<p>ರಂಗನಾಥಸ್ವಾಮಿ ಸೊರಬ ಪಟ್ಟಣದ ಆರಾಧ್ಯ ದೈವ. ಸುರಭಿ ಎಂಬ ಪವಿತ್ರ ಗೋವು ರಂಗನಾಥನ ವಿಗ್ರಹಕ್ಕೆ ಪ್ರತಿದಿನ ಹಾಲು ಸುರಿಸುತ್ತಿತ್ತು ಎಂಬ ಹಿನ್ನೆಲೆಯಲ್ಲಿ ಸ್ಥಳೀಯ ಗಾವುಂಡನೊಬ್ಬ ದಂಡಾವತಿ ನದಿ ತೀರದಲ್ಲಿ ದೇವಸ್ಥಾನ ನಿರ್ಮಿಸಿದ. `ಸುರಭಿ~ ಗೋವಿನಿಂದಾಗಿ ಪ್ರದೇಶಕ್ಕೆ `ಸುರಭಿಪುರ~ ಎಂಬ ಹೆಸರು ಬಂದಿತು. ಅದು ಕಾಲಕ್ರಮೇಣ `ಸೊರಬ~ ಆಯಿತು ಎಂಬ ನಂಬಿಕೆಯಿದೆ.<br /> <br /> `ಸೊರಬ~ ಎಂಬ ಹೆಸರು 12ನೇ ಶತಮಾನದ ತಲ್ಲೂರು ಶಾಸನದಲ್ಲಿ ಉಲ್ಲೇಖ ಆಗಿದ್ದು, ನಂತರ ಸಂಸ್ಕೃತದ `ಸುರಭಿಪುರ~ ಹೆಸರು ಬಂದಿದೆ ಎಂದು ಇತಿಹಾಸ ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ. ಮುಖ್ಯರಸ್ತೆಗೆ ಅಭಿಮುಖವಾಗಿ ದೇವಸ್ಥಾನ ಇರುವುದು ಪಟ್ಟಣಕ್ಕೆ ಶೋಭೆ ತಂದಿದೆ. ಹೊರ ಭಾಗದಲ್ಲಿ ಗೋಪುರ ಸಹಿತವಾದ ನೂತನ ಕಟ್ಟಡವಿದ್ದು, ವಾಣಿಜ್ಯ ಮಳಿಗೆಗಳನ್ನು ಸಹ ನಿರ್ಮಿಸಲಾಗಿದೆ.<br /> <br /> ಒಳ ಭಾಗದಲ್ಲಿ ವಿಜಯನಗರದ ಅರಸರ ಕಾಲದಲ್ಲಿ ನಿರ್ಮಾಣಗೊಂಡಿರುವ ಶಿಲಾ ದೇಗುಲದಲ್ಲಿ ಸುಂದರ ಕೆತ್ತನೆಯುಳ್ಳ ನವರಂಗ, ಸುಖನಾಸಿ ಕಂಡು ಬರುತ್ತದೆ. ದ್ರಾವಿಡ ಶೈಲಿ ಹೋಲುವ ಗೋಪುರ ಇದೆ. ಕಕ್ಷಾಸನದ ಹೊರಮೈ ಪಟ್ಟಿಕೆಯಲ್ಲಿ ದೇವಾನುದೇವತೆ, ಶೃಂಗಾರ ಶಿಲ್ಪಗಳ ಕಲಾಸಿರಿ ಇದೆ. <br /> <br /> ಗರ್ಭಗೃಹದಲ್ಲಿ ಸ್ವಾಮಿ ವಿರಾಜಮಾನನಾಗಿದ್ದು, ಅನೇಕ ದಶಕಗಳಿಂದ ಮಂತ್ರಿ ಮಹೋದಯರು, ಉದ್ಯಮಿಗಳು, ಇನ್ನಿತರ ಭಕ್ತಾದಿಗಳ ಸೇವೆ ಪಡೆದಿದ್ದಾನೆ. ವೇದ ಪಂಡಿತ ದಿ. ಗುರುನಾಥಭಟ್ಟರ ಕಾಲದಿಂದ ದೇವಸ್ಥಾನ ರಾಜ್ಯಾದ್ಯಂತ ಗಮನ ಸೆಳೆದಿದೆ.