ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕಿತ್ಸೆಗಾಗಿ ಚಾರ್ಮಾಡಿ ಘಾಟ್‌ ಮುೂಲಕ ಪಯಣ: 3 ತಾಸಿನಲ್ಲಿ ಮಂಗಳೂರು ತಲುಪಿದ ಮಗು

Last Updated 8 ಅಕ್ಟೋಬರ್ 2020, 3:47 IST
ಅಕ್ಷರ ಗಾತ್ರ

ಶಿವಮೊಗ್ಗ: ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿಹೃದಯ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದ ಎರಡು ವರ್ಷದ ಮಗುವನ್ನು ಚಿಕ್ಕಮಗಳೂರು, ಚಾರ್ಮಾಡಿ ಘಾಟ್ ಮೂಲಕ ಮಂಗಳೂರಿಗೆ ಮೂರು ತಾಸುಗಳ ಅವಧಿಯಲ್ಲಿ ತಲುಪಿಸಲಾಗಿದೆ.

ಶಿಕಾರಿಪುರ ತಾಲ್ಲೂಕು ಶಿರಾಳಕೊಪ್ಪದ ದಾಸರ ಕಾಲೊನಿಯ ದಾದಾಪೀರ್ ಅವರಎರಡುವರ್ಷದ ಮಗುವಿಗೆ ಮಂಗಳೂರಿನಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಬೇಕಿತ್ತು. ಶಿರಾಳಕೊಪ್ಪದ ಜಾಫರ್ ಯಾಬ್ ಅವರ ನೇತೃತ್ವದಲ್ಲಿ ಯುವಕರು ದೇಣಿಗೆ ಎತ್ತಿ ಚಿಕಿತ್ಸೆಗೆ ನೆರವು ನೀಡಿದ್ದರು. ಚಿಕ್ಕಮಗಳೂರಿನ ಟ್ರಸ್ಟ್‌ವೊಂದು ಆಂಬುಲೆನ್ಸ್‌ ವ್ಯವಸ್ಥೆ ಮಾಡಿತ್ತು.

‘ಶಿವಮೊಗ್ಗದಿಂದ ಬುಧವಾರ ಬೆಳಿಗ್ಗೆ 10.30ಕ್ಕೆ ಹೊರಟ ವಾಹನಕ್ಕೆ ಕಡೂರು ಮಾರ್ಗದಲ್ಲಿ ವಾಹನದಟ್ಟಣೆ ಹೆಚ್ಚಾದ ಕಾರಣ ಚಿಕ್ಕಮಗಳೂರು ಪೊಲೀಸರ ಸಹಾಯ ಪಡೆದು ಅಲ್ಲಿಂದ ಜೀರೊ ಟ್ರಾಫಿಕ್‌ನಲ್ಲಿಮಧ್ಯಾಹ್ನ ಮಂಗಳೂರು ತಲುಪಿದೆವು’ ಎಂದು ಜಾಫರ್ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT