<p><strong>ತೀರ್ಥಹಳ್ಳಿ:</strong> ಬೆಂಗಳೂರಿನ ರಂಗ ಸಂಪದ ತಂಡದಿಂದ ಚಲನಚಿತ್ರ ನಟಿ, ರಂಗಭೂಮಿ ಕಲಾವಿದೆ ಉಮಾಶ್ರೀ ಅಭಿನಯದ ‘ಶರ್ಮಿಷ್ಠೆ’ ಏಕವ್ಯಕ್ತಿ ನಾಟಕ ಪ್ರದರ್ಶನ ಜುಲೈ 13ರಂದು ಸಂಜೆ 6.30ಕ್ಕೆ ಇಲ್ಲಿನ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ನಟಮಿತ್ರರು ತಂಡದ ಅಧ್ಯಕ್ಷ ಸಂದೇಶ ಜವಳಿ ಹೇಳಿದರು. </p>.<p>ರಥಬೀದಿಯ ರಾಮಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪುರಾಣದ ಯಾಯಾತಿ ಹೆಂಡತಿ ಶರ್ಮಿಷ್ಠೆಯನ್ನು ಕೇಂದ್ರೀಕರಿಸಿ ನಾಟಕ ರಚಿಸಲಾಗಿದೆ ಎಂದರು. </p>.<p>ಅತ್ಯಂತ ಸಂಕೀರ್ಣ ವ್ಯಕ್ತಿತ್ವವುಳ್ಳ, ವರ್ತಮಾನದ ನೆಲೆಗಟ್ಟಿನಲ್ಲಿ ನಿಂತು ಪ್ರಶ್ನಿಸುತ್ತಾ ನಮ್ಮನ್ನು ಆವರಿಸಿಕೊಳ್ಳುವ ಶರ್ಮಿಷ್ಠೆಯ ಪಾತ್ರ ಎಂದಿಗೂ ಪ್ರಸ್ತುತ. ಯಾಯಾತಿ ಮತ್ತು ಅವನ ಮಗ ಪುರು ಹಾಗೂ ಶರ್ಮಿಷ್ಠೆಯ ಮಧ್ಯೆ ಏರ್ಪಡುವ ತ್ರಿಕೋನ ಸಂಘರ್ಷ, ಹಲವು ಆಯಾಮಗಳನ್ನು ಅನಾವರಣಗೊಳಿಸುತ್ತದೆ. </p>.<p>ನಾಟಕವನ್ನು ಬೇಲೂರು ರಘುನಂದನ್ ರಚಿಸಿದ್ದಾರೆ. ರಂಗನಿರ್ದೇಶಕ ಚಿದಂಬರರಾವ್ ಜಂಬೆ ನಿರ್ದೇಶಿಸಿದ್ದಾರೆ. ಅನೂಷ್ ಶೆಟ್ಟಿ ಸಂಗೀತ, ವಸ್ತ್ರವಿನ್ಯಾಸ ರಂಗ ಸಜ್ಜಿಕೆ ಮತ್ತು ರಂಗಪರಿಕರಗಳ ನಿರ್ವಹಣೆ ಪ್ರಮೋದ್ ಶಿಗ್ಗಾಂವ್ ನಿರ್ವಹಿಸುತ್ತಿದ್ದಾರೆ. </p>.<p>ಆಶಾ ಡೇನಿಯೆಲ್, ಸತೀಶ್ ಹೊರಣಿ, ಚೇತನ್ ಜಿ., ಶಿವಾಜಿ, ಹರಿ ವಿನಾಯಕ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತೀರ್ಥಹಳ್ಳಿ:</strong> ಬೆಂಗಳೂರಿನ ರಂಗ ಸಂಪದ ತಂಡದಿಂದ ಚಲನಚಿತ್ರ ನಟಿ, ರಂಗಭೂಮಿ ಕಲಾವಿದೆ ಉಮಾಶ್ರೀ ಅಭಿನಯದ ‘ಶರ್ಮಿಷ್ಠೆ’ ಏಕವ್ಯಕ್ತಿ ನಾಟಕ ಪ್ರದರ್ಶನ ಜುಲೈ 13ರಂದು ಸಂಜೆ 6.30ಕ್ಕೆ ಇಲ್ಲಿನ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ನಟಮಿತ್ರರು ತಂಡದ ಅಧ್ಯಕ್ಷ ಸಂದೇಶ ಜವಳಿ ಹೇಳಿದರು. </p>.<p>ರಥಬೀದಿಯ ರಾಮಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪುರಾಣದ ಯಾಯಾತಿ ಹೆಂಡತಿ ಶರ್ಮಿಷ್ಠೆಯನ್ನು ಕೇಂದ್ರೀಕರಿಸಿ ನಾಟಕ ರಚಿಸಲಾಗಿದೆ ಎಂದರು. </p>.<p>ಅತ್ಯಂತ ಸಂಕೀರ್ಣ ವ್ಯಕ್ತಿತ್ವವುಳ್ಳ, ವರ್ತಮಾನದ ನೆಲೆಗಟ್ಟಿನಲ್ಲಿ ನಿಂತು ಪ್ರಶ್ನಿಸುತ್ತಾ ನಮ್ಮನ್ನು ಆವರಿಸಿಕೊಳ್ಳುವ ಶರ್ಮಿಷ್ಠೆಯ ಪಾತ್ರ ಎಂದಿಗೂ ಪ್ರಸ್ತುತ. ಯಾಯಾತಿ ಮತ್ತು ಅವನ ಮಗ ಪುರು ಹಾಗೂ ಶರ್ಮಿಷ್ಠೆಯ ಮಧ್ಯೆ ಏರ್ಪಡುವ ತ್ರಿಕೋನ ಸಂಘರ್ಷ, ಹಲವು ಆಯಾಮಗಳನ್ನು ಅನಾವರಣಗೊಳಿಸುತ್ತದೆ. </p>.<p>ನಾಟಕವನ್ನು ಬೇಲೂರು ರಘುನಂದನ್ ರಚಿಸಿದ್ದಾರೆ. ರಂಗನಿರ್ದೇಶಕ ಚಿದಂಬರರಾವ್ ಜಂಬೆ ನಿರ್ದೇಶಿಸಿದ್ದಾರೆ. ಅನೂಷ್ ಶೆಟ್ಟಿ ಸಂಗೀತ, ವಸ್ತ್ರವಿನ್ಯಾಸ ರಂಗ ಸಜ್ಜಿಕೆ ಮತ್ತು ರಂಗಪರಿಕರಗಳ ನಿರ್ವಹಣೆ ಪ್ರಮೋದ್ ಶಿಗ್ಗಾಂವ್ ನಿರ್ವಹಿಸುತ್ತಿದ್ದಾರೆ. </p>.<p>ಆಶಾ ಡೇನಿಯೆಲ್, ಸತೀಶ್ ಹೊರಣಿ, ಚೇತನ್ ಜಿ., ಶಿವಾಜಿ, ಹರಿ ವಿನಾಯಕ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>