<p><strong>ಶಿವಮೊಗ್ಗ: </strong>ನಗರದಲ್ಲಿ ರಾರಾಜಿಸುತ್ತಿರುವ ಅಶ್ಲೀಲ ಚಲನಚಿತ್ರ ಪೋಸ್ಟರ್ ತೆರವಿಗೆ ಮುಂದಾಗದ ಪ್ರಜ್ಞಾವಂತರಲ್ಲಿ ಜಾಗೃತಿ ಮೂಡಿಸಲು ಎಂಜಿನಿಯರಿಂಗ್ ಉದ್ಯೋಗಿಗಳ ತಂಡವೊಂದು ಸಜ್ಜಾಗಿದೆ.<br /> <br /> ‘ಹೈವ್ ಸ್ಪಿರಿಟ್’ (‘ಜೇನುಗೂಡು ಚೇತನ’) ಎಂಬ 22ಉದ್ಯೋಗಿಗಳ ತಂಡ ಈಗಾಗಲೇ ತನ್ನ ಕಾರ್ಯಾಚರಣೆ ಪ್ರಾರಂಭಿಸಿದ್ದು, ನಗರದ ಪ್ರತಿಯೊಂದು ಶಾಲಾ–ಕಾಲೇಜು ಬಳಿಯಿರುವ ಅಶ್ಲೀಲ ಪೋಸ್ಟರ್ ತೆರವು ಮಾಡುವುದಲ್ಲದೇ ಬಣ್ಣ ಬಳಿದು, ಸುಂದರ ಪರಿಸರ ನಿರ್ಮಾಣ ಮಾಡಲು ಮುಂದಾಗಿದೆ.<br /> <br /> ಸ್ವಯಂಪ್ರೇರಿತವಾಗಿ ಸಜ್ಜಾಗಿರುವ ತಂಡ ‘ಕ್ಲೀನ್ ದ ಸಿಟಿ’ ಎಂಬ ಘೋಷವಾಕ್ಯದೊಂದಿಗೆ ನಗರದಲ್ಲಿ ಈಗಾಗಲೇ ಸಂಚಾರ ನಡೆಸುತ್ತಿದೆ. ಅಶ್ಲೀಲ ಪೋಸ್ಟರ್ ನಿರ್ಮೂಲನೆ ಹಾಗೂ ನಗರ ಸ್ವಚ್ಛತೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಹಲವು ಯೋಜನೆಗಳ ರೂಪುರೇಷೆ ತಯಾರು ಮಾಡಿಕೊಂಡಿದೆ.<br /> <br /> ‘ಪ್ರಥಮ ಹಂತದಲ್ಲಿ ಡಿ.ವಿ.ಎಸ್, ಕಸ್ತೂರಬಾ ಕಾಲೇಜುಗಳು, ನಗರ ಕೇಂದ್ರ ಗ್ರಂಥಾಲಯಗಳ ಕಾಂಪೌಂಡ್ ಹಾಗೂ ಗೋಡೆಗಳ ಮೇಲೆ ಅಂಟಿಸಿರುವ ಅಶ್ಲೀಲ ಪೋಸ್ಟರ್ ತೆರವುಗೊಳಿಸಲಾಗುತ್ತದೆ’ ಎಂದು ‘ಹೈವ್ ಸ್ಪಿರಿಟ್’ ತಂಡದ ಸದಸ್ಯ ಅನಿಲ್ ಬನ್ನಿಕೆರೆ ತಿಳಿಸುತ್ತಾರೆ. <br /> <br /> ಇಂತಹ ಪೋಸ್ಟರ್ಗಳಿಂದ ಯುವಕರ ಮೇಲೆ ಬೀರಬಹುದಾದ ಪರಿಣಾಮಗಳ ಕುರಿತು ಜಾಗೃತಿ ಮೂಡಿಸಲು 9ಜನ ಯುವತಿಯರು ಸೇರಿದಂತೆ ಒಟ್ಟು 22ಜನ ಎಂಜಿನಿಯರಿಂಗ್ ಉದ್ಯೋಗಿ ಗಳನ್ನೊಳಗೊಂಡ ತಂಡ ಈಗಾಗಲೇ ಕಾರ್ಯ ಪ್ರವೃತ್ತವಾಗಿದೆ ಎನ್ನುತ್ತಾರೆ ಅವರು.<br /> <br /> ಮುಂದಿನ ದಿನಗಳಲ್ಲಿ ಅಶ್ಲೀಲ ಪೋಸ್ಟರ್ಗಳನ್ನು ಪ್ರಮುಖವಾಗಿ ಶಾಲಾ–ಕಾಲೇಜು ವಲಯ ಹಾಗೂ ಜನದಟ್ಟಣೆ ಪ್ರದೇಶಗಳಲ್ಲಿ ಹಾಕ ಬಾರದು ಎಂಬ ಆಗ್ರಹ ನಮ್ಮದಾಗಿದೆ ಎಂದು ಹೇಳುತ್ತಾರೆ.