ವೇದಿಕೆ ಅಧ್ಯಕ್ಷೆ ಬಾ.ಹ.ರಮಾಕುಮಾರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ದಶಮಾನೋತ್ಸವ ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ಚರ್ಚಿಸಲಾಯಿತು. ಸ್ಮರಣ ಸಂಚಿಕೆ ಹೊರತರುವ ನಿರ್ಧಾರ ಕೈಗೊಳ್ಳಲಾಯಿತು. ಜಿಲ್ಲೆಯ ರೈಲ್ವೆ ಇತಿಹಾಸ, ಪ್ರಮುಖ ರೈಲ್ವೆ ಯೋಜನೆಗಳ ಮಾಹಿತಿ ದಾಖಲಿಸಬೇಕು. ಇದರ ಜತೆಗೆ ಪ್ರಯಾಣಿಕರಿಂದ ರೈಲು ಪ್ರಯಾಣದ ಅನುಭವ, ಸ್ಮರಣೀಯ ಘಟನೆಗಳನ್ನು ಆಹ್ವಾನಿಸಿ ಪ್ರಕಟಿಸಲು ತೀರ್ಮಾನಿಸಲಾಯಿತು.