ಈ ಸದಸ್ಯೆಯ ಹೆಸರು ಗೌರಿ ಅಭಿಮಾನ್ (45) ಇವರ ಪತಿ ಮರಣ ಹೊಂದಿದ್ದು, ಪುತ್ರ ಸುರೇಶ, ಕುರುಡು ತಾಯಿ ಚಂದ್ರಮ್ಮನೊಂದಿಗೆ ಗಾಂಧಿ ನಗರದಲ್ಲಿ ಸ್ಮಶಾನದ ಪಕ್ಕದಲ್ಲಿ ಇರುವ ಸರ್ಕಾರಿ ಜಾಗದಲ್ಲಿ ಜೋಪಡಿ ವಾಸಿ. ಇಲ್ಲಿ ಕರೆಂಟು ಇಲ್ಲ, ನಳದ ನೀರು ಇಲ್ಲ, ಮನೆ ಹಕ್ಕು ಪತ್ರವು ಇಲ್ಲವೇ ಇಲ್ಲ. ಡೋಂಗ್ರಿ ಗಾರಾಶಿಯಾ (ಎಸ್ಟಿ) ಜನಾಂಗಕ್ಕೆ ಸೇರಿದ ಈ ಅನಕ್ಷರಸ್ಥೆ ಸದಸ್ಯೆ ತಮ್ಮ ಅಧಿಕಾರ ಅವಧಿಯಲ್ಲಿ ಬಡವರಿಗೆ 5 ಮನೆ, 5ನಳ ಹಾಗೂ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ರಸ್ತೆ ನಿರ್ಮಿಸಿದರೆ ಹೊರತು ಸ್ವಂತಕ್ಕಾಗಿ ಏನೂ ಮಾಡಿಕೊಂಡಿಲ್ಲ. ಹಾಲಿ ಇರುವ ಅರ್ಧ ಸಾದ ಇಟ್ಟಗೆಯ ಗೋಡೆಗೆ ಸುತ್ತಲೂ ಪ್ಲಾಸ್ಟಿಕ್ ಹೊದಿಕೆ, ಒಳಗೆ 2 ಪ್ಲಾಸ್ಟಿಕ್ ಕುರ್ಚಿ, ಪ್ಲಾಸ್ಟಿಕ್ ವಯರ್ ಹಗ್ಗದ ಮಂಚ, ಶೀಟ್ ಹಾಗೂ ಟಾರ್ಪಲ್ ಹೊದಿಕೆಯ ಸೂರು ಇವರ ಬಂಗಲೆ. ಪ್ರತಿ ವರ್ಷವೂ ಮಳೆಗಾಲದಲ್ಲಿ ಸೋರುವ ಮನೆ ದುರಸ್ತಿಗೆ ರೂ. 5 ಸಾವಿರ ಹೊಂದಿಸುವುದು ಸಾಮಾನ್ಯ. ಶೌಚಾಲಯ ಹಾಗೂ ಬಚ್ಚಲೂ ಇಲ್ಲ ಸುತ್ತಲಿನ ಬಯಲೇ ಇವರಿಗೆ ಆಸರೆಯಾಗಿ ಸರ್ವತಂತ್ರ `ಸ್ವತಂತ್ರ~ರು.