ರವಿ ನಗರದ ತೋಟದ ಸಾಲು ಅಗ್ರಹಾರದ ನಿವಾಸಿ. ತನ್ನ ಸ್ನೇಹಿತನ ಮದುವೆಗಾಗಿ ಕನ್ನೇನಹಳ್ಳಿಗೆ ಹೋಗಿದ್ದರು. ಮದುವೆಗೆ ಹೊಂಬಾಳೆ ತರಲು ತೋಟಕ್ಕೆ ತೆರಳಿದ್ದರು. ಬಿದಿರಿನ ಕಟ್ಟಿಗೆಗೆ ಕುಡುಗೋಲು ಕಟ್ಟಿ ಹೊಂಬಾಳೆ ಕೀಳುವಾಗ ತೆಂಗಿನ ಮರದ ಮೇಲೆ ಹಾದು ಹೋಗಿರುವ ವಿದ್ಯುತ್ ತಂತಿ ತಗುಲಿದೆ. ಮಳೆಗೆ ಬಿದಿರು ನೆಂದಿದ್ದರಿಂದ ವಿದ್ಯುತ್ ಸ್ಪರ್ಶಿಸಿದೆ. ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ರವಿ ಸಾವನ್ನಪ್ಪಿದ್ದಾರೆ. ಬೆಳ್ಳಾವಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.