ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೇಮಾವತಿಯಿಂದ 3 ಟಿಎಂಸಿ ನೀರು ಹರಿಸಲು ಒತ್ತಾಯ

Last Updated 8 ಜನವರಿ 2021, 6:16 IST
ಅಕ್ಷರ ಗಾತ್ರ

ತಿಪಟೂರು: ತಾಲ್ಲೂಕಿನ ಅಂತರ್ಜಲ ವೃದ್ಧಿ ಹಾಗೂ ಕುಡಿಯುವ ನೀರಿನ ಸೌಲಭ್ಯಕ್ಕಾಗಿ ಹೇಮಾವತಿ ನಾಲೆಯಿಂದ 3 ಟಿಎಂಸಿ ಅಡಿ ನೀರು ಹರಿಸಬೇಕೆಂದು ರೈತ ಹೋರಾಟಗಾರ ಬಳ್ಳೇಕಟ್ಟೆ ಬಿ.ಬಿ. ಸಿದ್ದಲಿಂಗಮೂರ್ತಿ ಒತ್ತಾಯಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ತಾಲ್ಲೂಕಿನಲ್ಲಿ ಅಂತರ್ಜಲ ಕೆಳಹಂತಕ್ಕೆ ತಲುಪಿದ್ದು, ಕುಡಿಯುವ ನೀರಿಗೂ ಹಾಹಾಕಾರ ಎದುರಿಸುವಂತಾಗಿದೆ. ತಾಲ್ಲೂಕಿನ ಜನರು ಸಂಪೂರ್ಣವಾಗಿ ಹೇಮಾವತಿ ನಾಲೆ ನೀರನ್ನು ಅವಲಂಬಿಸಿದ್ದಾರೆ. ಗೌಡನಕಟ್ಟೆ, ಮತ್ತಿಹಳ್ಳಿ, ಗುರುಗದಹಳ್ಳಿ, ರಾಮಚಂದ್ರಾಪುರ, ಶಿವರ, ಕೆರೆಗೋಡಿ, ಮೇಲಾಪುರ, ಅರಳಗುಪ್ಪೆ, ಕುಪ್ಪಾಳು ಕೆರೆಗಳಿಗೆ ನೀರಿನ ಅಗತ್ಯವಿದೆ. ಇವುಗಳಲ್ಲಿ ಹಲವು ಕೆರೆಗಳಿಗೆ ನೈಸರ್ಗಿಕವಾಗಿ ನೀರು ಹರಿಯಲಿದ್ದು, ಉಳಿದ ಕೆರೆಗಳಿಗೆ ಏತ ನೀರವಾರಿ ಸೋಲರ್ ಮೂಲಕ ವಿದ್ಯುತ್ ಅಭಾವ ಬಾರದೇ ನೀರು ಹರಿಯುತ್ತದೆ’ ಎಂದರು.

ಹಲವಾರು ವರ್ಷಗಳಿಂದ ಹೊನ್ನವಳ್ಳಿ ಭಾಗಕ್ಕೆ ನೀರು ಹರಿಯದಿರುವುದು ದುರಂತದ ಸಂಗತಿಯಾಗಿದೆ. ನೀರಿನ ಹಂಚಿಕೆಯಲ್ಲಿ ಹೆಚ್ಚಳವಾದರೆ ಮಾತ್ರ ತಾಲ್ಲೂಕಿನ ವಿವಿಧೆಡೆಗಳಿಗೆ ನೀರು ಹರಿಸಲು ಸಾಧ್ಯವಾಗುತ್ತದೆ. ಕೂಡಲೇ ಸಚಿವರು ಈ ಬಗ್ಗೆ ಕಾಳಜಿವಹಿಸಿ ನೀರನ ಹಂಚಿಕೆ ಹೆಚ್ಚಳ ಮಾಡಿ ವಿವಿಧ ಯೋಜನೆಗಳನ್ನು ರೂಪಿಸುವಂತೆ ಒತ್ತಾಯಿಸಿದರು.

ಮುಂದಿನ ದಿನಗಳಲ್ಲಿ ನೀರನ್ನು ಹಂಚಿಕೆ ಮಾಡಡಿದ್ದರೆ ತಾಲ್ಲೂಕಿನಾದ್ಯಂತ ಹೋರಾಟ ಸಮಿತಿಯನ್ನು ರಚನೆ ಮಾಡಿ ಗ್ರಾಮಮಟ್ಟದಲ್ಲಿ ಜನಸಾಮಾನ್ಯರಿಗೆ ಜಾಗೃತಗೊಳಿಸಿ ಹೋರಾಟ ಮಾಡುವ ಚಿಂತನೆಯನ್ನು ನಡೆಸಿರುವುದಾಗಿ ತಿಳಿಸಿದರು.

ಕೆರಗೋಡಿ ಕೆ.ಎನ್.ಯೋಘಾನಂದ್, ತಡಸೂರು ಟಿ.ಸಿ.ನಾಗರಾಜು, ಗಿರೀಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT