕರ್ಷಣ ಧರ್ಮಸಂಸ್ಥೆ ಟ್ರಸ್ಟ್ ನೇತೃತ್ವದಲ್ಲಿ ಸಿದ್ಧಾರೂಢನಗರದಲ್ಲಿ ಶುಕ್ರವಾರ ಪ್ರತಿಷ್ಠಾಪಿತವಾದ ಶ್ರೀನಿವಾಸ ದೇವರ ವಿಗ್ರಹಕ್ಕೆ ಪೂಜೆ ನೆರವೇರಿಸಿ ಅವರು ಮಾತನಾಡಿದರು.</p>.<p>ದೇವಾಲಯ ಸಂಸ್ಕೃತಿ, ಆಚಾರ, ವಿಚಾರಗಳಿಗೆ ವಿಶೇಷ ಮಹತ್ವ, ಮನ್ನಣೆ ಇರುತ್ತದೆ. ಇದನ್ನು ನಿರ್ವಿಘ್ನವಾಗಿ ನೆರವೇರಿಸುವ ಕೆಲಸವನ್ನು ಭಕ್ತರು ಮಾಡುವ ಮೂಲಕ ಈ ಕೇಂದ್ರದ ಮಹತ್ವವನ್ನು ಸಾರಬೇಕು.ಭಕ್ತ ಮತ್ತು ಭಗವಂತನ ನಡುವೆ ಸಂಬಂಧ ಹೆಚ್ಚುವ ರೀತಿಯಲ್ಲಿ ಶ್ರೀನಿವಾಸನ ಭಕ್ತರಾದ ರಾಘವೇಂದ್ರ ಸ್ವಾಮಿಗಳ ಮಠ ಇಲ್ಲಿ ಈಗಾಗಲೇ ನೆಲೆ ನಿಂತಿದೆ. ಸಹಜವಾಗಿ ಇಂದು ಶ್ರೀನಿವಾಸ ಇಲ್ಲಿ ನೆಲೆ ನಿಲ್ಲುವಂತ ಸಂದರ್ಭ ಸೃಷ್ಟಿಯಾಗಿದೆ ಎಂದರು.</p>.<p>ಟ್ರಸ್ಟ್ ಅಧ್ಯಕ್ಷರಾದ ವಾಸುದೇವಮೂರ್ತಿ, ರಾಘವೇಂದ್ರ ಮಧುಸೂದನ, ಶ್ರೀನಿವಾಸಾಚಾರ್, ರಾಮಚಂದ್ರಾಚಾರ್, ಗೋಪಾಲಕೃಷ್ಣಾಚಾರ್,ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್, ಪೌರಾಯುಕ್ತ ಪರಮೇಶ್ವರ ಇದ್ದರು.</p>.<p>ಇದಕ್ಕೂ ಮುನ್ನ ಸ್ವಾಮೀಜಿಗಳ ಪಾದಪೂಜೆ ನಡೆಯಿತು. ಭಕ್ತರಿಗೆ ಪ್ರಸಾದ ವಿನಿಯೋಗ ನಡೆಯಿತು. ವಿವಿಧ ಗಣ್ಯರು ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಭದ್ರಾವತಿ: </strong>‘ಭಕ್ತರ ಸಾಮೀಪ್ಯಕ್ಕೆ ದೇವರು ಪ್ರತಿಷ್ಠಾಪಿತನಾದರೆ ಶಕ್ತಿಯ ಸಂಕಲ್ಪ ಮತ್ತಷ್ಟು ಹೆಚ್ಚಲಿದೆ’ ಎಂದು ಮಂತ್ರಾಲಯದ ಸುಬುಧೇಂದ್ರತೀರ್ಥ ಶ್ರೀಪಾದರು ಹೇಳಿದರು.</p>.<p>ಸಂಕರ್ಷಣ ಧರ್ಮಸಂಸ್ಥೆ ಟ್ರಸ್ಟ್ ನೇತೃತ್ವದಲ್ಲಿ ಸಿದ್ಧಾರೂಢನಗರದಲ್ಲಿ ಶುಕ್ರವಾರ ಪ್ರತಿಷ್ಠಾಪಿತವಾದ ಶ್ರೀನಿವಾಸ ದೇವರ ವಿಗ್ರಹಕ್ಕೆ ಪೂಜೆ ನೆರವೇರಿಸಿ ಅವರು ಮಾತನಾಡಿದರು.</p>.<p>ದೇವಾಲಯ ಸಂಸ್ಕೃತಿ, ಆಚಾರ, ವಿಚಾರಗಳಿಗೆ ವಿಶೇಷ ಮಹತ್ವ, ಮನ್ನಣೆ ಇರುತ್ತದೆ. ಇದನ್ನು ನಿರ್ವಿಘ್ನವಾಗಿ ನೆರವೇರಿಸುವ ಕೆಲಸವನ್ನು ಭಕ್ತರು ಮಾಡುವ ಮೂಲಕ ಈ ಕೇಂದ್ರದ ಮಹತ್ವವನ್ನು ಸಾರಬೇಕು.ಭಕ್ತ ಮತ್ತು ಭಗವಂತನ ನಡುವೆ ಸಂಬಂಧ ಹೆಚ್ಚುವ ರೀತಿಯಲ್ಲಿ ಶ್ರೀನಿವಾಸನ ಭಕ್ತರಾದ ರಾಘವೇಂದ್ರ ಸ್ವಾಮಿಗಳ ಮಠ ಇಲ್ಲಿ ಈಗಾಗಲೇ ನೆಲೆ ನಿಂತಿದೆ. ಸಹಜವಾಗಿ ಇಂದು ಶ್ರೀನಿವಾಸ ಇಲ್ಲಿ ನೆಲೆ ನಿಲ್ಲುವಂತ ಸಂದರ್ಭ ಸೃಷ್ಟಿಯಾಗಿದೆ ಎಂದರು.</p>.<p>ಟ್ರಸ್ಟ್ ಅಧ್ಯಕ್ಷರಾದ ವಾಸುದೇವಮೂರ್ತಿ, ರಾಘವೇಂದ್ರ ಮಧುಸೂದನ, ಶ್ರೀನಿವಾಸಾಚಾರ್, ರಾಮಚಂದ್ರಾಚಾರ್, ಗೋಪಾಲಕೃಷ್ಣಾಚಾರ್,ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್, ಪೌರಾಯುಕ್ತ ಪರಮೇಶ್ವರ ಇದ್ದರು.</p>.<p>ಇದಕ್ಕೂ ಮುನ್ನ ಸ್ವಾಮೀಜಿಗಳ ಪಾದಪೂಜೆ ನಡೆಯಿತು. ಭಕ್ತರಿಗೆ ಪ್ರಸಾದ ವಿನಿಯೋಗ ನಡೆಯಿತು. ವಿವಿಧ ಗಣ್ಯರು ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>