<p><strong>ತೀರ್ಥಹಳ್ಳಿ</strong>: ರಾಮೇಶ್ವರ ದೇವಸ್ಥಾನದ ಹಿಂಭಾಗದ ತುಂಗಾ ನದಿಯ ಚಕ್ರತೀರ್ಥದ ಸಮೀಪ ನೀರಿನಲ್ಲಿ ಈಜಲು ತೆರಳಿದ್ದ ಮಹಾರಾಷ್ಟ್ರದ ಯುವಕ ಮೃತಪಟ್ಟಿದ್ದಾನೆ.</p>.<p>ಮೃತ ಯುವಕನನ್ನು ವಿಕಾಸ್ ಬೋಸ್ಥೆ (18) ಎಂದು ಗುರುತಿಸಲಾಗಿದೆ. ಎಳ್ಳಮಾಸ್ಯೆ ಜಾತ್ರೆ ಇದ್ದಿದ್ದರಿಂದ ಅಂಗಡಿ ಹಾಕಲು ಬಂದಿದ್ದ ಯುವಕ ಮಧ್ಯಾಹ್ನ ಈಜಲು ತೆರಳಿದ್ದ. ಈ ವೇಳೇ ನೀರಿನ ಸೆಳೆತ ಹೆಚ್ಚಾಗಿ ನದಿಯಲ್ಲಿ ಮುಳುಗಿ ಮೃತಪಟ್ಟಿದ್ದಾನೆ.</p>.<p>ಅಗ್ನಿಶಾಮಕ ದಳದ ಸಿಬ್ಬಂದಿ, ಕುರುವಳ್ಳಿಯ ಮುಳುಗು ತಜ್ಞ ಪ್ರಮೋದ್ ಪೂಜಾರಿ ನೀರಿನಲ್ಲಿ ಶೋಧಾಚರಣೆ ನಡೆಸಿದ್ದರು. ಆದರೆ, ಮೃತದೇಹ ಸಿಕ್ಕಿರಲಿಲ್ಲ. ಸಂಜೆ ಈಶ್ವರ್ ಮಲ್ಪೆ ನೇತೃತ್ವದಲ್ಲಿ ಶೋಧ ನಡೆಸಿದಾಗ ಮೃತದೇಹ ಪತ್ತೆಯಾಗಿದೆ. ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತೀರ್ಥಹಳ್ಳಿ</strong>: ರಾಮೇಶ್ವರ ದೇವಸ್ಥಾನದ ಹಿಂಭಾಗದ ತುಂಗಾ ನದಿಯ ಚಕ್ರತೀರ್ಥದ ಸಮೀಪ ನೀರಿನಲ್ಲಿ ಈಜಲು ತೆರಳಿದ್ದ ಮಹಾರಾಷ್ಟ್ರದ ಯುವಕ ಮೃತಪಟ್ಟಿದ್ದಾನೆ.</p>.<p>ಮೃತ ಯುವಕನನ್ನು ವಿಕಾಸ್ ಬೋಸ್ಥೆ (18) ಎಂದು ಗುರುತಿಸಲಾಗಿದೆ. ಎಳ್ಳಮಾಸ್ಯೆ ಜಾತ್ರೆ ಇದ್ದಿದ್ದರಿಂದ ಅಂಗಡಿ ಹಾಕಲು ಬಂದಿದ್ದ ಯುವಕ ಮಧ್ಯಾಹ್ನ ಈಜಲು ತೆರಳಿದ್ದ. ಈ ವೇಳೇ ನೀರಿನ ಸೆಳೆತ ಹೆಚ್ಚಾಗಿ ನದಿಯಲ್ಲಿ ಮುಳುಗಿ ಮೃತಪಟ್ಟಿದ್ದಾನೆ.</p>.<p>ಅಗ್ನಿಶಾಮಕ ದಳದ ಸಿಬ್ಬಂದಿ, ಕುರುವಳ್ಳಿಯ ಮುಳುಗು ತಜ್ಞ ಪ್ರಮೋದ್ ಪೂಜಾರಿ ನೀರಿನಲ್ಲಿ ಶೋಧಾಚರಣೆ ನಡೆಸಿದ್ದರು. ಆದರೆ, ಮೃತದೇಹ ಸಿಕ್ಕಿರಲಿಲ್ಲ. ಸಂಜೆ ಈಶ್ವರ್ ಮಲ್ಪೆ ನೇತೃತ್ವದಲ್ಲಿ ಶೋಧ ನಡೆಸಿದಾಗ ಮೃತದೇಹ ಪತ್ತೆಯಾಗಿದೆ. ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>