<br /> <br /> ಕೇವಲ ಶಿವಮೊಗ್ಗ ನಗರಕ್ಕೆ ಮಾತ್ರ ಸೀಮಿತಗೊಳಿಸದೆ, ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿಯೂ ಸಂಚಾರ ಮಾಡಿ, ಸ್ವಚ್ಛತೆ ಕುರಿತು ಜಾಗೃತಿ ಮೂಡಿಸಲು ಕ್ರಿಯಾಯೋಜನೆ ಸಿದ್ದಪಡಿಸಲಾಗುತ್ತಿದೆ ಎಂದು ತಿಳಿಸುತ್ತಾರೆ. <br /> <br /> ನಗರಪಾಲಿಕೆ ಅಧಿಕಾರಿಗಳು ಸಂಸ್ಥೆಯ ಸ್ವಚ್ಛತಾ ಜಾಗೃತಿ ಕಾರ್ಯಕ್ರಮ ನೋಡಿ, ಕೈಜೋಡಿಸುವ ಭರವಸೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ನಗರದ ವಿವಿಧ ವಾರ್ಡ್ ಗಳಿಗೆ ತೆರಳಿ ಸ್ವಚ್ಛತೆ ಕುರಿತು ಜಾಗೃತಿ ಮೂಡಿಸುವ ಯೋಜನೆ ಕೂಡ ನಮ್ಮ ಮುಂದಿದೆ’ ಎಂದು ಅವರು ಹೇಳುತ್ತಾರೆ.<br /> <br /> ಪ್ರಜ್ಞಾವಂತರಲ್ಲಿ ಪರಿಸರ ಕಾಳಜಿ ಮೂಡಿಸಲು ಈ ಕಾರ್ಯಕ್ಕೆ ಮುಂದಾಗಿದ್ದೇವೆ. ಆದರೆ, ಅಶ್ಲೀಲ ಚಿತ್ರಗಳನ್ನು ಗಮನಿಸಿದರೂ ಗಮನಿಸದೆ ಇದ್ದಂಗೆ ಪ್ರಜ್ಞಾವಂತರು ಇರುವುದು ಬೇಸರತರಿಸುತ್ತಿದೆ ಎಂದು ಅವರು ವಿಷಾದ ವ್ಯಕ್ತಪಡಿಸುತ್ತಾರೆ.<br /> <br /> ‘ಹೈವ್ ಸ್ಪಿರಿಟ್’ ಸಂಸ್ಥೆಯಿಂದಲೇ ಸ್ವಚ್ಛತೆ ಕಾಣದ ಕೆಲವು ಪ್ರದೇಶಗಳಿಗೆ ಮೂಲ ಸೌಕರ್ಯ ಕಲ್ಪಿಸಲು ಅನುದಾನ ಕೂಡ ನೀಡಲಾಗಿದೆ. ಬಸ್ ನಿಲ್ದಾಣಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡುವ ಸಲುವಾಗಿ ಕಸದಬುಟ್ಟಿಗಳನ್ನು ಇಡಲಾಗುವುದು ಎಂದು ಅವರು ಮಾಹಿತಿ ನೀಡುತ್ತಾರೆ.<br /> <br /> ‘ನಾವು ಯಾವುದೇ ಅನುದಾನ ಅಪೇಕ್ಷಿಸುತ್ತಿಲ್ಲ. ಶಿವಮೊಗ್ಗ ನಗರವನ್ನು ಸುಂದರ ನಗರವನ್ನಾಗಿ ಮಾಡುವ ಪಣತೊಟ್ಟು, ಇದಕ್ಕೆ ಮುಂದಾಗಿದ್ದೇವೆ ಹೊರತು ಹೆಸರು ಸಂಪಾದಿಸುವುದಕ್ಕೆ ಅಲ್ಲ’ ಎಂದು ಅವರು ಆತ್ಮವಿಶ್ವಾಸದಿಂದ ನುಡಿಯುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿವಮೊಗ್ಗ: </strong>ನಗರದಲ್ಲಿ ರಾರಾಜಿಸುತ್ತಿರುವ ಅಶ್ಲೀಲ ಚಲನಚಿತ್ರ ಪೋಸ್ಟರ್ ತೆರವಿಗೆ ಮುಂದಾಗದ ಪ್ರಜ್ಞಾವಂತರಲ್ಲಿ ಜಾಗೃತಿ ಮೂಡಿಸಲು ಎಂಜಿನಿಯರಿಂಗ್ ಉದ್ಯೋಗಿಗಳ ತಂಡವೊಂದು ಸಜ್ಜಾಗಿದೆ.