‘ಜಾತಿ, ಧರ್ಮ ಮೀರಿ ವಿದ್ಯಾರ್ಥಿಗಳು ಜಾತ್ಯತೀತ ಚಿಂತನೆ ಬೆಳೆಸಿಕೊಳ್ಳಬೇಕು. ಇತ್ತೀಚೆಗೆ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸಮವಸ್ತ್ರ ಸಂಹಿತೆ ಉಲ್ಲಂಘನೆ ಪ್ರಯತ್ನ ನಡೆದಿದೆ. ಅದಕ್ಕೆ ಕಾಲೇಜು ಆಡಳಿತ ಮಂಡಳಿ ಅವಕಾಶ ನೀಡಿಲ್ಲ. ಶಾಲಾ, ಕಾಲೇಜು ಆಂತರಿಕ ನಿಯಮ ಪಾಲನೆಗೆ ರಾಜಿ ಬೇಕಿಲ್ಲ’ ಎಂದುಹೇಳಿದರು.