<p><strong>ಭದ್ರಾವತಿ:</strong> `ಅನ್ನ ನೀಡುವ ಭೂಮಿ ನಂಬಿ ಬದುಕುತ್ತಿರುವ ಒಕ್ಕಲಿಗ ಸಮುದಾಯ ಇಂದು ಅನೇಕ ತಲ್ಲಣಗಳಿಗೆ ಒಳಗಾಗಿದೆ. ಇದರಿಂದ ಹೊರಬರಲು ಸಮುದಾಯಕ್ಕೆ ಹಿರಿಕರನ್ನು ಪರಿಚ ಯಿಸುವ ಅಗತ್ಯವಿದೆ' ಎಂದು ಹಂಪಿ ಕನ್ನಡ ವಿ.ವಿ ಕುಲಪತಿ ಡಾ.ಹಿ.ಚಿ. ಬೋರಲಿಂಗಯ್ಯ ಹೇಳಿದರು.<br /> <br /> ಇಲ್ಲಿನ ಎಂಪಿಎಂ ಕಲ್ಯಾಣ ಮಂಟಪದಲ್ಲಿ ಈಚೆಗೆ ಎಂಪಿಎಂ ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘದಿಂದ ಆಯೋಜಿಸಿದ್ದ ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿ ಉಪನ್ಯಾಸ ನೀಡಿ ಮಾತನಾಡಿದರು. <br /> <br /> ಕೆಂಪೇಗೌಡ ಕೇವಲ ಒಬ್ಬರಲ್ಲ ಮೂವರಿದ್ದರು, ಇಮ್ಮಡಿ ಮತ್ತು ಮಮ್ಮುಡಿ ಕೆಂಪೇಗೌಡರು ಬೆಂಗಳೂರು, ಮಾಗಡಿ, ಯಲಹಂಕ ನಗರ ನಿರ್ಮಿ ಸಿದರು. ವಿಜಯನಗರ ಸಾಮ್ರಾಜ್ಯ ಮಾದರಿಯಲ್ಲಿ ಬೆಂಗಳೂರು ನಗರ ನಿರ್ಮಿಸಿರು. ಕೆರೆ, ಕಾಲುವೆ ಕಟ್ಟಿ ವ್ಯವಸಾಯಕ್ಕೆ ಉತ್ತಮ ಅವಕಾಶ ನೀಡಿದರು ಎಂದರು.<br /> <br /> ಇವರ ಕಾರ್ಯಕ್ಷೇತ್ರ ಕೇವಲ ಕೇವಲ ಕೃಷಿಗೆ ಸೀಮಿತವಾಗದೆ ಸಾಹಿತ್ಯ, ಶಿಲ್ಪಕಲೆ, ವಾಣಿಜ್ಯೋ ದ್ಯಮ ಕಡೆಗೂ ಅಡಿಪಾಯ ಹಾಕಿದರು. ಇದರ ಫಲ ಇಂದು ಬೆಂಗಳೂರು ವಿಶ್ವ ಮಟ್ಟದಲ್ಲಿ ಗುರುತಿಸಿ ಕೊಳ್ಳುತ್ತಿದೆ. ಇದು ಒಕ್ಕಲಿಗ ಸಮುದಾಯ ನಾಡಿಗೆ ನೀಡಿದ ಕೊಡುಗೆ ಎಂದು ವಿವರಿಸಿದರು.<br /> <br /> ಶಾಸಕ ಎಂ.ಜೆ. ಅಪ್ಪಾಜಿ ಮಾತನಾಡಿ, `ಎಂಪಿಎಂ ಕಾರ್ಖಾನೆಗೆ ಐಪಿಎಸ್ ಅಧಿಕಾರಿಯನ್ನು ವ್ಯವಸ್ಥಾಪಕ ನಿರ್ದೇಶಕನನ್ನಾಗಿ ಮಾಡುವ ಬದಲು ಐಎಎಸ್ ಅಧಿಕಾರಿ ನೇಮಿಸುವ ಅಗತ್ಯವಿದೆ ಎಂದು ಹೇಳಿದರು. ಈ ಕುರಿತು ಚಿಂತನೆ ನಡೆಸಿದ್ದು, ಕಾರ್ಖಾನೆ ವಿಚಾರವಾಗಿ ಈಗಾಗಲೇ ಸರ್ಕಾರದ ಮಂತ್ರಿಗಳ ಜತೆ ಭೇಟಿ ಮಾಡಿ ಮಾತುಕತೆ ನಡೆಸಿದ್ದೇನೆ. ಸರ್ಕಾರದ ಅನುದಾನ ತರುವ ವಿಚಾರದಲ್ಲಿ ಯಾವುದೇ ರೀತಿಯ ಪಕ್ಷ ಹಾಗೂ ಜಾತಿ ರಾಜಕಾರಣ ಮಾಡುವುದಿಲ್ಲ ಎಂದು ಹೇಳಿದರು.