<p><strong>ತುಮಕೂರು:</strong> ಕೊರೆಯುವ ಚಳಿಯಲ್ಲಿಯೇ ನಡುಗುತ್ತ ಮಲಗಿದ ಮಹಿಳೆಯರು, ಬ್ಯಾಗುಗಳೇ ತಲೆದಿಂಬು, ಶೌಚಕ್ಕೆ ವ್ಯವಸ್ಥೆ ಇಲ್ಲದೆ ಪರದಾಟ...ಇದು ನಗರದ ಗಾಜಿನ ಮನೆಯಲ್ಲಿ ಮಂಗಳವಾರ ರಾತ್ರಿ ವಾಸ್ತವ್ಯ ಹೂಡಿದ್ದ ಅಂಗನವಾಡಿ ಕಾರ್ಯಕರ್ತೆಯರ ಸ್ಥಿತಿ.</p>.<p>ಸಮಗ್ರ ಶಿಶು ಅಭಿವೃದ್ಧಿ ಯೋಜನೆ (ಐಸಿಡಿಎಸ್) ದುರ್ಬಲಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಆರೋಪಿಸಿ ಹಾಗೂ ಅಂಗನವಾಡಿ ಕೇಂದ್ರಗಳಲ್ಲಿಯೇ ಪೂರ್ವ ಪ್ರಾಥಮಿಕ ಶಿಕ್ಷಣ ಆರಂಭಿಸುವಂತೆ ಆಗ್ರಹಿಸಿ ಮಂಗಳವಾರ ನಗರದಿಂದ ಪಾದಯಾತ್ರೆ ಹಮ್ಮಿಕೊಂಡಿದ್ದರು.</p>.<p>ಪಾದಯಾತ್ರೆಗೆ ಪೊಲೀಸರು ಅನುಮತಿ ನೀಡದ ಕಾರಣ ಹಾಗೂ ಸಂಘಟನೆಯ ಮುಖಂಡರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಜತೆ ಮಾತುಕತೆಗೆ ತೆರಳಿದ್ದರಿಂದ ರಾಜ್ಯದ ನಾನಾ ಕಡೆಗಳಿಂದ ಬಂದಿದ್ದ ಕಾರ್ಯಕರ್ತೆಯರು ಗಾಜಿನ ಮನೆಯಲ್ಲಿಯೇ ತಂಗಿದರು.</p>.<p>ಬೆಳಿಗ್ಗೆಯಿಂದಲೇ ನಾನಾ ಭಾಗಗಳ ಕಾರ್ಯಕರ್ತೆಯರು ಬಸ್, ರೈಲುಗಳಲ್ಲಿ ನಗರಕ್ಕೆ ಬಂದರು. ಟೌನ್ಹಾಲ್ ಬಳಿ ಭಾರಿ ಸಂಖ್ಯೆಯಲ್ಲಿ ಸೇರಿದರು. ಗಾಜಿನ ಮನೆಯ ಮುಂಭಾಗದ ರಸ್ತೆಗಳಲ್ಲಿ ಕಿಕ್ಕಿರಿದು ನೆರೆದರು.</p>.<p>ಪಾದಯಾತ್ರೆ ಅನುಮತಿ ನಿರಾಕರಣೆಗೆ ಬಗ್ಗೆ ಅಂಗನವಾಡಿ ಫೆಡರೇಷನ್ ಮುಖಂಡರ ಜತೆ ಗಾಂಧಿನಗರದ ಜನಚಳವಳಿ ಕೇಂದ್ರದಲ್ಲಿ ಪೊಲೀಸರು ಮಾತುಕತೆ ನಡೆಸಿದರು. ನಂತರ ಮುಖಂಡರು ಅಲ್ಲಿಂದ ಟೌನ್ಹಾಲ್ ಬಳಿಗೆ ಬಂದರು. ಅದಾಗಲೇ ಜಮಾವಣೆಗೊಂಡಿದ್ದ ಕಾರ್ಯಕರ್ತೆಯರು ಘೋಷಣೆಗಳ ಮೂಲಕ ಹಕ್ಕೊತ್ತಾಯ ಮಂಡಿಸುತ್ತಿದ್ದರು.</p>.<p>ರಾಜ್ಯ ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಎಸ್.ವರಲಕ್ಷ್ಮಿ ಮಾತನಾಡಿ, ‘ರಾಜ್ಯ ಸರ್ಕಾರ ಪ್ರಜಾಸತ್ತಾತ್ಮಕವಾಗಿ ನಡೆದುಕೊಳ್ಳುತ್ತಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೋರಾಟ ನಮ್ಮ ಹಕ್ಕು. ಸರ್ಕಾರ ಈ ಹಕ್ಕನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ’ ಎಂದು ದೂರಿದರು.</p>.<p>‘ನಾವು ಯಾವುದೇ ವಿಧ್ವಂಸದ ಕೃತ್ಯಗಳಲ್ಲಿ ತೊಡಗಿಲ್ಲ. ಆದರೆ ನಮ್ಮ ಪ್ರತಿಭಟನೆಯನ್ನು ಸರ್ಕಾರ ಹತ್ತಿಕ್ಕಲು ಮುಂದಾಗಿದೆ. ಇದು ನಿಜಕ್ಕೂ ಅಕ್ಷಮ್ಯ’ ಎಂದು ಆಕ್ರೋಶ ವ್ಯಕ್ತಪಡಿಸಿದರು.</p>.<p>ಅಖಿಲ ಭಾರತ ಅಂಗನವಾಡಿ ನೌಕರರ ಫೆಡರೇಷನ್ ಪ್ರಧಾನ ಕಾರ್ಯದರ್ಶಿ ಸಿಂಧು, ‘ಇದು ಸರ್ಕಾರದ ದೌರ್ಜನ್ಯ ಎತ್ತಿ ತೋರುತ್ತಿದೆ. ರಾಜ್ಯ ಸರ್ಕಾರ ಪ್ರಜಾಸತ್ತಾತ್ಮಕವಾಗಿ ನಡೆದುಕೊಳ್ಳುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.</p>.<p>ಟೌನ್ಹಾಲ್ನಿಂದ ಕಾರ್ಯಕರ್ತೆಯರು ಮೆರವಣಿಗೆಯಲ್ಲಿ ಗಾಜಿನ ಮನೆಯತ್ತ ತೆರಳಿದರು. ಅಲ್ಲಿ ಬಹಿರಂಗ ಸಮಾವೇಶ ನಡೆಯಿತು. </p>.<p>ಪ್ರಾಂತರೈತ ಸಂಘದ ಯು.ಬಸವರಾಜು, ಸಿಐಟಿಯು ಸಂಘಟನೆ ಮುಖಂಡರಾದ ಎಚ್.ಎಸ್.ಸುನಂದಾ, ಮೀನಾಕ್ಷಿ ಸುಂದರಂ, ಜಿ. ಕಮಲಾ, ಕೆ.ಎನ್.ಉಮೇಶ್, ಎಸ್ಎಫ್ಐ ಸಂಘಟನೆಯ ಗುರುರಾಜ್ ದೇಸಾಯಿ, ಸೈಯದ್ ಮುಜೀಬ್, ಸುಬ್ರಹ್ಮಣ್ಯ, ಅಜ್ಜಪ್ಪ ಇದ್ದರು.</p>.<p>***</p>.<p><strong>ರಾತ್ರೋರಾತ್ರಿ ಅನುಮತಿ ನಿರಾಕರಣೆ</strong></p>.<p>ತುಮಕೂರು: ನಾಡಿನ ಮಕ್ಕಳನ್ನು ಸಲಹಿದ ಅಂಗನವಾಡಿ ಕಾರ್ಯಕರ್ತೆಯರನ್ನು ಸರ್ಕಾರ ಕ್ರಿಮಿನಲ್ಗಳಂತೆ ಕಂಡು ಪಾದಯಾತ್ರೆ ತಡೆಯಲು ಮುಂದಾಗಿದೆ ಎಂದು ಎಸ್.ವರಲಕ್ಷ್ಮಿ ಆರೋಪಿಸಿದರು.</p>.<p>ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಡಿ.9ರ ಸಂಜೆ 7ಗಂಟೆಯವರೆಗೂ ಲಿಖಿತವಾಗಿ ಅನುಮತಿ ಕೊಡಲಾಗುವುದು ಎಂದು ಪೊಲೀಸರು ತಿಳಿಸಿದ್ದರು. ಆದರೆ ರಾತ್ರಿ 11ಕ್ಕೆ ತುಮಕೂರು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ದೂರವಾಣಿ ಕರೆ ಮೂಲಕ ಅನುಮತಿ ನಿರಾಕರಣೆಯ ಮಾಹಿತಿ ನೀಡಿದರು’ ಎಂದರು.</p>.<p>ಚಿತ್ರದುರ್ಗ, ದಾವಣಗೆರೆ, ಚಿಕ್ಕಬಳ್ಳಾಪುರ, ಹಾಸನ, ಮೈಸೂರು, ಕೋಲಾರ, ಬೆಂಗಳೂರಿನಿಂದ ಹೊರಟವರಿಗೆ ಪೊಲೀಸರು ಅನುಮತಿ ನಿರಾಕರಿಸಿ ಅವರ ಕುಟುಂಬದವರಿಗೆ ಧಮಕಿ ಹಾಕಿದ್ದಾರೆ. ಕೋಲಾರ ಜಿಲ್ಲೆಯ ಮಾಲೂರಿನಲ್ಲಿ ಸಂಘಟನೆಯ ರಾಜ್ಯ ಕಾರ್ಯದರ್ಶಿ ನಾಗರತ್ನ ಅವರನ್ನು ಗೃಹಬಂಧನದಲ್ಲಿ ಇರಿಸಿದ್ದಾರೆ ಎಂದು ದೂರಿದರು.</p>.<p>ಕೋಲಾರದಲ್ಲಿ ಕಾಯ್ದಿರಿಸಿದ 3 ಬಸ್ಗಳನ್ನು ರದ್ದುಪಡಿಸಿದ್ದಾರೆ. ಗೌರಿಬಿದನೂರಿನಲ್ಲಿ 2 ಬಸ್, 3 ಟೆಂಪೊ, ಚಿಂತಾಮಣಿಯಲ್ಲಿ 400 ಜನರನ್ನು ಹಾಗೂ ಗುಲ್ಬರ್ಗದಿಂದ ಗೌರಿಬಿದನೂರು ಮೂಲಕ ಬಂದ 2 ಬಸ್, 2ವ್ಯಾನ್ಗಳನ್ನು ತಡೆದಿದ್ದಾರೆ. ತುಮಕೂರಿನಲ್ಲೂ ಭಯದ ವಾತಾವರಣವನ್ನು ಪೊಲೀಸರು ನಿರ್ಮಿಸಿದ್ದಾರೆ ಎಂದು ಆರೋಪಿಸಿದರು.</p>.<p>ಜನರು ತಮ್ಮ ಹಕ್ಕುಗಳನ್ನು ಕೇಳಲು ಬಂದಾಗ ತಡೆಯುತ್ತಿರುವುದು ಜನರ ಹಕ್ಕುಗಳ ಮೇಲಿನ ದಾಳಿ ಆಗುತ್ತದೆ. ಇದನ್ನು ನಾವು ಖಂಡಿಸುತ್ತೇವೆ. ಸರ್ಕಾರ ಮತ್ತು ಪೊಲೀಸ್ ಇಲಾಖೆ ಹೋರಾಟ ಹತ್ತಿಕ್ಕುವ ಬದಲಿಗೆ ಅಂಗನವಾಡಿ ನೌಕರರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವ ಕಡೆಗೆ ಗಮನಹರಿಸಬೇಕು ಎಂದರು.