<p><strong>ಶಿರಾಳಕೊಪ್ಪ:</strong> ಸಮೀಪದ ಕಡೇನಂದಿಹಳ್ಳಿ ಗ್ರಾಮದ ‘ವಿಷ್ಣು ದಾದ’ ಎನ್ನುವ ಹೋರಿಯು ಮಂಗಳವಾರ ಮೃತಪಟ್ಟಿದೆ.</p>.<p>ಹೋರಿ ಹಬ್ಬದ ಅಭಿಮಾನಿಗಳಿಗೆ ಚಿರಪರಿಚಿತವಾಗಿದ್ದ ಈ ಹೋರಿಯು ಶಿಕಾರಿಪುರ, ಸೊರಬ, ಹಾನಗಲ್, ಹಾವೇರಿ, ರಾಣೆಬೆನ್ನೂರು ಸೇರಿ ಶಿವಮೊಗ್ಗ, ಹಾವೇರಿ ಜಿಲ್ಲೆಯ ಹೋರಿ ಹಬ್ಬದ ಸ್ಪರ್ಧೆಯಲ್ಲಿ ಸಾಕಷ್ಟು ಬಹುಮಾನಗಳನ್ನು ಪಡೆದಿದೆ.</p>.<p>ಅಕ್ಕಿ ಆಲೂರಿನಲ್ಲಿ ಫ್ರಿಜ್, ಶಿಗ್ಗದಲ್ಲಿ ಗಾಡ್ರೇಜ್, ಕೋಡದಲ್ಲಿ ಉಂಗುರ, ಮಾಸೂರಿನಲ್ಲಿ ಬೆಳ್ಳಿ ಗದೆ ಪಡೆಯುವ ಮೂಲಕ ಗ್ರಾಮಕ್ಕೆ ಕೀರ್ತಿ ತಂದಿದೆ. ಹೋರಿಯನ್ನು ಗ್ರಾಮದ ಯುವಕರು ಟ್ರ್ಯಾಕ್ಟರ್ನಲ್ಲಿ ಮೆರವಣಿಗೆ ಮಾಡಿ ಅಂತ್ಯಸಂಸ್ಕಾರ ಮಾಡಿದರು.</p>.<p>‘ಹೋರಿಯನ್ನು 6 ವರ್ಷಗಳಿಂದ ಮನೆಯ ಮಗುವಿನಂತೆ ಸಾಕಿದ್ದೆವು. ಕಳೆದ ವಾರ ₹ 2 ಲಕ್ಷಕ್ಕೆ ಕೇಳಿದ್ದರು. ಕೊಡದೆ, ಪ್ರಿತಿಯಿಂದ ಉಳಿಸಿಕೊಂಡಿದ್ದೆವು. ಈಗ ಮೃತ ಪಟ್ಟಿರುವುದು ತುಂಬಾ ನೋವು ತಂದಿದೆ’ ಎಂದು ಹೋರಿ ಮಾಲೀಕ ಶರತ್ ಗಂಗಪ್ಪಳ್ಳಿ<br />ಪ್ರತಿಕ್ರಿಯಿಸಿದರು.</p>.<p>ವಿಷ್ಣು ದಾದ ಗೆಳೆಯರ ಬಳಗದ ಸುನಿಲ್ ಮುತ್ತಿಗೆ, ಎಸ್.ದಿನೇಶ್, ಬಿ.ಪಿ.ಶರಣ, ಬಸವರಾಜ್ ಗಂಗಪ್ಪಳ್ಳಿ, ಕುಮಾರ್ ಮಟ್ಟಿಮನಿ ಸೇರಿ ಪ್ರಮುಖರು ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿರಾಳಕೊಪ್ಪ:</strong> ಸಮೀಪದ ಕಡೇನಂದಿಹಳ್ಳಿ ಗ್ರಾಮದ ‘ವಿಷ್ಣು ದಾದ’ ಎನ್ನುವ ಹೋರಿಯು ಮಂಗಳವಾರ ಮೃತಪಟ್ಟಿದೆ.</p>.<p>ಹೋರಿ ಹಬ್ಬದ ಅಭಿಮಾನಿಗಳಿಗೆ ಚಿರಪರಿಚಿತವಾಗಿದ್ದ ಈ ಹೋರಿಯು ಶಿಕಾರಿಪುರ, ಸೊರಬ, ಹಾನಗಲ್, ಹಾವೇರಿ, ರಾಣೆಬೆನ್ನೂರು ಸೇರಿ ಶಿವಮೊಗ್ಗ, ಹಾವೇರಿ ಜಿಲ್ಲೆಯ ಹೋರಿ ಹಬ್ಬದ ಸ್ಪರ್ಧೆಯಲ್ಲಿ ಸಾಕಷ್ಟು ಬಹುಮಾನಗಳನ್ನು ಪಡೆದಿದೆ.</p>.<p>ಅಕ್ಕಿ ಆಲೂರಿನಲ್ಲಿ ಫ್ರಿಜ್, ಶಿಗ್ಗದಲ್ಲಿ ಗಾಡ್ರೇಜ್, ಕೋಡದಲ್ಲಿ ಉಂಗುರ, ಮಾಸೂರಿನಲ್ಲಿ ಬೆಳ್ಳಿ ಗದೆ ಪಡೆಯುವ ಮೂಲಕ ಗ್ರಾಮಕ್ಕೆ ಕೀರ್ತಿ ತಂದಿದೆ. ಹೋರಿಯನ್ನು ಗ್ರಾಮದ ಯುವಕರು ಟ್ರ್ಯಾಕ್ಟರ್ನಲ್ಲಿ ಮೆರವಣಿಗೆ ಮಾಡಿ ಅಂತ್ಯಸಂಸ್ಕಾರ ಮಾಡಿದರು.</p>.<p>‘ಹೋರಿಯನ್ನು 6 ವರ್ಷಗಳಿಂದ ಮನೆಯ ಮಗುವಿನಂತೆ ಸಾಕಿದ್ದೆವು. ಕಳೆದ ವಾರ ₹ 2 ಲಕ್ಷಕ್ಕೆ ಕೇಳಿದ್ದರು. ಕೊಡದೆ, ಪ್ರಿತಿಯಿಂದ ಉಳಿಸಿಕೊಂಡಿದ್ದೆವು. ಈಗ ಮೃತ ಪಟ್ಟಿರುವುದು ತುಂಬಾ ನೋವು ತಂದಿದೆ’ ಎಂದು ಹೋರಿ ಮಾಲೀಕ ಶರತ್ ಗಂಗಪ್ಪಳ್ಳಿ<br />ಪ್ರತಿಕ್ರಿಯಿಸಿದರು.</p>.<p>ವಿಷ್ಣು ದಾದ ಗೆಳೆಯರ ಬಳಗದ ಸುನಿಲ್ ಮುತ್ತಿಗೆ, ಎಸ್.ದಿನೇಶ್, ಬಿ.ಪಿ.ಶರಣ, ಬಸವರಾಜ್ ಗಂಗಪ್ಪಳ್ಳಿ, ಕುಮಾರ್ ಮಟ್ಟಿಮನಿ ಸೇರಿ ಪ್ರಮುಖರು ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>