ರಿಪ್ಪನ್ಪೇಟೆ: ಅರಸಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆನವಳ್ಳಿ ಗ್ರಾಮದ ಮುಡುಬದಲ್ಲಿ ಮಹಿಳೆಯೊಬ್ಬಳು ಬುಧವಾರ ತನ್ನ ಮಗುವನ್ನು ಉಸಿರುಗಟ್ಟಿಸಿ ಕೊಂದು ತಾನೂ ನೇಣಿಗೆ ಶರಣಾಗಿದ್ದಾಳೆ.
ಆಶಿತಾ (23) ಹಾಗೂ ಗಂಡು ಮಗು (1 ವರ್ಷ 2 ತಿಂಗಳು) ಮೃತಪಟ್ಟವರು.
ಸಮೀಪದ ಗವಟೂರು ಗ್ರಾಮದ ವಾಸಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಈಶ್ವರಪ್ಪಗೌಡ ಅವರ ದತ್ತು ಪುತ್ರಿಯನ್ನು ತನ್ನ ಸೋದರಮಾವ ಪಾಲಾಕ್ಷಪ್ಪಗೌಡ ಅವರ ಪುತ್ರ ವಿನಯ್ಗೌಡ ಅವರಿಗೆ ಕೊಟ್ಟು ಮೂರು ವರ್ಷಗಳ ಹಿಂದೆ ಮದುವೆ ಮಾಡಿ ಕೊಡಲಾಗಿತ್ತು.
ಆಶಿತಾ ಅವರ ಪತಿ ಬುಧವಾರ ಬೆಳಿಗ್ಗೆ 7ಕ್ಕೆ ಕೊಟ್ಟಿಗೆ ಕೆಲಸ ಮುಗಿಸಿ ಮನೆಗೆ ಬಂದು ಪತ್ನಿಯನ್ನು ಎಬ್ಬಿಸಲು ಹೋದಾಗ ಈ ಅವಘಡ ನಡೆದು ಹೋಗಿತ್ತು. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಕುರಿತು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.