<p><strong>ಕೊಡಿಗೇನಹಳ್ಳಿ:</strong> ಗ್ರಾಮದ ಸರ್ವೋದಯ ಪ್ರಾಥಮಿಕ ಶಾಲೆಗೆ ಹಳೆಯ ವಿದ್ಯಾರ್ಥಿ ಸಲ್ಮಾನ್ ಹಾಗೂ ಸಹೋದರ ಇಮ್ರಾನ್ ಎರಡು ಶೌಚಾಲಯಗಳನ್ನು ಕಟ್ಟಿಸಿಕೊಟ್ಟಿದ್ದು, ಗುರುವಾರ ಪೋಷಕರೊಂದಿಗೆ ಬಂದು ಚಾಲನೆ ನೀಡಿದರು.</p>.<p>ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸ್ಥೆಯ ಕಾರ್ಯದರ್ಶಿ ಜಿ.ವಿ. ವೆಂಕಟರಾಮು, ಸಲ್ಮಾನ್ ಹಾಗೂ ಇಮ್ರಾನ್ ಅವರು ಇಂದು ಬೆಂಗಳೂರಿನಲ್ಲಿ ದೊಡ್ಡ ಸಂಸ್ಥೆ ನಡೆಸುವುದರ ಜೊತೆಗೆ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ ಎಂದು ಪ್ರಶಂಸಿಸಿದರು.</p>.<p>ಹಳೆ ವಿದ್ಯಾರ್ಥಿ ಸಲ್ಮಾನ್ ಮಾತನಾಡಿ, ವಿದ್ಯಾರ್ಥಿ ದಿಸೆಯಲ್ಲಿ ಪ್ರತಿಯೊಂದನ್ನು ಕಷ್ಟಪಡುವ ಬದಲು ಇಷ್ಟಪಟ್ಟು ಮಾಡಿದರೆ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ. ಇದಕ್ಕೆ ಪೋಷಕರ ಸಹಕಾರ ಕೂಡ ಅತ್ಯಗತ್ಯ ಎಂದರು.</p>.<p>ಸಂಸ್ಥೆ ಅಧ್ಯಕ್ಷ ರವಿಮೋಹನರೆಡ್ಡಿ ಮಾತನಾಡಿದರು.</p>.<p>ಹಳೆ ವಿದ್ಯಾರ್ಥಿಯ ಪೋಷಕರಾದ ಮುಸ್ತಾಪ, ತಹಸೀನ್, ಸಹೋದರ ಇಮ್ರಾನ್, ಪತ್ನಿ ಸಾನಿಯಾ, ಸಂಸ್ಥೆಯ ಖಜಾಂಚಿ ಪ್ರಸನ್ನಚಾರ್, ನಿರ್ದೇಶಕ ರಾಜಗೋಪಾಲ ರೆಡ್ಡಿ, ಕಾಳಪ್ಪ, ಸದಾನಂದ, ಉಪನ್ಯಾಸಕ ಓಬಳಪ್ಪ, ಮುಖ್ಯ ಶಿಕ್ಷಕಿ ಭಾರತಮ್ಮ, ಶಿಕ್ಷಕರಾದ ಗೋಪಾಲಯ್ಯ, ಪೈರೋಜ್, ಅರುಣ, ನಿಜರಾಜಯ್ಯ, ಜಗದಾಂಬ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊಡಿಗೇನಹಳ್ಳಿ:</strong> ಗ್ರಾಮದ ಸರ್ವೋದಯ ಪ್ರಾಥಮಿಕ ಶಾಲೆಗೆ ಹಳೆಯ ವಿದ್ಯಾರ್ಥಿ ಸಲ್ಮಾನ್ ಹಾಗೂ ಸಹೋದರ ಇಮ್ರಾನ್ ಎರಡು ಶೌಚಾಲಯಗಳನ್ನು ಕಟ್ಟಿಸಿಕೊಟ್ಟಿದ್ದು, ಗುರುವಾರ ಪೋಷಕರೊಂದಿಗೆ ಬಂದು ಚಾಲನೆ ನೀಡಿದರು.</p>.<p>ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸ್ಥೆಯ ಕಾರ್ಯದರ್ಶಿ ಜಿ.ವಿ. ವೆಂಕಟರಾಮು, ಸಲ್ಮಾನ್ ಹಾಗೂ ಇಮ್ರಾನ್ ಅವರು ಇಂದು ಬೆಂಗಳೂರಿನಲ್ಲಿ ದೊಡ್ಡ ಸಂಸ್ಥೆ ನಡೆಸುವುದರ ಜೊತೆಗೆ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ ಎಂದು ಪ್ರಶಂಸಿಸಿದರು.</p>.<p>ಹಳೆ ವಿದ್ಯಾರ್ಥಿ ಸಲ್ಮಾನ್ ಮಾತನಾಡಿ, ವಿದ್ಯಾರ್ಥಿ ದಿಸೆಯಲ್ಲಿ ಪ್ರತಿಯೊಂದನ್ನು ಕಷ್ಟಪಡುವ ಬದಲು ಇಷ್ಟಪಟ್ಟು ಮಾಡಿದರೆ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ. ಇದಕ್ಕೆ ಪೋಷಕರ ಸಹಕಾರ ಕೂಡ ಅತ್ಯಗತ್ಯ ಎಂದರು.</p>.<p>ಸಂಸ್ಥೆ ಅಧ್ಯಕ್ಷ ರವಿಮೋಹನರೆಡ್ಡಿ ಮಾತನಾಡಿದರು.</p>.<p>ಹಳೆ ವಿದ್ಯಾರ್ಥಿಯ ಪೋಷಕರಾದ ಮುಸ್ತಾಪ, ತಹಸೀನ್, ಸಹೋದರ ಇಮ್ರಾನ್, ಪತ್ನಿ ಸಾನಿಯಾ, ಸಂಸ್ಥೆಯ ಖಜಾಂಚಿ ಪ್ರಸನ್ನಚಾರ್, ನಿರ್ದೇಶಕ ರಾಜಗೋಪಾಲ ರೆಡ್ಡಿ, ಕಾಳಪ್ಪ, ಸದಾನಂದ, ಉಪನ್ಯಾಸಕ ಓಬಳಪ್ಪ, ಮುಖ್ಯ ಶಿಕ್ಷಕಿ ಭಾರತಮ್ಮ, ಶಿಕ್ಷಕರಾದ ಗೋಪಾಲಯ್ಯ, ಪೈರೋಜ್, ಅರುಣ, ನಿಜರಾಜಯ್ಯ, ಜಗದಾಂಬ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>