<p><strong>ಹೊಸನಗರ:</strong> ಮಡೆನೂರು ಮತ್ತು ಲಿಂಗನಮಕ್ಕಿ ಜಲ ವಿದ್ಯುತ್ ಯೋಜನೆಗಳಿಂದ ಹೊಸನಗರ ಮತ್ತು ಸಾಗರ ತಾಲ್ಲೂಕಿನ ಅನೇಕ ಗ್ರಾಮಗಳು ಶರಾವತಿ ಹಿನ್ನೀರಿನಿಂದ ಜಲಾವೃತಗೊಂಡು 6 ದಶಕಗಳು ಕಳೆದಿವೆ. ಈಗ ಗ್ರಾಮಗಳ ನಡುವೆ ಸಂಪರ್ಕ ಬೆಸೆಯುವ ಹಸಿರುಮಕ್ಕಿ ಸೇತುವೆ ನಿರ್ಮಾಣ ಕಾಮಗಾರಿಗೆ ಹಸಿರು ನಿಶಾನೆ ದೊರೆತಿದೆ.</p>.<p>ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಪ್ರಯತ್ನದ ಫಲವಾಗಿ ಹೊಸನಗರ-–ಸಾಗರ ತಾಲ್ಲೂಕಿನ ಎಂಟು ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಸಂಪರ್ಕ ಕಲ್ಪಿಸುವ ಈ ಸೇತುವೆ ನಿರ್ಮಾಣ ಆಗುತ್ತಿರುವುದು ಗ್ರಾಮಸ್ಥರಲ್ಲಿ ಹರ್ಷ ಉಂಟುಮಾಡಿದೆ.</p>.<p>ಹೊಸನಗರ ತಾಲ್ಲೂಕಿನ ಕೆ.ಬಿ ವೃತ್ತ ಹಾಗೂ ಸಾಗರ ತಾಲ್ಲೂಕಿನ ಹಸಿರುಮಕ್ಕಿ ಲಾಂಚ್ ಕಳುವನ್ನು ಸಂಪರ್ಕಿಸುವ ₹ 90 ಕೋಟಿ ಅಂದಾಜು ವೆಚ್ಚದ 1.1 ಕಿ.ಮೀ ಉದ್ದದ ಈ ಸೇತುವೆಗೆ ₹ 30 ಕೋಟಿ ಕಾಮಗಾರಿ ಟೆಂಡರ್ ಕರೆಯಲಾಗಿದೆ.</p>.<p>ಸೇತುವೆ ಕಾಮಗಾರಿಗೆ ಟೆಂಡರ್ ಕರೆದಿರುವುದು ಸಂತ್ರಸ್ತರ ಹೋರಾಟಕ್ಕೆ ಸಿಕ್ಕ ಫಲ ಎಂದು ಶರಾವತಿ ಸಂತ್ರಸ್ತರ ಹೋರಾಟ ಸಮಿತಿ ಕಾರ್ಯದರ್ಶಿ ಸುರೇಶ ಕೂಡ್ಲುಕೊಪ್ಪ ಸಂತಸ ವ್ಯಕ್ತಪಡಿಸುತ್ತಾರೆ.</p>.<p>‘ಈ ಯೋಜನೆಗಳಿಂದಾಗಿ ಇಲ್ಲಿಯ ರೈತರು ಮತ್ತು ಕೃಷಿ ಕಾರ್ಮಿಕರು ಮನೆ, ಜಮೀನುಗಳನ್ನು ಕಳೆದುಕೊಂಡು ನಾಡಿಗೆ ತ್ಯಾಗ ಮಾಡಿದ್ದರು. ಸರ್ಕಾರ ಪುನರ್ವಸತಿಗಾಗಿ ನೀಡಿದ್ದ ಪುಡಿಗಾಸಿನ ಪರಿಹಾರದಿಂದ ಬದುಕು ಕಟ್ಟಿಕೊಳ್ಳಲು ಕಷ್ಟವಾಗಿತ್ತು. ರಾಜ್ಯಕ್ಕೆ ಬೆಳಕು ನೀಡಿದ್ದರೂ ಮುಳುಗಡೆಯಿಂದ ಅನಾಥರಾಗಿದ್ದೇವೆ ಎಂಬ ಭಾವನೆ ಇತ್ತು. ಈಗ ಈ ಸೇತುವೆ ನಿರ್ಮಾಣಕ್ಕೆ ಸರ್ಕಾರ ಅಸ್ತು ಎಂದಿರುವುದು ಖುಷಿಯಾಗಿದೆ’ ಎಂದು ತಿಳಿಸಿದರು.</p>.<p>ಶರಾವತಿ ಹಿನ್ನೀರಿನಿಂದಾಗಿ ಎಲ್ಲಾ ರಸ್ತೆಗಳು ನಡುವೆ ಸಂಪರ್ಕಗಳು ಇರಲಿಲ್ಲ. ವಾಣಿಜ್ಯ ಕೇಂದ್ರ ಸಾಗರಕ್ಕೆ 20ರಿಂದ 40 ಕಿ.ಮೀ. ಅಂತರದ ಬದಲು 80 ರಿಂದ 90 ಕಿ.ಮೀ. ದೂರ ಕ್ರಮಿಸಬೇಕಾದ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿತ್ತು ಎಂದು ತಿಳಿಸಿದರು.</p>.<p>ಈ ಸೇತುವೆ ನಿರ್ಮಾಣದಿಂದ ಸಾಗರ-–ಕೊಡಚಾದ್ರಿ–-ಕೊಲ್ಲೂರು–-ಬೈಂದೂರು ಸಂಪರ್ಕದ ಅಂತರ 40 ಕಿ.ಮೀ ಕಡಿಮೆಯಾಗಲಿದೆ. ನಿಟ್ಟೂರು, ಸಂಪೆಕಟ್ಟೆ, ಅರಮನೆಕೊಪ್ಪ, ಸಂಕಣ್ಣ ಶ್ಯಾನುಭೋಗ, ಕೊಲ್ಲೂರು, ಬೈಂದೂರು ವ್ಯಾಪ್ತಿಯಲ್ಲಿರುವ 40 ಸಾವಿರ ಗ್ರಾಮಸ್ಥರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.</p>.<p>ಅಭಿನಂದನೆ: ಹಸಿರುಮಕ್ಕಿ ಸೇತುವೆ ನಿರ್ಮಾಣಕ್ಕೆ ಹಸಿರು ನಿಶಾನೆ ತೋರಿಸಿದ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ, ಶಾಸಕ ಕಿಮ್ಮನೆ ರತ್ನಾಕರ ಅವರನ್ನು ಶರಾವತಿ ಸಂತ್ರಸ್ತರ ಹೋರಾಟ ಸಮಿತಿ ಹಾಗೂ ನಿಟ್ಟೂರು-–ನಾಗೋಡಿ ಘಟಕದ ಕಾಂಗ್ರೆಸ್ ಪದಾಧಿಕಾರಿಗಳಾದ ಎ.ಒ.ರಾಮಚಂದ್ರ, ನರಸಿಂಹ ಪೂಜಾರಿ, ವಿಶ್ವನಾಥ ನಾಗೋಡಿ, ಚಂದ್ರಶೇಖರ ಶೆಟ್ಟಿ ಅಭಿನಂದಿಸಿದ್ದಾರೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊಸನಗರ:</strong> ಮಡೆನೂರು ಮತ್ತು ಲಿಂಗನಮಕ್ಕಿ ಜಲ ವಿದ್ಯುತ್ ಯೋಜನೆಗಳಿಂದ ಹೊಸನಗರ ಮತ್ತು ಸಾಗರ ತಾಲ್ಲೂಕಿನ ಅನೇಕ ಗ್ರಾಮಗಳು ಶರಾವತಿ ಹಿನ್ನೀರಿನಿಂದ ಜಲಾವೃತಗೊಂಡು 6 ದಶಕಗಳು ಕಳೆದಿವೆ. ಈಗ ಗ್ರಾಮಗಳ ನಡುವೆ ಸಂಪರ್ಕ ಬೆಸೆಯುವ ಹಸಿರುಮಕ್ಕಿ ಸೇತುವೆ ನಿರ್ಮಾಣ ಕಾಮಗಾರಿಗೆ ಹಸಿರು ನಿಶಾನೆ ದೊರೆತಿದೆ.</p>.<p>ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಪ್ರಯತ್ನದ ಫಲವಾಗಿ ಹೊಸನಗರ-–ಸಾಗರ ತಾಲ್ಲೂಕಿನ ಎಂಟು ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಸಂಪರ್ಕ ಕಲ್ಪಿಸುವ ಈ ಸೇತುವೆ ನಿರ್ಮಾಣ ಆಗುತ್ತಿರುವುದು ಗ್ರಾಮಸ್ಥರಲ್ಲಿ ಹರ್ಷ ಉಂಟುಮಾಡಿದೆ.</p>.<p>ಹೊಸನಗರ ತಾಲ್ಲೂಕಿನ ಕೆ.ಬಿ ವೃತ್ತ ಹಾಗೂ ಸಾಗರ ತಾಲ್ಲೂಕಿನ ಹಸಿರುಮಕ್ಕಿ ಲಾಂಚ್ ಕಳುವನ್ನು ಸಂಪರ್ಕಿಸುವ ₹ 90 ಕೋಟಿ ಅಂದಾಜು ವೆಚ್ಚದ 1.1 ಕಿ.ಮೀ ಉದ್ದದ ಈ ಸೇತುವೆಗೆ ₹ 30 ಕೋಟಿ ಕಾಮಗಾರಿ ಟೆಂಡರ್ ಕರೆಯಲಾಗಿದೆ.</p>.<p>ಸೇತುವೆ ಕಾಮಗಾರಿಗೆ ಟೆಂಡರ್ ಕರೆದಿರುವುದು ಸಂತ್ರಸ್ತರ ಹೋರಾಟಕ್ಕೆ ಸಿಕ್ಕ ಫಲ ಎಂದು ಶರಾವತಿ ಸಂತ್ರಸ್ತರ ಹೋರಾಟ ಸಮಿತಿ ಕಾರ್ಯದರ್ಶಿ ಸುರೇಶ ಕೂಡ್ಲುಕೊಪ್ಪ ಸಂತಸ ವ್ಯಕ್ತಪಡಿಸುತ್ತಾರೆ.</p>.<p>‘ಈ ಯೋಜನೆಗಳಿಂದಾಗಿ ಇಲ್ಲಿಯ ರೈತರು ಮತ್ತು ಕೃಷಿ ಕಾರ್ಮಿಕರು ಮನೆ, ಜಮೀನುಗಳನ್ನು ಕಳೆದುಕೊಂಡು ನಾಡಿಗೆ ತ್ಯಾಗ ಮಾಡಿದ್ದರು. ಸರ್ಕಾರ ಪುನರ್ವಸತಿಗಾಗಿ ನೀಡಿದ್ದ ಪುಡಿಗಾಸಿನ ಪರಿಹಾರದಿಂದ ಬದುಕು ಕಟ್ಟಿಕೊಳ್ಳಲು ಕಷ್ಟವಾಗಿತ್ತು. ರಾಜ್ಯಕ್ಕೆ ಬೆಳಕು ನೀಡಿದ್ದರೂ ಮುಳುಗಡೆಯಿಂದ ಅನಾಥರಾಗಿದ್ದೇವೆ ಎಂಬ ಭಾವನೆ ಇತ್ತು. ಈಗ ಈ ಸೇತುವೆ ನಿರ್ಮಾಣಕ್ಕೆ ಸರ್ಕಾರ ಅಸ್ತು ಎಂದಿರುವುದು ಖುಷಿಯಾಗಿದೆ’ ಎಂದು ತಿಳಿಸಿದರು.</p>.<p>ಶರಾವತಿ ಹಿನ್ನೀರಿನಿಂದಾಗಿ ಎಲ್ಲಾ ರಸ್ತೆಗಳು ನಡುವೆ ಸಂಪರ್ಕಗಳು ಇರಲಿಲ್ಲ. ವಾಣಿಜ್ಯ ಕೇಂದ್ರ ಸಾಗರಕ್ಕೆ 20ರಿಂದ 40 ಕಿ.ಮೀ. ಅಂತರದ ಬದಲು 80 ರಿಂದ 90 ಕಿ.ಮೀ. ದೂರ ಕ್ರಮಿಸಬೇಕಾದ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿತ್ತು ಎಂದು ತಿಳಿಸಿದರು.</p>.<p>ಈ ಸೇತುವೆ ನಿರ್ಮಾಣದಿಂದ ಸಾಗರ-–ಕೊಡಚಾದ್ರಿ–-ಕೊಲ್ಲೂರು–-ಬೈಂದೂರು ಸಂಪರ್ಕದ ಅಂತರ 40 ಕಿ.ಮೀ ಕಡಿಮೆಯಾಗಲಿದೆ. ನಿಟ್ಟೂರು, ಸಂಪೆಕಟ್ಟೆ, ಅರಮನೆಕೊಪ್ಪ, ಸಂಕಣ್ಣ ಶ್ಯಾನುಭೋಗ, ಕೊಲ್ಲೂರು, ಬೈಂದೂರು ವ್ಯಾಪ್ತಿಯಲ್ಲಿರುವ 40 ಸಾವಿರ ಗ್ರಾಮಸ್ಥರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.</p>.<p>ಅಭಿನಂದನೆ: ಹಸಿರುಮಕ್ಕಿ ಸೇತುವೆ ನಿರ್ಮಾಣಕ್ಕೆ ಹಸಿರು ನಿಶಾನೆ ತೋರಿಸಿದ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ, ಶಾಸಕ ಕಿಮ್ಮನೆ ರತ್ನಾಕರ ಅವರನ್ನು ಶರಾವತಿ ಸಂತ್ರಸ್ತರ ಹೋರಾಟ ಸಮಿತಿ ಹಾಗೂ ನಿಟ್ಟೂರು-–ನಾಗೋಡಿ ಘಟಕದ ಕಾಂಗ್ರೆಸ್ ಪದಾಧಿಕಾರಿಗಳಾದ ಎ.ಒ.ರಾಮಚಂದ್ರ, ನರಸಿಂಹ ಪೂಜಾರಿ, ವಿಶ್ವನಾಥ ನಾಗೋಡಿ, ಚಂದ್ರಶೇಖರ ಶೆಟ್ಟಿ ಅಭಿನಂದಿಸಿದ್ದಾರೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>