<br /> <br /> ಬಿ.ಪಿ.ರವೀಂದ್ರನಾಥ್, ಬಿ.ಎನ್. ಶ್ರೀನಿವಾಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಎಂಪಿಎಂ ಒಕ್ಕಲಿಗರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ರಾಮಕೃಷ್ಣ ಅಧ್ಯಕ್ಷತೆ ವಹಿಸಿದ್ದರು.<br /> <br /> <strong>`ಡೆಂಗೆ: ಮುಂಜಾಗ್ರತೆ ಅವಶ್ಯ'</strong><br /> ರಿಪ್ಪನ್ಪೇಟೆ: ಮಳೆಗಾಲದಲ್ಲಿ ಕಾಣಿಸಿಕೊಳ್ಳುವ ಮಾರಕ ರೋಗಗಳ ನಿಯಂತ್ರಣಕ್ಕೆ ಮುಂಜಾಗ್ರತಾ ಕ್ರಮ ಅಗತ್ಯ ಎಂದು ಆರೋಗ್ಯ ಇಲಾಖೆಯ ಹಿರಿಯ ಸಹಾಯಕ ಕೆ.ಆರ್. ಪ್ರಭಾಕರ ತಿಳಿಸಿದರು.<br /> ಪಟ್ಟಣದ ಗ್ರಾಮ ಪಂಚಾಯ್ತಿ ಆವರಣದಲ್ಲಿ ಈಚೆಗೆ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತರಿಗೆ ಮಾರಕ ರೋಗಗಳ ತಡೆ ಬಗ್ಗೆ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.<br /> <br /> ಗ್ರಾಮೀಣ ಭಾಗದಲ್ಲಿ ಜ್ವರ ಕಾಣಿಸಿಕೊಂಡರೆ ನಿರ್ಲಕ್ಷ್ಯ ಮಾಡದೆ ತಕ್ಷಣ ಸ್ಥಳೀಯ ಸರ್ಕಾರಿ ವೈದ್ಯರಲ್ಲಿ ತೋರಿಸಬೇಕು. ಉಚಿತವಾಗಿ ಲಭ್ಯವಿರುವ ಮಾದರಿ ರಕ್ತ ಪರೀಕ್ಷೆಗೆ ಒಳಪಡಿಸಬೇಕು ಎಂದು ಹೇಳಿದರು.<br /> ಗ್ರಾಮ ಪಂಚಾಯ್ತಿ ಅಧ್ಯಕ್ಷ ಎನ್. ಚಂದ್ರೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.<br /> <br /> ಗ್ರಾಮದಲ್ಲಿ ಶುಚಿತ್ವ ಕಾಪಾಡದ ಹೊಟೇಲ್ ಅಂಗಡಿಗಳ ಲೈಸನ್ಸ್ ರದ್ದು ಮಾಡುವುದು ಅಲ್ಲದೆ ಪರಿಸರ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿ, ಮಾರಕ ರೋಗಗಳನ್ನು ತಡೆಗಟ್ಟಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.<br /> <br /> ಈ ಸಂದರ್ಭದಲ್ಲಿ ಉಪಾಧ್ಯಕ್ಷ ಕೆ.