</p>.<p>****</p>.<p><strong>ತಾಯಂದಿರೇ ಸರ್ಕಾರ ಕಿತ್ತೆಸೆಯುವರು</strong></p>.<p>ಗಾಜಿನ ಮನೆಯಲ್ಲಿ ನಡೆದ ಬಹಿರಂಗ ಸಮಾವೇಶದಲ್ಲಿ ಹಿರಿಯ ರಂಗಕರ್ಮಿ ಪ್ರಸನ್ನ ಮಾತನಾಡಿ, ‘ಯಡಿಯೂರಪ್ಪ ಅವರೇ ಕಾಂಗ್ರೆಸ್ ನಿಮ್ಮನ್ನು ಕಿತ್ತೊಗೆಯುವ ಬದಲು ಈ ತಾಯಂದಿರೇ ನಿಮ್ಮ ಸರ್ಕಾರ ಕಿತ್ತು ಎಸೆಯುವರು’ ಎಂದರು.</p>.<p>ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆಗಳು ವೈಜ್ಞಾನಿಕವಾಗಿವೆ. ಅಂಗನವಾಡಿಗಳನ್ನು ನಾಶ ಮಾಡಲು ಪಯಾಯ ವ್ಯವಸ್ಥೆ ಹುಟ್ಟು ಹಾಕುತ್ತಿರುವುದು ಸರಿಯಲ್ಲ. ಬೇಡಿಕೆ ಈಡೇರದಿದ್ದರೆ ಗ್ರಾಮ ಸ್ವರಾಜ್ ಹಾಗೂ ಜನಪರ ಸಂಘಟನೆಗಳು ಹೋರಾಟಕ್ಕೆ ಬೆಂಬಲ ನೀಡುತ್ತವೆ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತುಮಕೂರು:</strong> ಕೊರೆಯುವ ಚಳಿಯಲ್ಲಿಯೇ ನಡುಗುತ್ತ ಮಲಗಿದ ಮಹಿಳೆಯರು, ಬ್ಯಾಗುಗಳೇ ತಲೆದಿಂಬು, ಶೌಚಕ್ಕೆ ವ್ಯವಸ್ಥೆ ಇಲ್ಲದೆ ಪರದಾಟ...ಇದು ನಗರದ ಗಾಜಿನ ಮನೆಯಲ್ಲಿ ಮಂಗಳವಾರ ರಾತ್ರಿ ವಾಸ್ತವ್ಯ ಹೂಡಿದ್ದ ಅಂಗನವಾಡಿ ಕಾರ್ಯಕರ್ತೆಯರ ಸ್ಥಿತಿ.</p>.<p>ಸಮಗ್ರ ಶಿಶು ಅಭಿವೃದ್ಧಿ ಯೋಜನೆ (ಐಸಿಡಿಎಸ್) ದುರ್ಬಲಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಆರೋಪಿಸಿ ಹಾಗೂ ಅಂಗನವಾಡಿ ಕೇಂದ್ರಗಳಲ್ಲಿಯೇ ಪೂರ್ವ ಪ್ರಾಥಮಿಕ ಶಿಕ್ಷಣ ಆರಂಭಿಸುವಂತೆ ಆಗ್ರಹಿಸಿ ಮಂಗಳವಾರ ನಗರದಿಂದ ಪಾದಯಾತ್ರೆ ಹಮ್ಮಿಕೊಂಡಿದ್ದರು.</p>.<p>ಪಾದಯಾತ್ರೆಗೆ ಪೊಲೀಸರು ಅನುಮತಿ ನೀಡದ ಕಾರಣ ಹಾಗೂ ಸಂಘಟನೆಯ ಮುಖಂಡರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಜತೆ ಮಾತುಕತೆಗೆ ತೆರಳಿದ್ದರಿಂದ ರಾಜ್ಯದ ನಾನಾ ಕಡೆಗಳಿಂದ ಬಂದಿದ್ದ ಕಾರ್ಯಕರ್ತೆಯರು ಗಾಜಿನ ಮನೆಯಲ್ಲಿಯೇ ತಂಗಿದರು.</p>.<p>ಬೆಳಿಗ್ಗೆಯಿಂದಲೇ ನಾನಾ ಭಾಗಗಳ ಕಾರ್ಯಕರ್ತೆಯರು ಬಸ್, ರೈಲುಗಳಲ್ಲಿ ನಗರಕ್ಕೆ ಬಂದರು. ಟೌನ್ಹಾಲ್ ಬಳಿ ಭಾರಿ ಸಂಖ್ಯೆಯಲ್ಲಿ ಸೇರಿದರು. ಗಾಜಿನ ಮನೆಯ ಮುಂಭಾಗದ ರಸ್ತೆಗಳಲ್ಲಿ ಕಿಕ್ಕಿರಿದು ನೆರೆದರು.</p>.<p>ಪಾದಯಾತ್ರೆ ಅನುಮತಿ ನಿರಾಕರಣೆಗೆ ಬಗ್ಗೆ ಅಂಗನವಾಡಿ ಫೆಡರೇಷನ್ ಮುಖಂಡರ ಜತೆ ಗಾಂಧಿನಗರದ ಜನಚಳವಳಿ ಕೇಂದ್ರದಲ್ಲಿ ಪೊಲೀಸರು ಮಾತುಕತೆ ನಡೆಸಿದರು. ನಂತರ ಮುಖಂಡರು ಅಲ್ಲಿಂದ ಟೌನ್ಹಾಲ್ ಬಳಿಗೆ ಬಂದರು. ಅದಾಗಲೇ ಜಮಾವಣೆಗೊಂಡಿದ್ದ ಕಾರ್ಯಕರ್ತೆಯರು ಘೋಷಣೆಗಳ ಮೂಲಕ ಹಕ್ಕೊತ್ತಾಯ ಮಂಡಿಸುತ್ತಿದ್ದರು.</p>.<p>ರಾಜ್ಯ ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಎಸ್.ವರಲಕ್ಷ್ಮಿ ಮಾತನಾಡಿ, ‘ರಾಜ್ಯ ಸರ್ಕಾರ ಪ್ರಜಾಸತ್ತಾತ್ಮಕವಾಗಿ ನಡೆದುಕೊಳ್ಳುತ್ತಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೋರಾಟ ನಮ್ಮ ಹಕ್ಕು. ಸರ್ಕಾರ ಈ ಹಕ್ಕನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ’ ಎಂದು ದೂರಿದರು.</p>.<p>‘ನಾವು ಯಾವುದೇ ವಿಧ್ವಂಸದ ಕೃತ್ಯಗಳಲ್ಲಿ ತೊಡಗಿಲ್ಲ. ಆದರೆ ನಮ್ಮ ಪ್ರತಿಭಟನೆಯನ್ನು ಸರ್ಕಾರ ಹತ್ತಿಕ್ಕಲು ಮುಂದಾಗಿದೆ. ಇದು ನಿಜಕ್ಕೂ ಅಕ್ಷಮ್ಯ’ ಎಂದು ಆಕ್ರೋಶ ವ್ಯಕ್ತಪಡಿಸಿದರು.</p>.<p>ಅಖಿಲ ಭಾರತ ಅಂಗನವಾಡಿ ನೌಕರರ ಫೆಡರೇಷನ್ ಪ್ರಧಾನ ಕಾರ್ಯದರ್ಶಿ ಸಿಂಧು, ‘ಇದು ಸರ್ಕಾರದ ದೌರ್ಜನ್ಯ ಎತ್ತಿ ತೋರುತ್ತಿದೆ. ರಾಜ್ಯ ಸರ್ಕಾರ ಪ್ರಜಾಸತ್ತಾತ್ಮಕವಾಗಿ ನಡೆದುಕೊಳ್ಳುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.</p>.<p>ಟೌನ್ಹಾಲ್ನಿಂದ ಕಾರ್ಯಕರ್ತೆಯರು ಮೆರವಣಿಗೆಯಲ್ಲಿ ಗಾಜಿನ ಮನೆಯತ್ತ ತೆರಳಿದರು. ಅಲ್ಲಿ ಬಹಿರಂಗ ಸಮಾವೇಶ ನಡೆಯಿತು. </p>.<p>ಪ್ರಾಂತರೈತ ಸಂಘದ ಯು.ಬಸವರಾಜು, ಸಿಐಟಿಯು ಸಂಘಟನೆ ಮುಖಂಡರಾದ ಎಚ್.ಎಸ್.ಸುನಂದಾ, ಮೀನಾಕ್ಷಿ ಸುಂದರಂ, ಜಿ. ಕಮಲಾ, ಕೆ.ಎನ್.ಉಮೇಶ್, ಎಸ್ಎಫ್ಐ ಸಂಘಟನೆಯ ಗುರುರಾಜ್ ದೇಸಾಯಿ, ಸೈಯದ್ ಮುಜೀಬ್, ಸುಬ್ರಹ್ಮಣ್ಯ, ಅಜ್ಜಪ್ಪ ಇದ್ದರು.</p>.<p>***</p>.<p><strong>ರಾತ್ರೋರಾತ್ರಿ ಅನುಮತಿ ನಿರಾಕರಣೆ</strong></p>.<p>ತುಮಕೂರು: ನಾಡಿನ ಮಕ್ಕಳನ್ನು ಸಲಹಿದ ಅಂಗನವಾಡಿ ಕಾರ್ಯಕರ್ತೆಯರನ್ನು ಸರ್ಕಾರ ಕ್ರಿಮಿನಲ್ಗಳಂತೆ ಕಂಡು ಪಾದಯಾತ್ರೆ ತಡೆಯಲು ಮುಂದಾಗಿದೆ ಎಂದು ಎಸ್.ವರಲಕ್ಷ್ಮಿ ಆರೋಪಿಸಿದರು.</p>.<p>ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಡಿ.9ರ ಸಂಜೆ 7ಗಂಟೆಯವರೆಗೂ ಲಿಖಿತವಾಗಿ ಅನುಮತಿ ಕೊಡಲಾಗುವುದು ಎಂದು ಪೊಲೀಸರು ತಿಳಿಸಿದ್ದರು. ಆದರೆ ರಾತ್ರಿ 11ಕ್ಕೆ ತುಮಕೂರು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ದೂರವಾಣಿ ಕರೆ ಮೂಲಕ ಅನುಮತಿ ನಿರಾಕರಣೆಯ ಮಾಹಿತಿ ನೀಡಿದರು’ ಎಂದರು.</p>.<p>ಚಿತ್ರದುರ್ಗ, ದಾವಣಗೆರೆ, ಚಿಕ್ಕಬಳ್ಳಾಪುರ, ಹಾಸನ, ಮೈಸೂರು, ಕೋಲಾರ, ಬೆಂಗಳೂರಿನಿಂದ ಹೊರಟವರಿಗೆ ಪೊಲೀಸರು ಅನುಮತಿ ನಿರಾಕರಿಸಿ ಅವರ ಕುಟುಂಬದವರಿಗೆ ಧಮಕಿ ಹಾಕಿದ್ದಾರೆ. ಕೋಲಾರ ಜಿಲ್ಲೆಯ ಮಾಲೂರಿನಲ್ಲಿ ಸಂಘಟನೆಯ ರಾಜ್ಯ ಕಾರ್ಯದರ್ಶಿ ನಾಗರತ್ನ ಅವರನ್ನು ಗೃಹಬಂಧನದಲ್ಲಿ ಇರಿಸಿದ್ದಾರೆ ಎಂದು ದೂರಿದರು.