<p><strong>ಸಾಗರ:</strong> ಹಲವು ಹೊಸ ಪ್ರಸಂಗಗಳು ಬರುತ್ತಿದ್ದರೂ ಪೌರಾಣಿಕ ಪ್ರಸಂಗಗಳಿಂದ ಯಕ್ಷಗಾನ ಹಾಗೂ ತಾಳಮದ್ದಲೆ ಕಲೆಯ ಸತ್ವ ಉಳಿದಿದೆ ಎಂದು ವೈದ್ಯ ಲೇಖಕ ಡಾ.ಎಚ್.ಎಸ್.ಮೋಹನ್ ಹೇಳಿದರು.</p><p>ಇಲ್ಲಿನ ಶ್ರೀನಗರ ಬಡಾವಣೆಯ ನೃತ್ಯಭಾಸ್ಕರ ಸಭಾಂಗಣದಲ್ಲಿ ಶ್ರೀರಾಜರಾಜೇಶ್ವರಿ ಕೃಪಾಪೋಷಿತ ವಂಶವಾಹಿನಿ ಯಕ್ಷಮೇಳ ಸೋಮವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ರಮೇಶ್ ಹೆಗಡೆ ಗುಂಡೂಮನೆ ರಚಿಸಿರುವ ‘ದ್ರೋಣ ವಿಜಯ’ ನೂತನ ತಾಳಮದ್ದಲೆ ಪ್ರಸಂಗವನ್ನು ಬಿಡುಗಡೆ ಮಾಡಿ ಮಾತನಾಡಿದರು.</p><p>ಪ್ರಯೋಗಶೀಲತೆಯ ಹೆಸರಿನಲ್ಲಿ ಹಲವು ಹೊಸ ಪ್ರಸಂಗಗಳಿಂದ ಯಕ್ಷಗಾನ ಕಲೆಯ ಮೂಲ ಆಶಯಗಳಿಗೆ ಧಕ್ಕೆ ಉಂಟಾಗುತ್ತಿದೆ. ಹೊಸ ಪ್ರಸಂಗಗಳು ಕಲೆಯ ಮೂಲ ಸ್ವರೂಪಕ್ಕೆ ನಿಷ್ಟವಾಗಿರಬೇಕು. ಪೌರಾಣಿಕ ಪ್ರಸಂಗಗಳು ಆ ಕೆಲಸವನ್ನು ಮೊದಲಿನಿಂದಲೂ ಮಾಡುತ್ತಿವೆ ಎಂದು ಅವರು ಹೇಳಿದರು.</p><p>ಯಕ್ಷಗಾನ ಪೋಷಕರಾದ ಪದ್ಮಾವತಮ್ಮ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪರಿಸರ ಕಾರ್ಯಕರ್ತ ಚಕ್ರವಾಕ ಸುಬ್ರಮಣ್ಯ, ಬಿ.ಕೆ.ಲಕ್ಷ್ಮಿನಾರಾಯಣ ಕೌಲಕೈ ಇದ್ದರು.</p>.<p>ನಂತರ ದ್ರೋಣ ವಿಜಯ ತಾಳಮದ್ದಲೆ ಪ್ರಸಂಗದ ಪ್ರಸ್ತುತಿ ನಡೆಯಿತು. ಸೂರ್ಯನಾರಾಯಣ ಹೆಗಡೆ ಗುಂಡೂಮನೆ, ಸೃಜನ್ ಗಣೇಶ್ ಹೆಗಡೆ, ಶರತ್ ಜಾನಕೈ, ನಾಗಭೂಷಣ ಕೇಡಲಸರ, ಅರುಣ್ ಬೆಂಕಟವಳ್ಳಿ, ರವಿಶಂಕರ್ ಭಟ್, ಅಶೋಕ್ ಕುಮಾರ್ ಹೆಗಡೆ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಾಗರ:</strong> ಹಲವು ಹೊಸ ಪ್ರಸಂಗಗಳು ಬರುತ್ತಿದ್ದರೂ ಪೌರಾಣಿಕ ಪ್ರಸಂಗಗಳಿಂದ ಯಕ್ಷಗಾನ ಹಾಗೂ ತಾಳಮದ್ದಲೆ ಕಲೆಯ ಸತ್ವ ಉಳಿದಿದೆ ಎಂದು ವೈದ್ಯ ಲೇಖಕ ಡಾ.ಎಚ್.ಎಸ್.ಮೋಹನ್ ಹೇಳಿದರು.</p><p>ಇಲ್ಲಿನ ಶ್ರೀನಗರ ಬಡಾವಣೆಯ ನೃತ್ಯಭಾಸ್ಕರ ಸಭಾಂಗಣದಲ್ಲಿ ಶ್ರೀರಾಜರಾಜೇಶ್ವರಿ ಕೃಪಾಪೋಷಿತ ವಂಶವಾಹಿನಿ ಯಕ್ಷಮೇಳ ಸೋಮವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ರಮೇಶ್ ಹೆಗಡೆ ಗುಂಡೂಮನೆ ರಚಿಸಿರುವ ‘ದ್ರೋಣ ವಿಜಯ’ ನೂತನ ತಾಳಮದ್ದಲೆ ಪ್ರಸಂಗವನ್ನು ಬಿಡುಗಡೆ ಮಾಡಿ ಮಾತನಾಡಿದರು.</p><p>ಪ್ರಯೋಗಶೀಲತೆಯ ಹೆಸರಿನಲ್ಲಿ ಹಲವು ಹೊಸ ಪ್ರಸಂಗಗಳಿಂದ ಯಕ್ಷಗಾನ ಕಲೆಯ ಮೂಲ ಆಶಯಗಳಿಗೆ ಧಕ್ಕೆ ಉಂಟಾಗುತ್ತಿದೆ. ಹೊಸ ಪ್ರಸಂಗಗಳು ಕಲೆಯ ಮೂಲ ಸ್ವರೂಪಕ್ಕೆ ನಿಷ್ಟವಾಗಿರಬೇಕು. ಪೌರಾಣಿಕ ಪ್ರಸಂಗಗಳು ಆ ಕೆಲಸವನ್ನು ಮೊದಲಿನಿಂದಲೂ ಮಾಡುತ್ತಿವೆ ಎಂದು ಅವರು ಹೇಳಿದರು.</p><p>ಯಕ್ಷಗಾನ ಪೋಷಕರಾದ ಪದ್ಮಾವತಮ್ಮ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪರಿಸರ ಕಾರ್ಯಕರ್ತ ಚಕ್ರವಾಕ ಸುಬ್ರಮಣ್ಯ, ಬಿ.ಕೆ.ಲಕ್ಷ್ಮಿನಾರಾಯಣ ಕೌಲಕೈ ಇದ್ದರು.</p>.<p>ನಂತರ ದ್ರೋಣ ವಿಜಯ ತಾಳಮದ್ದಲೆ ಪ್ರಸಂಗದ ಪ್ರಸ್ತುತಿ ನಡೆಯಿತು. ಸೂರ್ಯನಾರಾಯಣ ಹೆಗಡೆ ಗುಂಡೂಮನೆ, ಸೃಜನ್ ಗಣೇಶ್ ಹೆಗಡೆ, ಶರತ್ ಜಾನಕೈ, ನಾಗಭೂಷಣ ಕೇಡಲಸರ, ಅರುಣ್ ಬೆಂಕಟವಳ್ಳಿ, ರವಿಶಂಕರ್ ಭಟ್, ಅಶೋಕ್ ಕುಮಾರ್ ಹೆಗಡೆ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>