ಮುದ್ದು ಭಂಡಾರಿ, ಪಿಡಿಒ ಚಂದ್ರಶೇಖರ್ ಹಾಗೂ ಗ್ರಾಮ ಪಂಚಾಯ್ತಿ ಸದಸ್ಯರು ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಭದ್ರಾವತಿ:</strong> `ಅನ್ನ ನೀಡುವ ಭೂಮಿ ನಂಬಿ ಬದುಕುತ್ತಿರುವ ಒಕ್ಕಲಿಗ ಸಮುದಾಯ ಇಂದು ಅನೇಕ ತಲ್ಲಣಗಳಿಗೆ ಒಳಗಾಗಿದೆ. ಇದರಿಂದ ಹೊರಬರಲು ಸಮುದಾಯಕ್ಕೆ ಹಿರಿಕರನ್ನು ಪರಿಚ ಯಿಸುವ ಅಗತ್ಯವಿದೆ' ಎಂದು ಹಂಪಿ ಕನ್ನಡ ವಿ.ವಿ ಕುಲಪತಿ ಡಾ.ಹಿ.ಚಿ. ಬೋರಲಿಂಗಯ್ಯ ಹೇಳಿದರು.<br /> <br /> ಇಲ್ಲಿನ ಎಂಪಿಎಂ ಕಲ್ಯಾಣ ಮಂಟಪದಲ್ಲಿ ಈಚೆಗೆ ಎಂಪಿಎಂ ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘದಿಂದ ಆಯೋಜಿಸಿದ್ದ ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿ ಉಪನ್ಯಾಸ ನೀಡಿ ಮಾತನಾಡಿದರು. <br /> <br /> ಕೆಂಪೇಗೌಡ ಕೇವಲ ಒಬ್ಬರಲ್ಲ ಮೂವರಿದ್ದರು, ಇಮ್ಮಡಿ ಮತ್ತು ಮಮ್ಮುಡಿ ಕೆಂಪೇಗೌಡರು ಬೆಂಗಳೂರು, ಮಾಗಡಿ, ಯಲಹಂಕ ನಗರ ನಿರ್ಮಿ ಸಿದರು. ವಿಜಯನಗರ ಸಾಮ್ರಾಜ್ಯ ಮಾದರಿಯಲ್ಲಿ ಬೆಂಗಳೂರು ನಗರ ನಿರ್ಮಿಸಿರು. ಕೆರೆ, ಕಾಲುವೆ ಕಟ್ಟಿ ವ್ಯವಸಾಯಕ್ಕೆ ಉತ್ತಮ ಅವಕಾಶ ನೀಡಿದರು ಎಂದರು.<br /> <br /> ಇವರ ಕಾರ್ಯಕ್ಷೇತ್ರ ಕೇವಲ ಕೇವಲ ಕೃಷಿಗೆ ಸೀಮಿತವಾಗದೆ ಸಾಹಿತ್ಯ, ಶಿಲ್ಪಕಲೆ, ವಾಣಿಜ್ಯೋ ದ್ಯಮ ಕಡೆಗೂ ಅಡಿಪಾಯ ಹಾಕಿದರು. ಇದರ ಫಲ ಇಂದು ಬೆಂಗಳೂರು ವಿಶ್ವ ಮಟ್ಟದಲ್ಲಿ ಗುರುತಿಸಿ ಕೊಳ್ಳುತ್ತಿದೆ. ಇದು ಒಕ್ಕಲಿಗ ಸಮುದಾಯ ನಾಡಿಗೆ ನೀಡಿದ ಕೊಡುಗೆ ಎಂದು ವಿವರಿಸಿದರು.<br /> <br /> ಶಾಸಕ ಎಂ.ಜೆ. ಅಪ್ಪಾಜಿ ಮಾತನಾಡಿ, `ಎಂಪಿಎಂ ಕಾರ್ಖಾನೆಗೆ ಐಪಿಎಸ್ ಅಧಿಕಾರಿಯನ್ನು ವ್ಯವಸ್ಥಾಪಕ ನಿರ್ದೇಶಕನನ್ನಾಗಿ ಮಾಡುವ ಬದಲು ಐಎಎಸ್ ಅಧಿಕಾರಿ ನೇಮಿಸುವ ಅಗತ್ಯವಿದೆ ಎಂದು ಹೇಳಿದರು. ಈ ಕುರಿತು ಚಿಂತನೆ ನಡೆಸಿದ್ದು, ಕಾರ್ಖಾನೆ ವಿಚಾರವಾಗಿ ಈಗಾಗಲೇ ಸರ್ಕಾರದ ಮಂತ್ರಿಗಳ ಜತೆ ಭೇಟಿ ಮಾಡಿ ಮಾತುಕತೆ ನಡೆಸಿದ್ದೇನೆ. ಸರ್ಕಾರದ ಅನುದಾನ ತರುವ ವಿಚಾರದಲ್ಲಿ ಯಾವುದೇ ರೀತಿಯ ಪಕ್ಷ ಹಾಗೂ ಜಾತಿ ರಾಜಕಾರಣ ಮಾಡುವುದಿಲ್ಲ ಎಂದು ಹೇಳಿದರು.