<p>ಭದ್ರಾವತಿ: `ಆಧುನಿಕ ಯಾಂತ್ರಿಕ ಬದುಕು ಹಾಗೂ ಶ್ರಮರಹಿತ ಜೀವನ ಪದ್ಧತಿ ಕಾರಣ ಹಲವರಲ್ಲಿ ಕಾಯಿಲೆಗಳ ಪ್ರಮಾಣ ಹೆಚ್ಚಾಗಿದೆ~ ಎಂದು ಡಾ.ಕವಿತಾ ಭಟ್ ಹೇಳಿದರು.<br /> <br /> ಇಲ್ಲಿನ ಶಾಶ್ವತಿ ಮಹಿಳಾ ಸಮಾಜ ಈಚೆಗೆ ಬಸವೇಶ್ವರ ಸಭಾ ಭವನದಲ್ಲಿ ಏರ್ಪಡಿಸಿದ್ದ ಆರೋಗ್ಯ ಕುರಿತಾದ ಮಾಹಿತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. <br /> <br /> ಇಂದಿನ ಸಾಮಾಜಿಕ ಪರಿಸರ, ಚಿಂತೆ ಹಾಗೂ ಮಾನಸಿಕ ಖಿನ್ನತೆ ಬಹಳಷ್ಟು ಕಾಯಿಲೆಗಳ ಆರಂಭಕ್ಕೆ ಮೂಲ ಕಾರಣ. ಮಹಿಳೆಯರು ಮನೆ ಜವಾಬ್ದಾರಿ ಜತೆ ಗಂಡ, ಮಕ್ಕಳ ಕಡೆಗೆ ಹೆಚ್ಚು ಆದ್ಯತೆ ನೀಡುವುದು ಸಹ ಅನಾರೋಗ್ಯ ಹೆಚ್ಚಳಕ್ಕೆ ಕಾರಣ ಎಂದರು.<br /> <br /> ಬಹಳಷ್ಟು ಕಾಯಿಲೆಗೆ ಔಷಧಿ ಸೇವನೆ ಪರಿಹಾರವಲ್ಲ. ಅದಕ್ಕೆ ಬದಲಾಗಿ ಮಾನಸಿಕ ಚಿಕಿತ್ಸೆ, ಯೋಗ, ಧ್ಯಾನ, ವ್ಯಾಯಾಮ, ಬೆಳಗಿನ ನಡಿಗೆ, ಸಂಘ-ಸಂಸ್ಥೆಗಳ ಕಾರ್ಯ ಚಟುವಟಿಕೆಯಲ್ಲಿ ಸಕ್ರಿಯವಾಗಿ ತೊಡಗುವುದನ್ನು ಬೆಳೆಸಿಕೊಳ್ಳಿ ಎಂದು ಕರೆ ನೀಡಿದರು.<br /> <br /> ನಂತರ ನಡೆದ ಸಂವಾದದಲ್ಲಿ ಜನ ಸಾಮಾನ್ಯರು ಹಾಗೂ ಮಹಿಳೆಯರಲ್ಲಿ ಕಂಡುಬರುವ ರಕ್ತ ಹೀನತೆ, ಅಧಿಕ ರಕ್ತದ ಒತ್ತಡ, ಮೂಳೆಸವೆತ ಸೇರಿದಂತೆ ಇನ್ನಿತರ ತೊಂದರೆಗಳ ಕುರಿತು ಸಭಿಕರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದರು.<br /> <br /> ಸಮಾಜದ ಅಧ್ಯಕ್ಷೆ ಯಶೋದಾ ವೀರಭದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ಇಂದಿರಾ ನಂಜೇಗೌಡ ಪ್ರಾರ್ಥಿಸಿದರು. ವಸುಂಧರಾ ಸ್ವಾಗತಿಸಿದರು. ನಾಗರತ್ನಾ ಮಲ್ಲಿಕಾರ್ಜುನ ಕಾರ್ಯಕ್ರಮ ನಿರೂಪಿಸಿದರು. ನಂದಿನಿ ಮಲ್ಲಿಕಾರ್ಜುನ ವರದಿ ವಾಚಿಸಿದರು. ಬಿ.ಎಸ್. ರೂಪಾರಾವ್ ವಂದಿಸಿದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಭದ್ರಾವತಿ: `ಆಧುನಿಕ ಯಾಂತ್ರಿಕ ಬದುಕು ಹಾಗೂ ಶ್ರಮರಹಿತ ಜೀವನ ಪದ್ಧತಿ ಕಾರಣ ಹಲವರಲ್ಲಿ ಕಾಯಿಲೆಗಳ ಪ್ರಮಾಣ ಹೆಚ್ಚಾಗಿದೆ~ ಎಂದು ಡಾ.ಕವಿತಾ ಭಟ್ ಹೇಳಿದರು.<br /> <br /> ಇಲ್ಲಿನ ಶಾಶ್ವತಿ ಮಹಿಳಾ ಸಮಾಜ ಈಚೆಗೆ ಬಸವೇಶ್ವರ ಸಭಾ ಭವನದಲ್ಲಿ ಏರ್ಪಡಿಸಿದ್ದ ಆರೋಗ್ಯ ಕುರಿತಾದ ಮಾಹಿತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. <br /> <br /> ಇಂದಿನ ಸಾಮಾಜಿಕ ಪರಿಸರ, ಚಿಂತೆ ಹಾಗೂ ಮಾನಸಿಕ ಖಿನ್ನತೆ ಬಹಳಷ್ಟು ಕಾಯಿಲೆಗಳ ಆರಂಭಕ್ಕೆ ಮೂಲ ಕಾರಣ. ಮಹಿಳೆಯರು ಮನೆ ಜವಾಬ್ದಾರಿ ಜತೆ ಗಂಡ, ಮಕ್ಕಳ ಕಡೆಗೆ ಹೆಚ್ಚು ಆದ್ಯತೆ ನೀಡುವುದು ಸಹ ಅನಾರೋಗ್ಯ ಹೆಚ್ಚಳಕ್ಕೆ ಕಾರಣ ಎಂದರು.<br /> <br /> ಬಹಳಷ್ಟು ಕಾಯಿಲೆಗೆ ಔಷಧಿ ಸೇವನೆ ಪರಿಹಾರವಲ್ಲ. ಅದಕ್ಕೆ ಬದಲಾಗಿ ಮಾನಸಿಕ ಚಿಕಿತ್ಸೆ, ಯೋಗ, ಧ್ಯಾನ, ವ್ಯಾಯಾಮ, ಬೆಳಗಿನ ನಡಿಗೆ, ಸಂಘ-ಸಂಸ್ಥೆಗಳ ಕಾರ್ಯ ಚಟುವಟಿಕೆಯಲ್ಲಿ ಸಕ್ರಿಯವಾಗಿ ತೊಡಗುವುದನ್ನು ಬೆಳೆಸಿಕೊಳ್ಳಿ ಎಂದು ಕರೆ ನೀಡಿದರು.<br /> <br /> ನಂತರ ನಡೆದ ಸಂವಾದದಲ್ಲಿ ಜನ ಸಾಮಾನ್ಯರು ಹಾಗೂ ಮಹಿಳೆಯರಲ್ಲಿ ಕಂಡುಬರುವ ರಕ್ತ ಹೀನತೆ, ಅಧಿಕ ರಕ್ತದ ಒತ್ತಡ, ಮೂಳೆಸವೆತ ಸೇರಿದಂತೆ ಇನ್ನಿತರ ತೊಂದರೆಗಳ ಕುರಿತು ಸಭಿಕರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದರು.<br /> <br /> ಸಮಾಜದ ಅಧ್ಯಕ್ಷೆ ಯಶೋದಾ ವೀರಭದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ಇಂದಿರಾ ನಂಜೇಗೌಡ ಪ್ರಾರ್ಥಿಸಿದರು. ವಸುಂಧರಾ ಸ್ವಾಗತಿಸಿದರು. ನಾಗರತ್ನಾ ಮಲ್ಲಿಕಾರ್ಜುನ ಕಾರ್ಯಕ್ರಮ ನಿರೂಪಿಸಿದರು. ನಂದಿನಿ ಮಲ್ಲಿಕಾರ್ಜುನ ವರದಿ ವಾಚಿಸಿದರು. ಬಿ.ಎಸ್. ರೂಪಾರಾವ್ ವಂದಿಸಿದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>