ಶಿಕ್ಷಕರ ನಡುವಿನ ಜಗಳಕ್ಕೆ ನಮ್ಮ ಮಕ್ಕಳನ್ನು ಅಲೆಸಲು ನಾವು ಸಿದ್ಧವಿಲ್ಲ. ಶಾಲೆಗೆ ಈಗಾಗಲೇ ಕೆಟ್ಟ ಹೆಸರು ಬರುತ್ತಿದ್ದು ಅಲ್ಲಿ ನಮ್ಮ ಮಕ್ಕಳು ಕಲಿಯಲು ಹಿಂದೇಟು ಹಾಕುತ್ತಿದ್ದಾರೆ. ಅಧಿಕಾರಿಗಳು ಮೊದಲು ಶಿಕ್ಷಕರ ಆಂತರಿಕ ಸಮಸ್ಯೆ ಬಗೆಹರಿಸಲಿ.
ತಕೀ ಬೇಗ್ ಪೋಷಕರು
ಶಿಕ್ಷಕರನ್ನು ನಂಬಿ ಮಕ್ಕಳನ್ನು ಶಾಲೆಗೆ ಕಳುಹಿಸಲು ಸಾಧ್ಯವಿಲ್ಲ. ಶಿಕ್ಷಕರನ್ನು ಬದಲಾಯಿಸುವ ಮೂಲಕ ಶಿಕ್ಷಣ ಇಲಾಖೆ ಅಧಿಕಾರಿಗಳು ಶಾಲೆಯನ್ನು ಉಳಿಸಿ ಮಕ್ಕಳ ಶಿಕ್ಷಣಕ್ಕೆ ಅವಕಾಶ ಮಾಡಿಕೊಡಲಿ.