<br /> <br /> ಬಿ.ಪಿ.ರವೀಂದ್ರನಾಥ್, ಬಿ.ಎನ್. ಶ್ರೀನಿವಾಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಎಂಪಿಎಂ ಒಕ್ಕಲಿಗರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ರಾಮಕೃಷ್ಣ ಅಧ್ಯಕ್ಷತೆ ವಹಿಸಿದ್ದರು.<br /> <br /> <strong>`ಡೆಂಗೆ: ಮುಂಜಾಗ್ರತೆ ಅವಶ್ಯ'</strong><br /> ರಿಪ್ಪನ್ಪೇಟೆ: ಮಳೆಗಾಲದಲ್ಲಿ ಕಾಣಿಸಿಕೊಳ್ಳುವ ಮಾರಕ ರೋಗಗಳ ನಿಯಂತ್ರಣಕ್ಕೆ ಮುಂಜಾಗ್ರತಾ ಕ್ರಮ ಅಗತ್ಯ ಎಂದು ಆರೋಗ್ಯ ಇಲಾಖೆಯ ಹಿರಿಯ ಸಹಾಯಕ ಕೆ.ಆರ್. ಪ್ರಭಾಕರ ತಿಳಿಸಿದರು.<br /> ಪಟ್ಟಣದ ಗ್ರಾಮ ಪಂಚಾಯ್ತಿ ಆವರಣದಲ್ಲಿ ಈಚೆಗೆ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತರಿಗೆ ಮಾರಕ ರೋಗಗಳ ತಡೆ ಬಗ್ಗೆ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.<br /> <br /> ಗ್ರಾಮೀಣ ಭಾಗದಲ್ಲಿ ಜ್ವರ ಕಾಣಿಸಿಕೊಂಡರೆ ನಿರ್ಲಕ್ಷ್ಯ ಮಾಡದೆ ತಕ್ಷಣ ಸ್ಥಳೀಯ ಸರ್ಕಾರಿ ವೈದ್ಯರಲ್ಲಿ ತೋರಿಸಬೇಕು. ಉಚಿತವಾಗಿ ಲಭ್ಯವಿರುವ ಮಾದರಿ ರಕ್ತ ಪರೀಕ್ಷೆಗೆ ಒಳಪಡಿಸಬೇಕು ಎಂದು ಹೇಳಿದರು.<br /> ಗ್ರಾಮ ಪಂಚಾಯ್ತಿ ಅಧ್ಯಕ್ಷ ಎನ್. ಚಂದ್ರೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.<br /> <br /> ಗ್ರಾಮದಲ್ಲಿ ಶುಚಿತ್ವ ಕಾಪಾಡದ ಹೊಟೇಲ್ ಅಂಗಡಿಗಳ ಲೈಸನ್ಸ್ ರದ್ದು ಮಾಡುವುದು ಅಲ್ಲದೆ ಪರಿಸರ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿ, ಮಾರಕ ರೋಗಗಳನ್ನು ತಡೆಗಟ್ಟಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.<br /> <br /> ಈ ಸಂದರ್ಭದಲ್ಲಿ ಉಪಾಧ್ಯಕ್ಷ ಕೆ.ಮುದ್ದು ಭಂಡಾರಿ, ಪಿಡಿಒ ಚಂದ್ರಶೇಖರ್ ಹಾಗೂ ಗ್ರಾಮ ಪಂಚಾಯ್ತಿ ಸದಸ್ಯರು ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>