<br /> <br /> ದೇಗುಲಕ್ಕೆ ಹೊಂದಿಕೊಂಡಂತೆ ಮುಂಭಾಗದಲ್ಲಿ ಕೆಲ ವರ್ಷಗಳ ಹಿಂದೆ ಹೋಮ, ಹವನ, ಧಾರ್ಮಿಕ, ಸಾಮಾಜಿಕ ಹಾಗೂ ವೈವಾಹಿಕ ಕಾರ್ಯಕ್ರಮಗಳಿಗಾಗಿ ಪ್ರಾಂಗಣ ನಿರ್ಮಿಸಲಾಗಿದೆ.ಹೊರಭಾಗದಲ್ಲಿ ಶಿಲಾ ರೂಪದಲ್ಲಿರುವ ನವಗ್ರಹಗಳಿಗೆ ಪ್ರತಿನಿತ್ಯ ಪೂಜೆ ಸಲ್ಲಿಸಲಾಗುತ್ತದೆ. ನಾಗರಕಲ್ಲುಗಳ ದಂಡು ಸಹ ಇದೆ. <br /> <br /> ಇಂತಹ ಒಂದು ವಿಶೇಷ ದೇಗುಲ ಪಟ್ಟಣದ ವ್ಯಾಪ್ತಿಯಲ್ಲಿಯೇ ಇದ್ದರೂ, ಹೆಚ್ಚಿನ ಪ್ರಗತಿ ಕಾಣದೇ ಇರುವುದು ಪುರವಾಸಿಗಳ ಬೇಸರಕ್ಕೆ ಕಾರಣ ಆಗಿದೆ. ದೇಗುಲದ ಆವರಣವನ್ನು ಸುಂದರಗೊಳಿಸುವ ಯಾವುದೇ ಪ್ರಯತ್ನ ಕಂಡು ಬಂದಿಲ್ಲ. ದೇವಸ್ಥಾನ ಕಳೆ ಕಟ್ಟಲು ಇದರಿಂದ ಹಿನ್ನಡೆ ಉಂಟಾಗಿದೆ.<br /> <br /> ದೇವಸ್ಥಾನದ ಪಕ್ಕದಲ್ಲಿ ಕಲ್ಯಾಣ ಮಂಟಪ ನಿರ್ಮಾಣ ಕಾರ್ಯ ಸುಮಾರು 20 ವರ್ಷಗಳ ಹಿಂದೆ ಅಂದಿನ ತಹಶೀಲ್ದಾರ್ ನಾಗೋಜಿರಾವ್ ಆಸಕ್ತಿಯ ಫಲವಾಗಿ ಚಾಲನೆ ಪಡೆದಿತ್ತು. ಅಂದು ಒಂದು ಹಂತದ ನಿರ್ಮಾಣ ಪೂರೈಸಿ ಸ್ಥಗಿತಗೊಂಡಿರುವ ಕಾಮಗಾರಿ ಪುನಃ ಮುಂದುವರಿದಿಲ್ಲ.<br /> <br /> ಇತ್ತೀಚೆಗೆ ಅಗತ್ಯ ಅನುದಾನ ಮಂಜೂರಾಗಿದ್ದರೂ ಕಾಮಗಾರಿಗೆ ಚಾಲನೆ ದೊರೆತಿಲ್ಲ ಎಂದು ಪಟ್ಟಣವಾಸಿಗಳು ಅಲವತ್ತುಗೊಂಡಿದ್ದು, ದೇಗುಲದ ಆವರಣವನ್ನು ಕಂಗೊಳಿಸುವಂತೆ ಮಾಡುವುದರೊಂದಿಗೆ, ಕಲ್ಯಾಣ ಮಂಟಪ ಜನತೆಯ ಕೈ ಸೇರಲು ಅವಕಾಶ ಮಾಡಿಕೊಡುವಂತೆ ಆಗ್ರಹಿಸಿದ್ದಾರೆ. <br /> <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ರಂಗನಾಥಸ್ವಾಮಿ ಸೊರಬ ಪಟ್ಟಣದ ಆರಾಧ್ಯ ದೈವ. ಸುರಭಿ ಎಂಬ ಪವಿತ್ರ ಗೋವು ರಂಗನಾಥನ ವಿಗ್ರಹಕ್ಕೆ ಪ್ರತಿದಿನ ಹಾಲು ಸುರಿಸುತ್ತಿತ್ತು ಎಂಬ ಹಿನ್ನೆಲೆಯಲ್ಲಿ ಸ್ಥಳೀಯ ಗಾವುಂಡನೊಬ್ಬ ದಂಡಾವತಿ ನದಿ ತೀರದಲ್ಲಿ ದೇವಸ್ಥಾನ ನಿರ್ಮಿಸಿದ. `ಸುರಭಿ~ ಗೋವಿನಿಂದಾಗಿ ಪ್ರದೇಶಕ್ಕೆ `ಸುರಭಿಪುರ~ ಎಂಬ ಹೆಸರು ಬಂದಿತು. ಅದು ಕಾಲಕ್ರಮೇಣ `ಸೊರಬ~ ಆಯಿತು ಎಂಬ ನಂಬಿಕೆಯಿದೆ.<br /> <br /> `ಸೊರಬ~ ಎಂಬ ಹೆಸರು 12ನೇ ಶತಮಾನದ ತಲ್ಲೂರು ಶಾಸನದಲ್ಲಿ ಉಲ್ಲೇಖ ಆಗಿದ್ದು, ನಂತರ ಸಂಸ್ಕೃತದ `ಸುರಭಿಪುರ~ ಹೆಸರು ಬಂದಿದೆ ಎಂದು ಇತಿಹಾಸ ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ. ಮುಖ್ಯರಸ್ತೆಗೆ ಅಭಿಮುಖವಾಗಿ ದೇವಸ್ಥಾನ ಇರುವುದು ಪಟ್ಟಣಕ್ಕೆ ಶೋಭೆ ತಂದಿದೆ. ಹೊರ ಭಾಗದಲ್ಲಿ ಗೋಪುರ ಸಹಿತವಾದ ನೂತನ ಕಟ್ಟಡವಿದ್ದು, ವಾಣಿಜ್ಯ ಮಳಿಗೆಗಳನ್ನು ಸಹ ನಿರ್ಮಿಸಲಾಗಿದೆ.<br /> <br /> ಒಳ ಭಾಗದಲ್ಲಿ ವಿಜಯನಗರದ ಅರಸರ ಕಾಲದಲ್ಲಿ ನಿರ್ಮಾಣಗೊಂಡಿರುವ ಶಿಲಾ ದೇಗುಲದಲ್ಲಿ ಸುಂದರ ಕೆತ್ತನೆಯುಳ್ಳ ನವರಂಗ, ಸುಖನಾಸಿ ಕಂಡು ಬರುತ್ತದೆ. ದ್ರಾವಿಡ ಶೈಲಿ ಹೋಲುವ ಗೋಪುರ ಇದೆ. ಕಕ್ಷಾಸನದ ಹೊರಮೈ ಪಟ್ಟಿಕೆಯಲ್ಲಿ ದೇವಾನುದೇವತೆ, ಶೃಂಗಾರ ಶಿಲ್ಪಗಳ ಕಲಾಸಿರಿ ಇದೆ. <br /> <br /> ಗರ್ಭಗೃಹದಲ್ಲಿ ಸ್ವಾಮಿ ವಿರಾಜಮಾನನಾಗಿದ್ದು, ಅನೇಕ ದಶಕಗಳಿಂದ ಮಂತ್ರಿ ಮಹೋದಯರು, ಉದ್ಯಮಿಗಳು, ಇನ್ನಿತರ ಭಕ್ತಾದಿಗಳ ಸೇವೆ ಪಡೆದಿದ್ದಾನೆ. ವೇದ ಪಂಡಿತ ದಿ. ಗುರುನಾಥಭಟ್ಟರ ಕಾಲದಿಂದ ದೇವಸ್ಥಾನ ರಾಜ್ಯಾದ್ಯಂತ ಗಮನ ಸೆಳೆದಿದೆ.