ಸಾಂಸ್ಕೃತಿಕ, ಸೈದ್ಧಾಂತಿಕ, ರಾಜಕೀಯವಾದ ಭಿನ್ನಮತ, ಭಿನ್ನಧ್ವನಿಗಳನ್ನು ಸಂಭ್ರಮಿಸುವ ಮನೋಧರ್ಮ ಮಾಧ್ಯಮಗಳಿಗೆ ಇರಬೇಕು. ಆದರೆ, ಇಂದಿನ ಹಲವು ಮಾಧ್ಯಮಗಳು ಇದನ್ನು ಸಹಿಸುವ ಸಹನೆಯನ್ನು ತೋರುತ್ತಿಲ್ಲ. ಪ್ರಭುತ್ವದ ಷಡ್ಯಂತ್ರವನ್ನು ಬಯಲು ಮಾಡುವ ಕೆಲವೇ ಮಾಧ್ಯಮ ಉಳಿದಿದ್ದು ಅಂತಹವುಗಳ ಶಕ್ತಿಯನ್ನು ಕೂಡ ಹತ್ತಿಕ್ಕುವ ಕೆಲಸ ನಡೆಯುತ್ತಿದೆ ಎಂದು ಹೇಳಿದರು.