<br /> <br /> ‘ಹೈವ್ ಸ್ಪಿರಿಟ್’ (‘ಜೇನುಗೂಡು ಚೇತನ’) ಎಂಬ 22ಉದ್ಯೋಗಿಗಳ ತಂಡ ಈಗಾಗಲೇ ತನ್ನ ಕಾರ್ಯಾಚರಣೆ ಪ್ರಾರಂಭಿಸಿದ್ದು, ನಗರದ ಪ್ರತಿಯೊಂದು ಶಾಲಾ–ಕಾಲೇಜು ಬಳಿಯಿರುವ ಅಶ್ಲೀಲ ಪೋಸ್ಟರ್ ತೆರವು ಮಾಡುವುದಲ್ಲದೇ ಬಣ್ಣ ಬಳಿದು, ಸುಂದರ ಪರಿಸರ ನಿರ್ಮಾಣ ಮಾಡಲು ಮುಂದಾಗಿದೆ.<br /> <br /> ಸ್ವಯಂಪ್ರೇರಿತವಾಗಿ ಸಜ್ಜಾಗಿರುವ ತಂಡ ‘ಕ್ಲೀನ್ ದ ಸಿಟಿ’ ಎಂಬ ಘೋಷವಾಕ್ಯದೊಂದಿಗೆ ನಗರದಲ್ಲಿ ಈಗಾಗಲೇ ಸಂಚಾರ ನಡೆಸುತ್ತಿದೆ. ಅಶ್ಲೀಲ ಪೋಸ್ಟರ್ ನಿರ್ಮೂಲನೆ ಹಾಗೂ ನಗರ ಸ್ವಚ್ಛತೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಹಲವು ಯೋಜನೆಗಳ ರೂಪುರೇಷೆ ತಯಾರು ಮಾಡಿಕೊಂಡಿದೆ.<br /> <br /> ‘ಪ್ರಥಮ ಹಂತದಲ್ಲಿ ಡಿ.ವಿ.ಎಸ್, ಕಸ್ತೂರಬಾ ಕಾಲೇಜುಗಳು, ನಗರ ಕೇಂದ್ರ ಗ್ರಂಥಾಲಯಗಳ ಕಾಂಪೌಂಡ್ ಹಾಗೂ ಗೋಡೆಗಳ ಮೇಲೆ ಅಂಟಿಸಿರುವ ಅಶ್ಲೀಲ ಪೋಸ್ಟರ್ ತೆರವುಗೊಳಿಸಲಾಗುತ್ತದೆ’ ಎಂದು ‘ಹೈವ್ ಸ್ಪಿರಿಟ್’ ತಂಡದ ಸದಸ್ಯ ಅನಿಲ್ ಬನ್ನಿಕೆರೆ ತಿಳಿಸುತ್ತಾರೆ. <br /> <br /> ಇಂತಹ ಪೋಸ್ಟರ್ಗಳಿಂದ ಯುವಕರ ಮೇಲೆ ಬೀರಬಹುದಾದ ಪರಿಣಾಮಗಳ ಕುರಿತು ಜಾಗೃತಿ ಮೂಡಿಸಲು 9ಜನ ಯುವತಿಯರು ಸೇರಿದಂತೆ ಒಟ್ಟು 22ಜನ ಎಂಜಿನಿಯರಿಂಗ್ ಉದ್ಯೋಗಿ ಗಳನ್ನೊಳಗೊಂಡ ತಂಡ ಈಗಾಗಲೇ ಕಾರ್ಯ ಪ್ರವೃತ್ತವಾಗಿದೆ ಎನ್ನುತ್ತಾರೆ ಅವರು.<br /> <br /> ಮುಂದಿನ ದಿನಗಳಲ್ಲಿ ಅಶ್ಲೀಲ ಪೋಸ್ಟರ್ಗಳನ್ನು ಪ್ರಮುಖವಾಗಿ ಶಾಲಾ–ಕಾಲೇಜು ವಲಯ ಹಾಗೂ ಜನದಟ್ಟಣೆ ಪ್ರದೇಶಗಳಲ್ಲಿ ಹಾಕ ಬಾರದು ಎಂಬ ಆಗ್ರಹ ನಮ್ಮದಾಗಿದೆ ಎಂದು ಹೇಳುತ್ತಾರೆ.