ಪ್ರವೀಣ್ ಮಾಡಿದ ತಪ್ಪಿಗೆ ಆತನ ತಾಯಿ ಹಾಗೂ ಸಹೋದರಿ ಕುರುವಳ್ಳಿಯಲ್ಲಿ ಬಹಿಷ್ಕಾರ ಶಿಕ್ಷೆಗೆ ಗುರಿಯಾಗಿದ್ದಾರೆ ಎನ್ನಲಾಗಿದೆ. ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರನ್ನು ಭೇಟಿ ಮಾಡಿದ ಅಮ್ಮ, ಮಗಳು, ‘ತಾವು ಊರಿನಲ್ಲಿ ಯಾರನ್ನಾದರೂ ಮಾತನಾಡಿಸಿದರೆ ₹ 1,000 ದಂಡ ವಿಧಿಸಲಾಗುತ್ತದೆ. ಆ ಬಗ್ಗೆ ದೇವಸ್ಥಾನದಲ್ಲಿ ಗಂಟೆ ಬಾರಿಸಲಾಗಿದೆ. ಜಮೀನಿಗೆ ನೀರು, ವಿದ್ಯುತ್ ಮತ್ತು ಮೂಲ ಸೌಕರ್ಯ ಕಡಿತಗೊಳಿಸಲಾಗಿದೆ’ ಎಂದು ಅಲವತ್ತುಕೊಂಡರು.