ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾವಗಡ: ವೃದ್ಧನ ಮೇಲೆ ಕರಡಿ ದಾಳಿ

Published 18 ಜನವರಿ 2024, 8:08 IST
Last Updated 18 ಜನವರಿ 2024, 8:08 IST
ಅಕ್ಷರ ಗಾತ್ರ

ಪಾವಗಡ: ತಾಲ್ಲೂಕಿನ ಸಾಸಲಕುಂಟೆ ಬಳಿ ಬುಧವಾರ ವೃದ್ಧರೊಬ್ಬರ ಮೇಲೆ ಕರಡಿ ದಾಳಿ ನಡೆಸಿ ಗಾಯಗೊಳಿಸಿದೆ.

ಆಂಧ್ರಪ್ರದೇಶದ ಕುಂದರ್ಪಿ ಮಂಡಲ ತುಮಕುಂಟೆ ಗ್ರಾಮದ ಈರ ನಾಗಪ್ಪ (60) ದಾಳಿಗೊಳಗಾದವರು.

ಸಂಕ್ರಾಂತಿ ಹಬ್ಬಕ್ಕಾಗಿ ಸಂಬಂಧಿ ಮನೆಗೆ ಬಂದಿದ್ದರು. ಗ್ರಾಮದ ಹೊರವಲಯದಲ್ಲಿ ಬಸ್‌ಗೆ ಕಾಯುತ್ತಿದ್ದಾಗ ಕರಡಿ ದಾಳಿ ಮಾಡಿ ತಲೆ, ಮುಖವನ್ನು ಗಾಯಗೊಳಿಸಿದೆ.

ಗ್ರಾಮದ ಬಳಿ ಕರಡಿಯ ಹಾವಳಿ ಹೆಚ್ಚಾಗಿದೆ. ದಿನವಿಡೀ ಕರಡಿಗಳು ಸಂಚರಿಸುತ್ತಿರುತ್ತವೆ. ಇಲಾಖಾ ಅಧಿಕಾರಿಗಳು ಕರಡಿ ಹಿಡಿದು ಬೇರೆಡೆ ಬಿಡಬೇಕು ಎಂದು ರಾಜಣ್ಣ, ವೀರಾಂಜನೇಯ, ನಾಗರಾಜು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT