ವರ್ಷದ ಹಿಂದೆಯೇ ಕಟ್ಟಿನಕಾರು– ಕಾರಣಿ ನೆಟ್ವರ್ಕ್ ಹೋರಾಟ ಸಮಿತಿ ಸಾಮೂಹಿಕ ನಾಯಕತ್ವದಲ್ಲಿ ಮೊಬೈಲ್ ನೆಟ್ವರ್ಕ್ ಸಮಸ್ಯೆ ವಿರುದ್ಧ ಹೋರಾಟಕ್ಕೆ ಮುಂದಾಗಿದ್ದರು. ‘ಆರು ಸಾವಿರಕ್ಕೂ ಹೆಚ್ಚು ಜನ ವಸತಿ ಇರುವ ಪ್ರದೇಶದಲ್ಲಿ ಮೊಬೈಲ್ ನೆಟ್ವರ್ಕ್ ಇಲ್ಲದೆ ಇರುವುದರಿಂದ ಹಲವು ರೀತಿಯ ಸೇವೆಗಳಿಂದ ಈ ಭಾಗದ ಜನರು ವಂಚಿತರಾಗುವಂತಾಗಿದೆ’ ಎನ್ನುತ್ತಾರೆ ಸಮಿತಿಯ ಪ್ರಮುಖರಾದ ರಾಜಕುಮಾರ್, ಉದಯ್, ಗೌತಮ್ ಹೆಗ್ಗಡೆ.