ಮುಜರಾಯಿ ವಶದಲ್ಲಿದ್ದ ಗೋಕರ್ಣ ದೇವಸ್ಥಾನವನ್ನು 2008ರಲ್ಲಿಬಿ.ಎಸ್.ಯಡಿಯೂರಪ್ಪ ಅವರು ಅಲ್ಲಿದ್ದ ಬಂಗಾರ, ಬೆಳ್ಳಿ, ವಜ್ರ, ವೈಡೂರ್ಯ, ಕೋಟ್ಯಂತರ ಹಣವಿದ್ದ ಹುಂಡಿ ಸಮೇತ ಭಾರೀ ವಿರೋಧದ ಮಧ್ಯೆಯೂ ರಾಘವೇಶ್ವರ ಸ್ವಾಮಿ ಅವರ ವಶಕ್ಕೆ ನೀಡಿದ್ದರು.ಈಗ ರಾಮಪ್ಪ ಅವರ ವಶದಲ್ಲಿದ್ದರುವ ಹಿಂದುಳಿದ ವರ್ಗದ ದೇವಸ್ಥಾನ ಸಿಗಂದೂರನ್ನು ಸರ್ಕಾರದ ವಶಕ್ಕೆ ಪಡೆಯುವ ಹುನ್ನಾರ ರೂಪಿಸಿದ್ದಾರೆ. ಆರ್ಎಸ್ಎಸ್ಕಾರ್ಯಸೂಚಿ ಜಾರಿಗೆ ತರುವ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಲೆಲ್ಲಾ ಈ ರೀತಿಯ ಅನಾಹುತಕಾರಿ ಕೆಲಸಗಳನ್ನು ಯಾವುದೇ ಅಂಜಿಕೆ ಇಲ್ಲದೇ ಮಾಡುತ್ತಿದೆ. ಯಡಿಯೂರಪ್ಪ ಅವರು ಹಿಂದುಳಿದ ವರ್ಗಗಳ ವಿರೋಧಿ ಎನ್ನುವುದನ್ನು ಪದೇಪದೆದೃಢಪಡಿಸುತ್ತಿದ್ದಾರೆ ಎಂದು ಪ್ರಕಟಣೆಯಲ್ಲಿ ದೂರಿದ್ದಾರೆ.