<br /> <br /> ಕೇವಲ ಶಿವಮೊಗ್ಗ ನಗರಕ್ಕೆ ಮಾತ್ರ ಸೀಮಿತಗೊಳಿಸದೆ, ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿಯೂ ಸಂಚಾರ ಮಾಡಿ, ಸ್ವಚ್ಛತೆ ಕುರಿತು ಜಾಗೃತಿ ಮೂಡಿಸಲು ಕ್ರಿಯಾಯೋಜನೆ ಸಿದ್ದಪಡಿಸಲಾಗುತ್ತಿದೆ ಎಂದು ತಿಳಿಸುತ್ತಾರೆ. <br /> <br /> ನಗರಪಾಲಿಕೆ ಅಧಿಕಾರಿಗಳು ಸಂಸ್ಥೆಯ ಸ್ವಚ್ಛತಾ ಜಾಗೃತಿ ಕಾರ್ಯಕ್ರಮ ನೋಡಿ, ಕೈಜೋಡಿಸುವ ಭರವಸೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ನಗರದ ವಿವಿಧ ವಾರ್ಡ್ ಗಳಿಗೆ ತೆರಳಿ ಸ್ವಚ್ಛತೆ ಕುರಿತು ಜಾಗೃತಿ ಮೂಡಿಸುವ ಯೋಜನೆ ಕೂಡ ನಮ್ಮ ಮುಂದಿದೆ’ ಎಂದು ಅವರು ಹೇಳುತ್ತಾರೆ.<br /> <br /> ಪ್ರಜ್ಞಾವಂತರಲ್ಲಿ ಪರಿಸರ ಕಾಳಜಿ ಮೂಡಿಸಲು ಈ ಕಾರ್ಯಕ್ಕೆ ಮುಂದಾಗಿದ್ದೇವೆ. ಆದರೆ, ಅಶ್ಲೀಲ ಚಿತ್ರಗಳನ್ನು ಗಮನಿಸಿದರೂ ಗಮನಿಸದೆ ಇದ್ದಂಗೆ ಪ್ರಜ್ಞಾವಂತರು ಇರುವುದು ಬೇಸರತರಿಸುತ್ತಿದೆ ಎಂದು ಅವರು ವಿಷಾದ ವ್ಯಕ್ತಪಡಿಸುತ್ತಾರೆ.<br /> <br /> ‘ಹೈವ್ ಸ್ಪಿರಿಟ್’ ಸಂಸ್ಥೆಯಿಂದಲೇ ಸ್ವಚ್ಛತೆ ಕಾಣದ ಕೆಲವು ಪ್ರದೇಶಗಳಿಗೆ ಮೂಲ ಸೌಕರ್ಯ ಕಲ್ಪಿಸಲು ಅನುದಾನ ಕೂಡ ನೀಡಲಾಗಿದೆ. ಬಸ್ ನಿಲ್ದಾಣಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡುವ ಸಲುವಾಗಿ ಕಸದಬುಟ್ಟಿಗಳನ್ನು ಇಡಲಾಗುವುದು ಎಂದು ಅವರು ಮಾಹಿತಿ ನೀಡುತ್ತಾರೆ.<br /> <br /> ‘ನಾವು ಯಾವುದೇ ಅನುದಾನ ಅಪೇಕ್ಷಿಸುತ್ತಿಲ್ಲ. ಶಿವಮೊಗ್ಗ ನಗರವನ್ನು ಸುಂದರ ನಗರವನ್ನಾಗಿ ಮಾಡುವ ಪಣತೊಟ್ಟು, ಇದಕ್ಕೆ ಮುಂದಾಗಿದ್ದೇವೆ ಹೊರತು ಹೆಸರು ಸಂಪಾದಿಸುವುದಕ್ಕೆ ಅಲ್ಲ’ ಎಂದು ಅವರು ಆತ್ಮವಿಶ್ವಾಸದಿಂದ ನುಡಿಯುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>