<p><strong>ಶಿರಾಳಕೊಪ್ಪ:</strong>ಧರ್ಮ ನಿಷ್ಠರಾದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಕುಟುಂಬಕ್ಕೆ ರಾಜ್ಯದ ಚುಕ್ಕಾಣಿ ಮತ್ತೆ ಲಭಿಸಬೇಕು ಎನ್ನುವುದು ತಮ್ಮ ಹೆಬ್ಬಯಕೆ ಎಂದು ಶ್ರೀಶೈಲ ಪೀಠದ ಚನ್ನಸಿದ್ಧರಾಮ ಪಂಡಿತಾರಾಧ್ಯ ಸ್ವಾಮೀಜಿ ಹೇಳಿದರು.</p>.<p>ಪಟ್ಟಣದ ಎಸ್ಜೆಪಿ ಗುರುಕುಲ ಟ್ರಸ್ಟ್ನಲ್ಲಿ ಗುರುವಾರ ಇಂಗ್ಲಿಷ್ ಮಾಧ್ಯಮ ಶಾಲೆ, ಸಮುದಾಯ ಭವನದ ಶಂಕುಸ್ಥಾಪನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.</p>.<p>ಸಮುದಾಯ ಭವನ ಹಾಗೂ ವಸತಿ ಗೃಹಗಳ ನಿರ್ಮಾಣಕ್ಕೆ ಯಡಿಯೂರಪ್ಪ ಅವರು ಮುಖ್ಯಮುಂತ್ರಿ ಗದ್ದುಗೆಯಿಂದ ಇಳಿಯುವ ಎರಡು ದಿನ ಮುನ್ನ ₹ 5 ಕೋಟಿ ಅನುದಾನ ಬಿಡುಗಡೆ ಮಾಡಲು ಆದೇಶಿಸಿದ್ದರು ಎಂದರು.</p>.<p>ಸಂಸದ ಬಿ.ವೈ. ರಾಘವೇಂದ್ರ, ‘ಶ್ರೀಶೈಲಕ್ಕೂ, ಶಿಕಾರಿಪುರಕ್ಕೂ 12ನೇ ಶತಮಾನದಿಂದ ಬಾಂಧವ್ಯ ಇದೆ. ಇದಕ್ಕೆ ಮೂಲ ಕಾರಣೀಭೂತರು ಶಿವಶರಣೆ ಅಕ್ಕಮಹಾದೇವಿ ಹಾಗೂ ಬಳ್ಳಿಗಾವಿಯ ಅಲ್ಲಮ ಪ್ರಭುಗಳು. ಉಡುತಡಿಯ ಕ್ಷೇತ್ರದ ಅಭಿವೃದ್ಧಿಗೆ ₹ 50 ಕೋಟಿ ವೆಚ್ಚದಲ್ಲಿ ಕಾಮಗಾರಿಗಳು ನಡೆಯುತ್ತಿವೆ ಎಂದು ಹೇಳಿದರು.</p>.<p>ತೊಗರ್ಸಿ ಮಳೆಮಠದ ಮಹಾಂತ ದೇಶಿಕೇಂದ್ರ ಸ್ವಾಮೀಜಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಸ್ಥೆ ಕಾರ್ಯದರ್ಶಿ ಡಾ. ಮುರುಘರಾಜ್ ಮಾಹಿತಿ ನೀಡಿದರು. ಸಹ ಕಾರ್ಯದರ್ಶಿ ನಿವೇದಿತಾ ರಾಜು ಸ್ವಾಗತಿಸಿದರು. ಉಪನ್ಯಾಸಕ ವೆಂಕಟೇಶ್ ನಿರೂಪಿಸಿದರು.</p>.<p>ತೊಗರ್ಸಿ ಅಭಿನವ ಮಹಾಂತ ಸ್ವಾಮೀಜಿ, ವೈ. ವೀರೇಂದ್ರ, ಕೊಳಗಿ ರೇವಣಪ್ಪ, ಸವಿತಾ ಶಿವಕುಮಾರ, ಮಂಜುಳಾ ರಾಜು, ರಾಜೇಶ್ವರಿ ವಸಂತ, ಮಕ್ಬೂಲ್ ಸಾಬ್, ಎಚ್.