</p>.<p>ಕೋಲಾರದಲ್ಲಿ ಕಾಯ್ದಿರಿಸಿದ 3 ಬಸ್ಗಳನ್ನು ರದ್ದುಪಡಿಸಿದ್ದಾರೆ. ಗೌರಿಬಿದನೂರಿನಲ್ಲಿ 2 ಬಸ್, 3 ಟೆಂಪೊ, ಚಿಂತಾಮಣಿಯಲ್ಲಿ 400 ಜನರನ್ನು ಹಾಗೂ ಗುಲ್ಬರ್ಗದಿಂದ ಗೌರಿಬಿದನೂರು ಮೂಲಕ ಬಂದ 2 ಬಸ್, 2ವ್ಯಾನ್ಗಳನ್ನು ತಡೆದಿದ್ದಾರೆ. ತುಮಕೂರಿನಲ್ಲೂ ಭಯದ ವಾತಾವರಣವನ್ನು ಪೊಲೀಸರು ನಿರ್ಮಿಸಿದ್ದಾರೆ ಎಂದು ಆರೋಪಿಸಿದರು.</p>.<p>ಜನರು ತಮ್ಮ ಹಕ್ಕುಗಳನ್ನು ಕೇಳಲು ಬಂದಾಗ ತಡೆಯುತ್ತಿರುವುದು ಜನರ ಹಕ್ಕುಗಳ ಮೇಲಿನ ದಾಳಿ ಆಗುತ್ತದೆ. ಇದನ್ನು ನಾವು ಖಂಡಿಸುತ್ತೇವೆ. ಸರ್ಕಾರ ಮತ್ತು ಪೊಲೀಸ್ ಇಲಾಖೆ ಹೋರಾಟ ಹತ್ತಿಕ್ಕುವ ಬದಲಿಗೆ ಅಂಗನವಾಡಿ ನೌಕರರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವ ಕಡೆಗೆ ಗಮನಹರಿಸಬೇಕು ಎಂದರು.</p>.<p>****</p>.<p><strong>ತಾಯಂದಿರೇ ಸರ್ಕಾರ ಕಿತ್ತೆಸೆಯುವರು</strong></p>.<p>ಗಾಜಿನ ಮನೆಯಲ್ಲಿ ನಡೆದ ಬಹಿರಂಗ ಸಮಾವೇಶದಲ್ಲಿ ಹಿರಿಯ ರಂಗಕರ್ಮಿ ಪ್ರಸನ್ನ ಮಾತನಾಡಿ, ‘ಯಡಿಯೂರಪ್ಪ ಅವರೇ ಕಾಂಗ್ರೆಸ್ ನಿಮ್ಮನ್ನು ಕಿತ್ತೊಗೆಯುವ ಬದಲು ಈ ತಾಯಂದಿರೇ ನಿಮ್ಮ ಸರ್ಕಾರ ಕಿತ್ತು ಎಸೆಯುವರು’ ಎಂದರು.</p>.<p>ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆಗಳು ವೈಜ್ಞಾನಿಕವಾಗಿವೆ. ಅಂಗನವಾಡಿಗಳನ್ನು ನಾಶ ಮಾಡಲು ಪಯಾಯ ವ್ಯವಸ್ಥೆ ಹುಟ್ಟು ಹಾಕುತ್ತಿರುವುದು ಸರಿಯಲ್ಲ. ಬೇಡಿಕೆ ಈಡೇರದಿದ್ದರೆ ಗ್ರಾಮ ಸ್ವರಾಜ್ ಹಾಗೂ ಜನಪರ ಸಂಘಟನೆಗಳು ಹೋರಾಟಕ್ಕೆ ಬೆಂಬಲ ನೀಡುತ್ತವೆ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>