ಎತ್ತೇನಹಳ್ಳಿಯ ಮಾರಮ್ಮದೇವಿ, ದೊಡ್ಡಮ್ಮ, ಚಿಕ್ಕಮ್ಮ, ಕಡಬ ಗ್ರಾಮದ ದಾಳಿಯಮ್ಮ, ಕೊಲ್ಲಾಪುರದಮ್ಮ ಮತ್ತು ಭದ್ರಕಾಳಮ್ಮ, ಎತ್ತೇನಹಳ್ಳಿಯ ಕೆಂಚರಾಯಸ್ವಾಮಿ ದೇವರುಗಳನ್ನು ಕರೆತಂದು ಮುದಿಗೆರೆಯ ಸೋಮೇಶ್ವರಸ್ವಾಮಿ, ಆಂಜನೇಯಸ್ವಾಮಿ, ನರಸಿಂಹಸ್ವಾಮಿ, ಕೊಲ್ಲಾಪುರದಮ್ಮ, ಮಹೇಶ್ವರಮ್ಮ ಮತ್ತು ದುರ್ಗಾಪರಮೇಶ್ವರಿ ದೇವರುಗಳೊಂದಿಗೆ ಗ್ರಾಮದಲ್ಲಿ ಮೆರವಣಿಗೆ ಮಾಡಲಾಯಿತು. ವೀರಗಾಸೆ, ಕರಡಿವಾದ್ಯ ಸೇರಿದಂತೆ ವಿವಿಧ ಜನಪದ ಕಲಾಮೇಳಗಳು ಮೆರವಣಿಗೆಗೆ ಮೆರುಗು ತಂದಿದ್ದವು.