‘2000ರಲ್ಲಿ ಶಿವಮೊಗ್ಗ– ಕೊಪ್ಪವೃತ್ತ– ಶೃಂಗೇರಿ ಮಾರ್ಗದ ರಸ್ತೆ, 2013ರಲ್ಲಿ ಕೊಪ್ಪವೃತ್ತ– ಆಗುಂಬೆ ಮಾರ್ಗದ ರಾಷ್ಟ್ರೀಯ ಹೆದ್ದಾರಿ ರಸ್ತೆಯಾಗಿ ಪರಿವರ್ತನೆ ಆಗಿದೆ. ಸಿಎಲ್–7 ಮದ್ಯ ಮಾರಾಟ ಮಳಿಗೆಗೆ ಅನುಮತಿ ನೀಡುವ ಉದ್ದೇಶದಿಂದ ಮಳಿಗೆ ರಾಷ್ಟ್ರೀಯ ಹೆದ್ದಾರಿ ಮಾರ್ಗದ ರಸ್ತೆಯಲ್ಲಿ ಇಲ್ಲ ಎಂದು ಅಬಕಾರಿ ಇಲಾಖೆ ಅಧಿಕಾರಿಗಳು ದಾಖಲೆ ನೀಡಿದ್ದು ಪ್ರಶ್ನಾರ್ಹವಾಗಿದೆ. ಇದಕ್ಕೆ ಅಧಿಕಾರಿಗಳು ತಕ್ಕ ಬೆಲೆ ತೆರಬೇಕಾಗುತ್ತದೆ’ ಎಂದು ಗುಡುಗಿದರು.