ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ತಾಲ್ಲೂಕಿನಲ್ಲಿ ಅಂತರ್ಜಲ ಕೆಳಹಂತಕ್ಕೆ ತಲುಪಿದ್ದು, ಕುಡಿಯುವ ನೀರಿಗೂ ಹಾಹಾಕಾರ ಎದುರಿಸುವಂತಾಗಿದೆ. ತಾಲ್ಲೂಕಿನ ಜನರು ಸಂಪೂರ್ಣವಾಗಿ ಹೇಮಾವತಿ ನಾಲೆ ನೀರನ್ನು ಅವಲಂಬಿಸಿದ್ದಾರೆ. ಗೌಡನಕಟ್ಟೆ, ಮತ್ತಿಹಳ್ಳಿ, ಗುರುಗದಹಳ್ಳಿ, ರಾಮಚಂದ್ರಾಪುರ, ಶಿವರ, ಕೆರೆಗೋಡಿ, ಮೇಲಾಪುರ, ಅರಳಗುಪ್ಪೆ, ಕುಪ್ಪಾಳು ಕೆರೆಗಳಿಗೆ ನೀರಿನ ಅಗತ್ಯವಿದೆ. ಇವುಗಳಲ್ಲಿ ಹಲವು ಕೆರೆಗಳಿಗೆ ನೈಸರ್ಗಿಕವಾಗಿ ನೀರು ಹರಿಯಲಿದ್ದು, ಉಳಿದ ಕೆರೆಗಳಿಗೆ ಏತ ನೀರವಾರಿ ಸೋಲರ್ ಮೂಲಕ ವಿದ್ಯುತ್ ಅಭಾವ ಬಾರದೇ ನೀರು ಹರಿಯುತ್ತದೆ’ ಎಂದರು.