ಎಂ. ಗಂಗಮ್ಮ, ಡಾ. ಶಿವಕುಮಾರ್, ಪ್ರಾಂಶುಪಾಲ ರುದ್ರಯ್ಯ, ಮಠಾಧೀಶರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿರಾಳಕೊಪ್ಪ:</strong>ಧರ್ಮ ನಿಷ್ಠರಾದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಕುಟುಂಬಕ್ಕೆ ರಾಜ್ಯದ ಚುಕ್ಕಾಣಿ ಮತ್ತೆ ಲಭಿಸಬೇಕು ಎನ್ನುವುದು ತಮ್ಮ ಹೆಬ್ಬಯಕೆ ಎಂದು ಶ್ರೀಶೈಲ ಪೀಠದ ಚನ್ನಸಿದ್ಧರಾಮ ಪಂಡಿತಾರಾಧ್ಯ ಸ್ವಾಮೀಜಿ ಹೇಳಿದರು.</p>.<p>ಪಟ್ಟಣದ ಎಸ್ಜೆಪಿ ಗುರುಕುಲ ಟ್ರಸ್ಟ್ನಲ್ಲಿ ಗುರುವಾರ ಇಂಗ್ಲಿಷ್ ಮಾಧ್ಯಮ ಶಾಲೆ, ಸಮುದಾಯ ಭವನದ ಶಂಕುಸ್ಥಾಪನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.</p>.<p>ಸಮುದಾಯ ಭವನ ಹಾಗೂ ವಸತಿ ಗೃಹಗಳ ನಿರ್ಮಾಣಕ್ಕೆ ಯಡಿಯೂರಪ್ಪ ಅವರು ಮುಖ್ಯಮುಂತ್ರಿ ಗದ್ದುಗೆಯಿಂದ ಇಳಿಯುವ ಎರಡು ದಿನ ಮುನ್ನ ₹ 5 ಕೋಟಿ ಅನುದಾನ ಬಿಡುಗಡೆ ಮಾಡಲು ಆದೇಶಿಸಿದ್ದರು ಎಂದರು.</p>.<p>ಸಂಸದ ಬಿ.ವೈ. ರಾಘವೇಂದ್ರ, ‘ಶ್ರೀಶೈಲಕ್ಕೂ, ಶಿಕಾರಿಪುರಕ್ಕೂ 12ನೇ ಶತಮಾನದಿಂದ ಬಾಂಧವ್ಯ ಇದೆ. ಇದಕ್ಕೆ ಮೂಲ ಕಾರಣೀಭೂತರು ಶಿವಶರಣೆ ಅಕ್ಕಮಹಾದೇವಿ ಹಾಗೂ ಬಳ್ಳಿಗಾವಿಯ ಅಲ್ಲಮ ಪ್ರಭುಗಳು. ಉಡುತಡಿಯ ಕ್ಷೇತ್ರದ ಅಭಿವೃದ್ಧಿಗೆ ₹ 50 ಕೋಟಿ ವೆಚ್ಚದಲ್ಲಿ ಕಾಮಗಾರಿಗಳು ನಡೆಯುತ್ತಿವೆ ಎಂದು ಹೇಳಿದರು.</p>.<p>ತೊಗರ್ಸಿ ಮಳೆಮಠದ ಮಹಾಂತ ದೇಶಿಕೇಂದ್ರ ಸ್ವಾಮೀಜಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಸ್ಥೆ ಕಾರ್ಯದರ್ಶಿ ಡಾ. ಮುರುಘರಾಜ್ ಮಾಹಿತಿ ನೀಡಿದರು. ಸಹ ಕಾರ್ಯದರ್ಶಿ ನಿವೇದಿತಾ ರಾಜು ಸ್ವಾಗತಿಸಿದರು. ಉಪನ್ಯಾಸಕ ವೆಂಕಟೇಶ್ ನಿರೂಪಿಸಿದರು.</p>.<p>ತೊಗರ್ಸಿ ಅಭಿನವ ಮಹಾಂತ ಸ್ವಾಮೀಜಿ, ವೈ. ವೀರೇಂದ್ರ, ಕೊಳಗಿ ರೇವಣಪ್ಪ, ಸವಿತಾ ಶಿವಕುಮಾರ, ಮಂಜುಳಾ ರಾಜು, ರಾಜೇಶ್ವರಿ ವಸಂತ, ಮಕ್ಬೂಲ್ ಸಾಬ್, ಎಚ್.ಎಂ. ಗಂಗಮ್ಮ, ಡಾ. ಶಿವಕುಮಾರ್, ಪ್ರಾಂಶುಪಾಲ ರುದ್ರಯ್ಯ, ಮಠಾಧೀಶರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>