<br /> <br /> ದೇಗುಲಕ್ಕೆ ಹೊಂದಿಕೊಂಡಂತೆ ಮುಂಭಾಗದಲ್ಲಿ ಕೆಲ ವರ್ಷಗಳ ಹಿಂದೆ ಹೋಮ, ಹವನ, ಧಾರ್ಮಿಕ, ಸಾಮಾಜಿಕ ಹಾಗೂ ವೈವಾಹಿಕ ಕಾರ್ಯಕ್ರಮಗಳಿಗಾಗಿ ಪ್ರಾಂಗಣ ನಿರ್ಮಿಸಲಾಗಿದೆ.ಹೊರಭಾಗದಲ್ಲಿ ಶಿಲಾ ರೂಪದಲ್ಲಿರುವ ನವಗ್ರಹಗಳಿಗೆ ಪ್ರತಿನಿತ್ಯ ಪೂಜೆ ಸಲ್ಲಿಸಲಾಗುತ್ತದೆ. ನಾಗರಕಲ್ಲುಗಳ ದಂಡು ಸಹ ಇದೆ. <br /> <br /> ಇಂತಹ ಒಂದು ವಿಶೇಷ ದೇಗುಲ ಪಟ್ಟಣದ ವ್ಯಾಪ್ತಿಯಲ್ಲಿಯೇ ಇದ್ದರೂ, ಹೆಚ್ಚಿನ ಪ್ರಗತಿ ಕಾಣದೇ ಇರುವುದು ಪುರವಾಸಿಗಳ ಬೇಸರಕ್ಕೆ ಕಾರಣ ಆಗಿದೆ. ದೇಗುಲದ ಆವರಣವನ್ನು ಸುಂದರಗೊಳಿಸುವ ಯಾವುದೇ ಪ್ರಯತ್ನ ಕಂಡು ಬಂದಿಲ್ಲ. ದೇವಸ್ಥಾನ ಕಳೆ ಕಟ್ಟಲು ಇದರಿಂದ ಹಿನ್ನಡೆ ಉಂಟಾಗಿದೆ.<br /> <br /> ದೇವಸ್ಥಾನದ ಪಕ್ಕದಲ್ಲಿ ಕಲ್ಯಾಣ ಮಂಟಪ ನಿರ್ಮಾಣ ಕಾರ್ಯ ಸುಮಾರು 20 ವರ್ಷಗಳ ಹಿಂದೆ ಅಂದಿನ ತಹಶೀಲ್ದಾರ್ ನಾಗೋಜಿರಾವ್ ಆಸಕ್ತಿಯ ಫಲವಾಗಿ ಚಾಲನೆ ಪಡೆದಿತ್ತು. ಅಂದು ಒಂದು ಹಂತದ ನಿರ್ಮಾಣ ಪೂರೈಸಿ ಸ್ಥಗಿತಗೊಂಡಿರುವ ಕಾಮಗಾರಿ ಪುನಃ ಮುಂದುವರಿದಿಲ್ಲ.<br /> <br /> ಇತ್ತೀಚೆಗೆ ಅಗತ್ಯ ಅನುದಾನ ಮಂಜೂರಾಗಿದ್ದರೂ ಕಾಮಗಾರಿಗೆ ಚಾಲನೆ ದೊರೆತಿಲ್ಲ ಎಂದು ಪಟ್ಟಣವಾಸಿಗಳು ಅಲವತ್ತುಗೊಂಡಿದ್ದು, ದೇಗುಲದ ಆವರಣವನ್ನು ಕಂಗೊಳಿಸುವಂತೆ ಮಾಡುವುದರೊಂದಿಗೆ, ಕಲ್ಯಾಣ ಮಂಟಪ ಜನತೆಯ ಕೈ ಸೇರಲು ಅವಕಾಶ ಮಾಡಿಕೊಡುವಂತೆ ಆಗ್ರಹಿಸಿದ್ದಾರೆ. <br /> <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>